ಜಡೆ ಬಿಟ್ಟು ಕೊಡೆ ಹಿಡಿದವನಲ್ಲ
ತೊಡೆ ತಟ್ಟಿ ತಿರುಗಿ ನಡೆದವನಲ್ಲ
ಕಂಡುಂಡುಟ್ಟವನು ಜಗದ ಧನಿ,ದ್ವನಿ ॥
ಯಾನದಲ್ಲಿ ಮಾನ ಉಳಿಸಿಕೊಂಡವನು
ಹಣವಿದ್ದು ಗುಣವುಳಿಸಿಕೊಂಡವನು
ಧ್ವನಿ ಇದ್ದು ಮೌನಿ, ಮಾನ್ಯವಾದವನು
ಕನಿ ಕೇಳದೆ ಮನಕೇಳುವನು ಈ ಮುನಿ ॥
ಭಾವಗಳಿಗೆ ಜೀವ ತುಂಬುವವನು
ಕಾಯ ಕಮಂಡಲ, ಕರ್ಮ ರುದ್ರಾಕ್ಷಿ
ಧರ್ಮ ವೊಂದೆ ಉದರದ ಭಕ್ಷ ಭೋಜ್ಯ
ಬದುಕಿನ ಮರ್ಮ ತಿಳಿದವನು ಈ ಮುನಿ ॥
ಬಣ್ಣ ಬದಲಿಸದೆ ಉಣ್ಣುವವನು
ಕಣ್ಣೊಳಗಿದ್ದು ಹೃದಯದಿಂದೇಳುವನು
ತನ್ನವರು ಭಿನ್ನರೆಲ್ಲರೂ ಇವನಿಗೊಂದೆ
ಬೆಣ್ಣೆಯಂತೆ ಕರಗುವನು ಈ ಭಾವಯಾನಿ ॥
No comments:
Post a Comment