ಬೂದಿಯೋಳ್ ಉದಯಿಸಿದ
ಬೆಂಕಿಯ ಕೊಳ್ಳಿ ಯಾರಿಟ್ಟರೊ
ಇದನು ಯಾರಿಟ್ಟರೊ ಗುಳೆ ಬಂದ
ಗುಡ್ಡದಲ್ಲಿ ತಂದು ಯಾರಿಟ್ಟರೊ॥
ಭಂಡಾರಿ ದೇಗುಲದ ಜ್ಞಾನವನುಂಡು
ಮಹದೇವನೆಂಬ ಗುಡ್ಡದ ಕಣವಿಯಲ್ಲಿ
ಹೂವಾಗಿ ಬೆಳೆದು ಹದವಾಗಿ ಅರಳಿ
ಹೂಗಾರ ಗುರುವಿನ ಹೂಮಾಲಿ ಇವನು॥
ಹರಿದ ಚಪ್ಪಲಿ ಮುದಡಿದಂಗಿಯ ಪೋರ
ಬರಿ ಬರಹ ಸಾಹಿತ್ಯದಕ್ಕರದ ಚೋರ
ತುಳಿದ ಸಂಗನ ಬಸವನ ಕನ್ನಡದ ನೆರಳು
ಬೆಳೆದ ಪದವಿ ಪೂರ್ವ ಶಿಕ್ಷಣದ ಗುರು ಇವನು॥
ನೀರುಬೂದಿಹಾಳದಾರದ ಯಾ...ಕೊಳ್ಳಿ
ನೂರು ಗುರುಗಳ ಮಾರ್ಗದ ದೀಪದ ಬಳ್ಳಿ
ಸಾವಿರ ವಿದ್ಯಾರ್ಥಿಗಳ ಮನ ಕರಗಿಸಿ
ಜೀವನ ಪಾಠ ಕಲಿಸಿದ ಗಾರುಡಿಗ ಇವನು॥
ಪ್ರಧಾನ ಆಚಾರ್ಯ ಎಷ್ಟು ವ್ಯವಧಾನ
ಕರ್ತವ್ಯ ದಾಚೆಗೂ ಕಾವ್ಯ ಕಟ್ಟುವ
ಹೊಸ ತಲೆಮಾರಿನ ಕವಿವರ್ಯ
ಸಾಹಿತ್ಯದ ಕವಲುಗಳ ಎಲೆಗಳಿವನು॥
ಯಲ್ಲವನು ಬಲ್ಲ ಸಾಹಿತಿ ಈ ಯಲ್ಲಪ್ಪ
ನೂರು ಕವಿಗಳ ಸಾವಿರ ಬರಹಗಳ ವಿಮರ್ಶೆ
ಪೋನ್ ನಲ್ಲಿ ಬೆರಳಾಡಿಸಿ ತಿರುವಬಲ್ಲ
ಬಗಿದಷ್ಟು ಸಾಹಿತ್ಯದ ಬಂಗಾರ ಇವನು ॥
ಬಂಗಾರದಂಥಾ ಮಾತು.ಸರ್ ಕವನ ಉತ್ತಮವಾಗಿದೆ.ಅಭಿನಂದನೆಗಳು.
ReplyDelete