Thursday, October 10, 2024

ವೃತ್ತಿಯ ಗೌರವ ಹೆಚ್ಚಿಸಿದವರು

              ಅಂದು ದಿನಾಂಕ 10.10.2024, ನಮ್ಮ ಕಾಲೇಜಿನ ಪ್ರಭಾರ ಪ್ರಾಚಾರ್ಯ ವಿಠ್ಠಲ ಕಳಸಾ ರವರ ವಾಟ್ಸ ಪ್ ಸಂದೇಶ "ಆತ್ಮೀಯರೇ ತಮಗೆಲ್ಲರಿಗೂ ತಿಳಿದ ಹಾಗೆ ನಾಳೆ ನಾಗಮ್ಮ ಅಕ್ಕ *peon* ಹುದ್ದೆಯಿಂದ ** *ಎಸ್ ಡಿ ಎ* ಹುದ್ದೆಗೆ ಲಾಯದಗುಂದಿ ಸರ್ಕಾರಿ ಪ್ರೌಢಶಾಲೆಗೆ ಹಾಜರಾಗುತ್ತಿದ್ದಾರೆ.  ಈ ಶುಭ ಸಮಾರಂಭಕ್ಕೆ ಸಾಕ್ಷಿಯಾಗಲು ತಮ್ಮೆಲ್ಲರನ್ನು ಆಮಂತ್ರಿಸಿದ್ದಾಳೆ. ದಯಮಾಡಿ ಎಲ್ಲರೂ ಬೆಳಿಗ್ಗೆ 11 ಗಂಟೆಗೆ ಹಾಜರಾಗಿ ಅಕ್ಕನಿಗೆ ಬಿಳ್ಕೊಟ್ಟು ಶುಭಕೋರೋಣ,ಬನ್ನಿ ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸೋಣ" ನೋಡಿ, ನಾಗಮ್ಮ ನ ಕರ್ತವ್ಯ ಬದ್ಧತ,  ಕಾರ್ಯ ತತ್ಪರತೆ ಒಂದು ಕ್ಷಣ ಮನಪಟಲದ ಮೇಲೆ ಸುಳಿದು ಹೋದವು.22 ವರ್ಷದ ಅವಳ ಸುದೀರ್ಘ ಸೇವೆಯಲ್ಲಿ ತನ್ನ ವೃತ್ತಿ ಗೌರವ ಎತ್ತರಿಸಿದ ರೀತಿ ಇಂದು ನನ್ನನ್ನು ತಲೆ ಭಾಗುವಂತೆ ಮಾಡಿತು. ಗಾಂಧೀಜಿಯವರನ್ನು ಯಾರೋ ಒಬ್ಬರು ಕೇಳಿದರಂತೆ "ಸರ್  ಒಂದು ವೇಳೆ ನೀವು ಸಪಾಯಿ ಕರ್ಮಚಾರಿಯಾದರೆ ಏನು ಮಾಡುತ್ತೀರಿ " ಎಂದು, ಆಗ ಗಾಂಧೀಜಿಯವರ ಹೇಳಿದರಂತೆ  " ನಾನು ನನಗೆ ವಹಿಸಿದ ಓಣಿಯನ್ನು  ಇತರೆಲ್ಲ ಓಣಿಗಿಂತ ಸ್ವಚ್ಛ ವಾಗಿ ಇಟ್ಟುಕೊಳ್ಳಲು ಬಯಸುತ್ತೇನೆ' ಎಂದರಂತೆ.ಪ್ರಾಯಶ: ಈ ಮಾತು ನಾಗಮ್ಮ ಅಕ್ಕನಿಗೂ ಆನ್ವಯಿಸುತ್ತೊ ಏನೂ.? ಸರಿಯಾಗಿ 11.00 ಗಂಟೆಗೆ ಸುಮಾರಿಗೆ ಹಾಜರ ಪಡಿಸಲು ಬಂದ ಗಣ್ಯ ವ್ಯಕ್ತಿ ಗಳೇ ಇದಕ್ಕೆಲ್ಲ ಸಾಕ್ಷಿ.ನಿವೃತ್ತ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಮೇಶ ದಡ್ಡಿ, ಹಾಲಿ ತೋಗುಣಸಿ ಮುಖ್ಯೋಪಾಧ್ಯಾಯ ಬಿ.ಎಸ್ ಕವಿಶೆಟ್ಟಿ, ಬಾಲಕಿಯರ ಸರ್ಕಾರ ಪ.ಪೂ.ಕಾಲೇಜಿನ ಉಪಪ್ರಾಚಾರ್ಯ, ಎಮ್ ಪಿ ಮಾಗಿ, ಹಳದೂರು ಸರ್ಕಾರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿಯರಾದ ಶಾರದಾ ಪಂಚಾಕ್ಷರಿಮಠ, ನಿವೃತ್ತ ಮುಖ್ಯೋಪಾಧ್ಯಾಯರಾದ ಎಚ್ ಎನ್ ಗುರಿಕಾರ, ನಿವೃತ್ತ ಉಪನ್ಯಾಸಕರಾದ ನಾಗಯ್ಯ ಹಿರೇಮಠ,  ಕಟಗೆರಿ ಪ.ಪೂ.ಕಾಲೇಜಿನ ಉಪನ್ಯಾಸಕ ಲೋಕಪುರ ಸರ್, ದೈಹಿಕ ಶಿಕ್ಷಕ ಚವ್ಹಾಣ ಸರ್,ಅಲ್ಲದೆ ನಮ್ಮ ಸಂಸ್ಥೆಯ ಪ್ರಾಚಾರ್ಯ ವಿಠ್ಠಲ ಕಳಸಾ ಉಪಪ್ರಾಚಾರ್ಯ ಮುದುಕವಿ ಸರ್,ಅಲ್ಲದೆ ಕಾಲೇಜಿನ ಉಪನ್ಯಾಸಕ ಬಳಗ,ಶಿಕ್ಷಕ ವೃಂದ,ಬೋಧಕೇತರ ಸಿಬ್ಬಂದಿ, ಭಾಗವಹಿಸಿದ, ಆ ಹಾಜರಾಗುವ ಸನ್ನಿವೇಶ, ಹಬ್ಬದ  ರಜೆಯ ಅವಧಿಯಲ್ಲಯೂ ಹಬ್ಬದ ವಾತಾವರಣ ಸೃಷ್ಟಿಸಿದ ರೀತಿಯು ನಿಜವಾಗಿಯೂ ನಾಗಮ್ಮ ಅಕ್ಕನ ಕರ್ತವ್ಯ ಬದ್ಧತೆಗೆ,ಸೇವಾ ನಿಷ್ಠೆಗೆ ಹಿಡಿದ ಕೈಗನ್ನಡಿ.ಈ ನಾಗಮ್ಮ ನ ಕರ್ತವ್ಯ ಪ್ರಾರಂಭ ವಾಗುವುದು ಮುಂಜಾನೆ ಎಂಟು ಗಂಟೆಗೆ, ಅವಳು ಮನೆಗೆ ಹೋಗುವುದು ಸಂಜೆ ಏಳರಿಂದ ಎಂಟರವರೆಗೆ.ಒಂದು ವೇಳೆ ಸಂಸ್ಥೆಯ ಉದ್ಯೋಗಿಗಳು ಬೈಕ ಹಚ್ಚಿ ಆಫೀಸಿನ ಕೆಲಸ ಅಥವಾ ವೈಯಕ್ತಿಕ ಕೆಲಸಕ್ಕೆ ಹೋಗಿ ಲೇಟಾಗಿ ಬಂದರೆ ! ಕಾಲೇಜಿನ ಗೇಟಿ ಲಾಕ ಆಗಿರುತ್ತದೆ  ಆ ಸನ್ನಿವೇಶ ದಲ್ಲಿಯೂ ಪೋನ್ ಹಚ್ಚಿದರೆ ಬೇಸರವಿಲ್ಲದೆ ಮನೆಯಿಂದ ಬಂದು ಗೇಟಿನ ಬಾಗಿಲು ತಗೆಯುವ ಅವಳ ಉದಾರಗುಣ ನಿಜವಾಗಿಯೂ ಮೆಚ್ಚಲೇ ಬೇಕು.ನಾಗಮ್ಮ ಪ್ರೌಢ ವಿಭಾಗದ ಪ್ಯೂನ ಆಗಿದ್ದರೂ ಪದವಿ ಪೂರ್ವ ಕಾಲೇಜಿನಲ್ಲಿ ಪ್ಯೂನ ಇಲ್ಲದಾಗ ಎರಡೂ ವಿಭಾಗದ ಕಾರ್ಯ ನಿರ್ವಹಿಸಿದ ರೀತಿ,  ಅದಕ್ಕಾಗಿ ಕಾಲೇಜಿನಿಂದ ಯಾವುದೆ ನೀರಿಕ್ಷೆ ಇಲ್ಲದೆ ನಿಸ್ವಾರ್ಥ ಸೇವೆ ಸಲ್ಲಿಸಿದ ಅವಳ ಸೇವ ಸ್ಮರಿಸುವುದಾದರೂ ಹೇಗೆ ? ಇಷ್ಟೆಲ್ಲ ಸಲ್ಲಿಸಿದ ನಾಗಮ್ಮನಿಗೆ ಇವತ್ತಿನ ಗಣ್ಯರು ತೋರಿದ ಆತ್ಮೀಯತೆ, ಪ್ರೀತಿಯ ಮುಂದೆ ಯಾವ ಪ್ರಶಸ್ತಿಯು ಸಮನಾಗಲಾರದು ಎನ್ನುವುದು ನನ್ನ ಭಾವನೆ.ಇದು ಪ.ಪೂ.ಕಾಲೇಜಿನ ಕಾಲೇಜಿನ ಜೊತೆ ನಾಗಮ್ಮ ನ ಒಡನಾಟ ವಾದರೆ ತಮ್ಮದೆ ಸಂಸ್ಥೆಗೆ ಅವಳು ಸಲ್ಲಿಸಿದ ಸೇವೆ ಅದು ಅಮೋಘ ವಾದುದು ಕಲವೇ ದಿನಗಳ ಹಿಂದೆ ಪ್ರೌಢ ವಿಭಾಗಕ್ಕೆ ಉಪಪ್ರಾಚಾರ್ಯ ರಾಗಿ ಆಗಮಿಸಿದ ಮುದಕವಿ ಸರ್, ನಾಗಮ್ಮ ನಮ್ಮ ಸಂಸ್ಥೆಯಿಂದ ಹೋಗಿದ್ದು ನನ್ನ  ಬಲ ತೋಳು ಹೋದಂತೆ ಆಗಿದೆ  ಎನ್ನುವ ಅವರ ಮಾತು ಅಕ್ಷರಶಃ ಸತ್ಯ. ಅನ್ನ ಆಗಿದೆ ಎಂದು ನೋಡಲು ಪಾತ್ರೆಯ ಎಲ್ಲಾ ಅಗಳು ನೋಡಬೇಕಿಲ್ಲ ಒಂದಗಳೆ ಸಾಕು. ಇಡಿ ಸಂಸ್ಥೆಯ ಅಂಕಿ ಸಂಖ್ಯೆಗಳು ಅವಳ ಬಾಯಲ್ಲಿ ಪಾಟಾ ಪಟ್,ನೂರು ವರ್ಷದ ದಾಖಲೆಗಳನ್ನು ಕೆಲವು ಸಮಯದಲ್ಲಿ ಹಿಡಿದು ತರಬಲ್ಲಳು ಇಂತಹ ನೌಕರಳು ಸಂಸ್ಥೆಯಿಂದ  ಹೊರಹೋಗುತ್ತಾಳೆಂದರೇನು !, ಉಪಪ್ರಾಚಾರ್ಯರ ಉದ್ಘಾರ ಅತಿಶಯೋಕ್ತಿಯೇನಲ್ಲ.
ಅವಳ ಕಾರ್ಯ ಗುಣಗಾನ ಮಾಡಿದವರು ಒಬ್ಬಿಬ್ಬರಲ್ಲ.ಹಿರಿಯ ಶಿಕ್ಷಕ ರಾಜಶೇಖರ ಪಾಗಿ ಬಿ.ಎಸ್.ಕವಿಶೆಟ್ಟಿ,ಮುಖ್ಯೋಪಾಧ್ಯಾಯಿನಿಯರಾದ ಪಂಚಾಕ್ಷರಿಮಠ ಮೇಡಂ, ನಿವೃತ್ತ ಉಪನ್ಯಾಸಕರಾದ ರಮೇಶ ದಡ್ಡಿ.ಇತ್ಯಾದಿ.ಈ ಸಂದರ್ಭ ದಲ್ಲಿ ಗೆಳೆಯ ಕವಿಶೆಟ್ಟಿ ನೀವು ಒಂದೆರಡು ಮಾತನಾಡಿದ್ದಾರೆ ಎನ್ನಬೇಕೆ ? ಪ್ರಾಯಶ ಅವರು ನಾವು 1994 ರಲ್ಲಿ ಪ್ರೌಢಶಾಲೆಯ ಸಹ ಶಿಕ್ಷಕರಾಗಿ ಸೇವೆಗೆ ಸೇರಿದ್ದು ಎನ್ನುವುದು ಒಂದು ಕಾರಣವಾದರೆ ಇನ್ನೂಂದು ದೀರ್ಘ ಅವಧಿಯಲ್ಲಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೇವೆ ಸಲ್ಲಿಸಿದ್ದು ಇನ್ನೂಂದು ಕಾರಣ .ಇರಲಿ ಇಲ್ಲಿ ಈಗಾಗಲೆ ನಮ್ಮ ಸಂಸ್ಥೆಯ ಮುಖ್ಯಸ್ಥರು ಮಾತನಾಡಿದ್ದಾರೆ. ಬಹುತೇಕರು ಸಂಸ್ಥೆಯ ಮುಖ್ಯಸ್ಥರಾಗಿ ಮಾತನಾಡಲು ಅವಕಾಶ ನೀಡಿದ್ದು ಸಮಯೋಚಿತವಾಗಿತ್ತು ಹಾಗಾಗಿ ನಾನು ನನ್ನ ಅಭಿಪ್ರಾಯ ಹಂಚಿಕೊಳ್ಳಲಿಲ್ಲ ಈಗ ಹಂಚಿಕೊಳ್ಳುವ ಮನಸ್ಸಾಯಿತು ಹೀಗಾಗಿ ಹಂಚಿಕೊಂಡೆ. ಇದೆ ರೀತಿಯಲ್ಲಿ  ಅಭಿಪ್ರಾಯವನ್ನು  ಅಂದು ನಾನು ಮೂಡಲಗಿ ಪಿ.ಯು ಕಾಲೇಜಿಗೆ ಜಾಗೃತಾದಳದ ಸದಸ್ಯ ನಾಗಿ ಹೋದಾಗ SS ಪಾಂಡು ಎನ್ನುವ ಪ್ಯೂನ ಕುರಿತು ವೃತ್ತಿ ಗೌರವ ಎತ್ತರಿಸಿದವರು ಎನ್ನುವ ಶಿರ್ಷಿಕೆಯಲ್ಲಿ ಬರೆದಿದ್ದೆ. ಆವಾಗ ನಾನು ನಾಗಮ್ಮ ಳನ್ನು ನೆನೆಪು ಮಾಡಿಕೊಂಡಿದ್ದೆ ಸಹ.ಇವತ್ತಿನ ದಿವಸ ನಾಗಮ್ಮನಂತೆ ವೃತ್ತಿ ಗೌರವ ಎತ್ತರಿಸುವವರ ಸಂಖ್ಯೆಯು ಹೆಚ್ಚಾಗಬೇಕಾಗಿದೆ ಆ ಕಾರಣಕ್ಕಾಗಿ ಈ ಬರವಣಿಗೆ.ಏನೆ ಆಗಲಿ ದ್ವಿತೀಯ ದರ್ಜೆಯ ಸಹಾಯಕರಾಗಿ ಬಡ್ತಿ ಹೊಂದಿದ ನಾಗಮ್ಮ ಅಲ್ಲಿಯೂ ಇದೆ ರೀತಿಯ ಹೆಸರು ಮಾಡಿ ಹುದ್ದೆಯ ಗೌರವ ಹೆಚ್ಚಿಸಲಿ ಮತ್ತು ಅವರಗೆ  ದೇವರು ಆಯುರಾರೋಗ್ಯ ಕೊಟ್ಟು ದಯಪಾಲಿಸಲಿ ಎಂದು ಹಾರಿಸುವೆ.

1 comment:

  1. ನಿಸ್ವಾರ್ಥ ಸೇವೆಗೆ ಕೊನೆಯ ದಿನದಲ್ಲಿಯಾದರು ಫಲ ಸಿಗುತ್ತೆ ಅನ್ನೋದಕ್ಕೆ ನಾಗಮ್ಮಕ್ಕನೆ ಸಾಕ್ಷಿ ಸರ್.

    ReplyDelete

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...