ನನ್ನ ಹೊನ್ನ ಹಾನಾಪೂರ
ತನ್ನೊಡಲೊಳಗೊಂದು
ಪ್ರಕೃತಿಯ ವಿಸ್ಮಯ ಮಡಗಿದೆ ಇಲ್ಲಿ ।
ಬನ್ನಿರೋ ಈ ಪುರಕೊಮ್ಮೆ ಬಾಗಿ .
ಇದರ ಇನ್ನೊಂದು ಗೆಳತಿಯೇ
"ಕೆರೆ ಖಾನಾಪೂರ ".
ಅದರ ಉತ್ತರಕೊಂದು ಪರ್ವತಿ ಪುರ....!
ಇವೆರಡೂ ಪುರಗಳಿಗಿದಾಗಿದೆ
ಸಮ್ಮತ್ (ಎಸ್ ಪಿ) ಪುರ !
ಇದರ ದಕ್ಷಿಣದ ದಿಕ್ಕಿಗೆ ನಡೆದರೆ ಸಿಗುವವು
ಅಕ್ಕ ತಂಗಿ,ಹಾಲ ಹಂಡೆ ಜಲಪಾತಗಳ ಗಣ.
ಚಾರಣಿಗರಗಿವು ಹೇಳಿ ಮಾಡಿಸಿದ ತಾಣ.
ಗುಳೇದಗುಡ್ಡದ ದಕ್ಷಿಣ ದಿಕ್ಕಿಗೆ
ನಡೆಯಬೇಕು ನಾಲ್ಕೈದು ಕಿಲೋ ಮೀಟರ್
ಬುತ್ತಿ ಕಟ್ಟಿ ಪೂರ್ತಿದಿನ .
ಬಂಡೆಗಳು ಕೂಡಾ ಹೇಳುತ್ತವೆ.
ಬಂಗಾರದಂತಹ ಕಥೆ !
ಸುಂದರವಾದದ್ದು ಅಂದರೆ
ಬಂಗಲೆಗಳು ಅಷ್ಟೇ ಅಲ್ಲ ಕಣೋ !
ಬಾಗಿ ನಿಂತು ಬೀಗುವ
ಹಿರಿ ಬಂಡೆಗಳಿಗೂ ಉಂಟು
ಬಡಿವಾರದ ಬದುಕು ಅನುದಿನ....
ನರಿ ನಾಯಿ, ನವಿಲುಗಳಿಗೂ...!
ಗುಬ್ಬಿ ಗೀಜಗ ಗೊರವಂಕಗಳಿಗೂ
ಉಬ್ಬಿ ನಡೆಯುವ ಸ್ವಾತಂತ್ರ್ಯ ಉಂಟು
ತಬ್ಬಿಕೊಂಡು ನಡೆಯುವ
ದಿಬ್ಬಗಳಿಗೂ ತಾಳ್ಮೆ ಏನು ಕಡಿಮೆಯೇ.?
ಭೇದವಿಲ್ಲ.... ನಮ್ಮವರೆ... ನಮ್ಮವರೇ !
ಎಲ್ಲರೂ ಗೂಡು ಕಟ್ಟಿ ಹಾಡುವವರೇ !
ಕಿತ್ತುಕೊಳ್ಳಲು ನೀವೆ ಬರಬೇಕು ಅಲ್ಲಿ.
ಮಳೆಯಾದರೆ ಸಾಕು, ಹಂಡೆದಂತಹ ಹೊಂಡದಲ್ಲಿ
ಉತ್ತರ ದಿಕ್ಕಿಗೆ ಕಿತ್ತು ಹಾರುವವು
ಹಾಲಿನಂತಹ ನೊರೆ ಹಾಲು ಕೆನೆ .
ಬರದೆ ಹರಟೆ ಹೊಡೆದರೇನು ಮಾಡುವದು ?
ಮತ್ತೆ ನೀವು ಕಾಯಬೇಕು
ಮಳೆರಾಯ ಬುತ್ತಿ ಬಿಚ್ಚೊ ತನಕ.
ಜೋಗಕ್ಕೆ ಹೋಗಲು ಯೋಗ ಬೇಕು
ಹಾಲಹಂಡೆಯಲ್ಲಿಳಿಯಲು ಗುಂಡಿಗೆ ಬೇಕು.
ಕಣ್ಣು ತುಂಬಿಕೊಳ್ಳುವ ಮನಸ್ಸಿದ್ದರೇ ?
ಗಂಜಿಕೆರೆ ದಾಟಿ ,ಹೊಂಗೆ ಮರದಲ್ಲಿ ಬಾಗಿ
ಅಂಜದೆ ಕೊಳ್ಳದ ನಡುವೆ ನಡೆದರೆ
ಸಂಜೆಯೊಳಗಾಗಿ ಸ್ವರ್ಗ ಕಾಣುವಿರಿ
ದೇವರಾಣೆ ? ಇದು ಸತ್ಯ...ಸತ್ಯ ....🙏🙏🙏🙏🙏
https://www.facebook.com/share/r/7Bhq6uFbSLMvRqY1/?mibextid=oFDknk
No comments:
Post a Comment