Saturday, November 9, 2024

ಕಲಿಸುವವನ ಗೋಳು

ಹಸಿಯದ ಹಸುಳೆಗೂ ಹಾಲುಣಿಸುವ
ಹತಬಾಗ್ಯ ಹಸುಗಳು ನಾವೆಲ್ಲ ।
ಕುಸಿಯುತಿವೆ ಕೌಟುಂಬಿಕ ಕಂಬಗಳು
ಬೆಸೆಯುವ ಬಗೆ ಒಂದೇ ಸಹನೆಯಿಂದ॥

ಬೀದಿಬದಿಯ ಅಂಗಡಿ ಜಾದುವಿಗೆ
ಪೀದಾ ಆಗುವವರು ನೀವೆಲ್ಲಾ!
ಸತತ ಪಾಯಸ ನೀಡುವ ನಮಗೆ 
ಕುಹಕದ ಮಾತುಗಳು ತಪ್ಪಿಲ್ಲ॥

ಸಮಾಜ ಕಟ್ಟುವ ಕರ್ಮಿಗಳ
ನಮಾಜ್ ಒಂದೇ ದಾರಿ ಬಿಡಿ।
ಕಲಿಸುವ ಮನಗಳಿಗೆ ಸ್ವಾತಂತ್ರ್ಯ ಕೊಡಿ
ಕಲಿಸದೆ ನಟಿಸಿದರೆ ಗೋಲಿ ಹೊಡಿ ॥

ಜೊತೆಯಾಗಿ ನಡೆಯುವ ಮನಸ್ಸಿದೆ 
ಹಿತವಾಗಿ ನೀಡುವ ಹಾರೈಕೆ ಯಾಕಿಲ್ಲ ।
ಮಿನುಗುವ ಬಂಗಾರ ಒಂದೆ ಆಸ್ತಿ ಅಲ್ಲ 
ನೀವಿಟ್ಟಿರುವ ವಂಶ ದೀಪಾನೆ ಎಲ್ಲಾ॥

ಭತ್ತ ಬೆಳೆಯಲು ಭತ್ತದ ಬೀಜವೆ ಬೇಕು
ಕಬ್ಬಿನ ಬೆಳೆಗೆ ಯಾಕೆ ಹಪಹಪಿಸಬೇಕು ।
ನಾವು ನೀರು ಬಿಡುವವರು ಮಾತ್ರ 
ಬೇವು ಬೆಳೆದರೆ ನಾವೇ ಹೊಣೆಯಾಗಬೇಕು॥





No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...