Sunday, June 2, 2024

ಗೆಳೆಯರ ಬಳಗ ಹಾಗೂ ಆಡಿನ ಕುಟುಂಬದವರನೇತೃತ್ವದಲ್ಲಿ ಹಮ್ಮಿಕೊಂಡ ನಿವೃತ್ತರಿಗೆ ಸನ್ಮಾನದ ಕಾರ್ಯಕ್ರಮದಲ್ಲೊಂದು ಸುತ್ತು.

ಗೆಳೆಯರ ಬಳಗ ಹಾಗೂ ಆಡಿನ ಕುಟುಂಬದವರ
ನೇತೃತ್ವದಲ್ಲಿ ಹಮ್ಮಿಕೊಂಡ ನಿವೃತ್ತರಿಗೆ ಸನ್ಮಾನದ ಕಾರ್ಯಕ್ರಮದಲ್ಲೊಂದು ಸುತ್ತು.
          ಧಾರವಾಡದ ಸಾಧನಕೇರಿಯಲ್ಲಿ ನಿಂತು ಒಂದು ಕಲ್ಲು ಒಗೆದರೆ ಅದು ಒಬ್ಬ ಕವಿಯ ಮೇಲೆ ಬೀಳುತ್ತದೆ ಎನ್ನುವ ಮಾತೊಂದಿದೆ.  ಹಾಗೆಯೇ ಗುಳೇದಗುಡ್ಡದ ಪಕ್ಕದಲ್ಲಿರುವ  ಶಿರೂರಿನಲ್ಲಿ ಒಂದು ಕಲ್ಲು ಒಗೆದರೆ ಅದು ಒಬ್ಬ ಕೆ ಎಸ್ ಆರ್ ಟಿ ಸಿ ನೌಕರನ ಮೇಲೆ ಬೀಳುತ್ತದೆ ಎನ್ನುವಷ್ಟು ಡ್ರೈವರ ಕಂಡಕ್ಟರ್  ಶಿರೂರನಲ್ಲಿ ಇದ್ದಾರೆ ಅನ್ನುವುದು ವಿಶೇಷ. ಆದರೆ ಇತ್ತೀಚೆಗೆ ಎಲ್ಲಾ ಹುದ್ದೆಗಳಲ್ಲೂ ಅದ್ಭುತವಾದ ಸಾಧನೆ ಮಾಡಿದವರೂ ಇದ್ದಾರೆ ಆ ಮಾತು ಬೇರೆ.
      ಇವತ್ತಿನ ದಿನ ಕೆ ಎಸ್ ಆರ್ ಟಿ ಸಿ ಯಲ್ಲಿ ಸಾರ್ಥಕ ಸೇವೆ ಸಲ್ಲಿಸಿ  ನಿವೃತ್ತರಾದ ಮಲ್ಲಪ್ಪ ಆಡಿನ ರವರ ಸಮಾರಂಭದಲ್ಲಿ ಭಾಗವಹಿಸುವ ಅವಕಾಶ ನನಗೆ ದೊರಕಿತು . ಅದನ್ನು ಇಲ್ಲಿ ಹಂಚಿಕೊಳ್ಳುವ ಪ್ರಯತ್ನ ಮಾಡಿದೆ. ಮುಲ್ಲಾಸಾಬಿಗೂ ಗೋಕುಲಾಷ್ಟಮಿಗೂ  ಏನು ಸಂಬಂಧ ಎನ್ನುವಂತೆ ಗೌಡರ ಸರ್,  ಇಲ್ಲಿ ? ಎನ್ನುವ ಪ್ರಶ್ನೆಗೆ ಉತ್ತರವಾಗಿ ನಾಲ್ಕು ಸಾಲು ಬರೆಯಲು ಪ್ರಾರಂಭಿಸಿದೆ. ಅದಕ್ಕಾಗಿ ಈ ನಾಲ್ಕು ಸಾಲುಗಳು. ನಮ್ಮದೆ ಸಂಸ್ಥೆಯಲ್ಲಿ ಎನ್ ಎಸ್ ಹಿರೇಮಠ ಸಮಾಜ ಶಾಸ್ತ್ರ ಉಪನ್ಯಾಸಕರು ಮೇ  31 ರಂದು ನಿವೃತ್ತಿಯಾದರು, ಅವರೂ ಮೂಲತಃ ಶಿರೂರನವರೆ .ಅಲ್ಲದೆ ಗೆಳೆಯರ ಬಳಗದಲ್ಲಿರುವ ಬಹುತೇಕರು ಅಂದರೆ.ನಿವೃತ್ತ ಸಮಾಜಶಾಸ್ತ್ರ ಉಪನ್ಯಾಸಕರಾದ  ಡಾ॥ ಸಿ ಎಮ್ ಜೋಶಿಯವರು ,ಡಾ॥ಭೀಮನಗೌಡ ಪಾಟೀಲ, ಸಂಗಮ ಸರ್, ಡಾ।ಸಂತೋಷ ಕಾಳನ್ನವರು ,ಹೆಚ್ ಎಸ್ ಘಂಟಿ, ಸಣ್ಣ ವೀರಣ್ಣ ದೊಡಮನಿಯಂತಹ  ಘಟಾನುಗಟಿ ಹಿರಿಯರಿರುವ ,ನಮ್ಮ ಪರಮಾಪ್ತರೇ ಸೇರಿದ ಈ ಸಮಾರಂಭದಲ್ಲಿ  ಭಾಗವಹಿಸಲು ನಮಗೂ ಒಂದು ಅವಕಾಶವು ನಮ್ಮದೆ ಸಂಸ್ಥೆಯಿಂದ ಸನ್ಮಾನಿಸಲ್ಪಡುವ ನಾಗಯ್ಯ ಹಿರೇಮಠರಿಂದ ನಮಗೆ ದೊರಕಿತ್ತು, ಹಾಗಾಗಿ ನಾರು ಹೂವಿನ ಸಂಘ ಮಾಡಿ ದೇವರಿಗೆ ಏರಿತು ಎನ್ನುವ ಹಾಗೆ ಈ ರವಿವಾರ ಸಾರ್ಥಕವಾಯಿತು.
       ಸರಕಾರಿ ಇಲಾಖೆ ಯಾವುದಾದರೇನು ! ಅರವತ್ತು ವರ್ಷಕ್ಕೆ ಆಚೆ ಬರಲೆಬೇಕು ಇದು ನಿಯಮ. ಆದರೆ ಹೇಗೆ ಬಂದರು ಎನ್ನುವುದೇ ಮುಖ್ಯವಾದ ವಿಷಯ ತಾವು ಸೇವೆ ಸಲ್ಲಿಸಿದ ಇಲಾಖೆಯಲ್ಲಿ ಎಂಥಹ ಸೇವೆ ಸಲ್ಲಿಸಿದರು ಎನ್ನುವುದು ಇಲ್ಲಿ ಮಹತ್ವದ ಸ್ಥಾನ ಪಡೆಯುತ್ತದೆ.ಇಲ್ಲಿ ಸನ್ಮಾನಗೊಂಡ ಮಲ್ಲಪ್ಪ ಆಡಿನರವರು ಅಪಘಾತರಹಿತ ಸೇವೆಗೆ ಶ್ರೇಷ್ಠ  ಪದಕ ಪಡೆದು ಬಂದವರು ಅಲ್ಲದೆ ಸದೃಡವಾದ ದೃಢವಾದ ದೇಹವನ್ನು ಜೋಪಾನವಾಗಿಟ್ಟುಕೊಂಡು ಹುದ್ದೆಯಿಂದ ಬಿಡುಗಡೆ ಮಾಡಿಕೊಂಡವರು. ಅಂತಹ ನಿವೃತ್ತರ ಸಮಾರಂಭಕ್ಕೆ ನಾವು ನಮ್ಮ ಸಹೋದ್ಯೋಗಿಗಳ ಜೊತೆಗೆ ಶಿರೂರ ದಾರಿ ತುಳಿದದ್ದು ಒಂದು ವಿಶಿಷ್ಟ ಅನುಭವ.
         ಅದು ಸಂಬಂಧಗಳನ್ನು ಬೆಸೆಯುವ ಜೇನುಹುಳಗಳು ದಂಡು ಆಡಿನ ಮನೆತನದ ತುಂಡು. ಒಂದು ಕಾಲದಲ್ಲಿ ಶಿರೂರ ಆಡಿನ ಮಲ್ಲಪ್ಪನ ಹೆಸರು ಹೇಳಿದರೆ ಹುಬ್ಬೇರಿಸುವ ಹೆಸರು ,ರಾಜಕೀಯದಲ್ಲಿ ಕರ್ನಾಟಕ ಕಾಂಗ್ರೆಸ್ಸಿನ ಹುರಿಯಾಳು ಎಂದು ಸಣ್ಣವರಿದ್ದಾಗ  ಕೇಳಿದ ನೆನಪು.ಆ ಮನೆತನದವರ ಸಂಬಂಧಿಕರ ತೋಟದ ಮನೆಯಲ್ಲಿ ಹಾಕಿದ ಪೆಂಡಾಲ ಸೇರಿಕೊಂಡಾಗ ಹನ್ನೆರಡು ಗಂಟೆ ಸಮಯವಾಗಿತ್ತು. ಅದಾಗಲೇ ಕಾರ್ಯಕ್ರಮ ಪ್ರಾರಂಭವಾಗಿತ್ತು ದೋತಿ ಶರ್ಟನಲ್ಲಿ ಪತ್ನಿಯ ಪಕ್ಕದಲ್ಲಿ ಕುಳಿತ ಮಲ್ಲಪ್ಪನನ್ನು ನೋಡಿದೆ... ಪ್ರಾಯಶಃ ನಾವು ತಪ್ಪಾದ ಕಾರ್ಯಕ್ರಮದಲ್ಲಿ ಪ್ರವೇಶ ಪಡೆದ ಅನುಭವವಾಯಿತು ಅದು ಮದುವೆ ಮಂಟಪವಾ ಅಥವಾ ನಿವೃತ್ತಿ ಹೊಂದಿದದವರ ಸನ್ಮಾನದ ಮಂಟಪವಾ ಅಂತಾ  ! ಏಕೆಂದರೆ ದಂಪತಿಗಳ ಆರೋಗ್ಯದ ಗುಟ್ಟು ಅವರು ಮಾಡಿದ ತೋಟವೆ ಎನ್ನುವುದು ಅರ್ಥವಾಗಲು ತಡವಾಗಲಿಲ್ಲ . ಯಾವನು ಕ್ರೀಯಾಶೀಲನೋ ಆತನೆ ಪಂಡಿತ ,ಶ್ರೀಮಂತ, ಆರೋಗ್ಯವಂತ, ಎನ್ನುವುದನ್ನು ವೇದಿಕೆಯು ಸಾಧರಪಡಿಸುತಿತ್ತು.ಅಲ್ಲಿಯೇ ಕುಳಿತ ನಾಗಯ್ಯ ಹಿರೇಮಠ್ ಕರಿ ಕೋಟಿನಲ್ಲಿ  ಅದೆ ತಾನೆ ವಾದ ಮಾಡಿಬಂದ ಕಿರಿಯ ವಕೀಲನನ್ನೂ ಮೀರಿಸುವ ಉತ್ಸಾಹದಲ್ಲಿದ್ದದ್ಥು ನೋಡಿ, ವಯಸ್ಸಿಗೂ ಸವಾಲು ಹಾಕಬಹುದೆನೆಸಿತು.ಅಂದರೆ ನಿವೃತ್ತಿ ಎನ್ನುವದೊಂದು ನಂಬರ ಗೇಮ್.ಪಕ್ಕ ಬದಲಿಸಿದರೆ ಪರ್ಯಾವರಣ ನಿರ್ಮಿಸಬಹುದೆನ್ನುವದನ್ನು ರುಜುವಾತು ಮಾಡಿದ್ದೇ ಇಂದು ಸನ್ಮಾನಗೊಂಡವರ ಕ್ರೀಯಾಶೀಲರ ಸಮಾರಂಭ  .ಇಂತಹ ಕಾರ್ಯಕ್ರಮದಲ್ಲಿ ನೀಡಿದ ಅನಿರೀಕ್ಷಿತ ಆಹ್ವಾನ ನನ್ನನ್ನೂ  ಕೆಲ ಸಮಯ ವಿಚಲಿತನನ್ನಾಗಿ ಮಾಡಿತು. ಆದರೂ ಆಡಿನ ಬಳಗದಲ್ಲಿ ಮಾತಾಡಿದೆ ನನಗೆ ತಿಳಿದಷ್ಟು ಅದು ಬೇರೆ ವಿಷಯ .ಅವರದೆ ಬಳಗದ ಮಲ್ಲಪ್ಪ ಆಡಿನರವರ ಆರನೆ ಕ್ಲಾಸ ಓದುವ ಮೊಮ್ಮಗಳ ಅರಳು ಹುರಿಯುವಂತಹ ಮಾತೆಗೆ ನಿರೂಪಕರು ನನಗೆ ಹೇಳಿದ ಸಾಹಿತಿ ಪಟ್ಟ ಕೆಳಗಿಟ್ಟು ಆ ಪುಟ್ಟ ಕಂದಮ್ಮನ ಆತ್ಮವಿಶ್ವಾಸದ ಮಾತಿನ ಮುಂದೆ ನಾ ಶರಣಾಗಿ ಬೆಳೆಯುವ ಸಿರಿಯನ್ನು ಮೊಳಕೆಯಲ್ಲಿ ಕಂಡು ಸಂತೋಷ ಪಟ್ಟೆ.
ವಂದನೆಗಳೊಂದಿಗೆ🙏🙏🙏🙏🙏

















No comments:

Post a Comment

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...