ನಗು ಮುಖದ ನಾಗಯ್ಯ
ನೆತ್ತಿಯ ಬುತ್ತಿಗೆ ಸುತ್ತಿದ ಹತ್ತೂರು।
ಬತ್ತಲಿಲ್ಲ ಜ್ಞಾನದ ಚಿತ್ತ ।
ಮತ್ತೆ ಹೆಡೆ ಬಿಚ್ಚಿದ
ಎರಡನೆಯ ಗುರುವಾಗಿ॥
ಕಿತ್ತು ತಿನ್ನುವ ಬಡತನ
ಹತ್ತಲಿಲ್ಲ ಶೋಕಿಯ ದಾರಿ ।
ಚಿತ್ತ ಒಂದೆ... ಸಾಗಿದನು
ಕನಸುಗಳು ಬೆನ್ನೇರಿ ॥
ದುಡಿಮೆ,ಕಲಿಕೆ ಎಲ್ಲಾ ತರಹೇವಾರಿ॥
ಹೊಲವಿಲ್ಲದ ಹೈದ ನೆಲೆಯೇನು ಕಂಡಾನು
ಮೊಲದಂತೆ ಓಡುಬಲ್ಲನೇ ದೂರ ।
ಸುತ್ತಲೂ ಕುಹಕಗಳ ಮಳೆ
ಬತ್ತಲಿಲ್ಲ ಉತ್ಸಾಹದ ಚಿಲುಮೆ।
ಬಿತ್ತಿದ ಬೆವರ ಹನಿ
ಎತ್ತಿದ.... ಬಂಗಾರದಂತ ಹೊಲ॥
ಮಾಡಿದ ಚಿಂತನ,.... ಪಡೆದ
ನೂತನ ಮಾರ್ಗ॥
ಬಿತ್ತಿದ ಅರಿವಿನ ಬೀಜ
ಹರಗಿದ ಸಂಸ್ಕಾರದ ನೆಲ
ತೆಗೆದ ಸುಜ್ಞಾನದ ಫಲ।
ನಿಲುಕದ ಮರದಲ್ಲಿ
ಫಲ ಕಿತ್ತ ಪ್ರವೀಣ
ಛಲವೊಂದೆ ಕುಲ ....! ಕಲಿತ
ವಿದ್ಯೆಯೆಂಬ ಆನೆಯ ಬಲ,
ಸದ್ದಲ್ಲದೆ ಬಂತು... ಸಂಪತ್ತು
ಗೆದ್ದು ಬೀಗುತಿರುವನಿವತ್ತು॥
ತಿರುಗುವದು ಕಾಲಚಕ್ರ
ಒಮ್ಮೆಉಪ್ಪರಗಿ ಮತ್ತೊಮ್ಮೆ ತಿಪ್ಪೆ
ಒಪ್ಪಿ ನಡೆದವನೀಗ ಎಲ್ಲರಿಗೂ ಹಿರಿಯ
No comments:
Post a Comment