Sunday, March 30, 2025

ನಿವೃತ್ತಿಗೆ ನಗೆ ಬುತ್ತಿ

ಇಳಿ ವಯಸ್ಸಿನ ಮನಸ್ಸು ಗಳಿಗೆ ತಿಳಿ ಹಾಸ್ಯ ನೀಡಿ ನಗೆಗಡಲಲ್ಲಿ ತೇಲಿಸಿದ ಅಧಿಕಾರಿ" 
     ಬಹುಶಃ ಅಧಿಕಾರಿಗಳೆಂದರೆ ದರ್ಪದ,ಹೆದರಿಸುವ ಮಾತುಗಳಿರುವವರು ಎನ್ನುವುದು ಸಾಮನ್ಯ ಕಲ್ಪನೆ ಆದರೆ ಈ ಮಾತು ಅರ್ಧ ಸತ್ಯ ವಾದರೂ ನಿನ್ನೆಯ ದಿನ ನಡೆದ ಹಿರಿಯ ಜೀವಿಗಳಗೆ ಸನ್ಮಾನಿಸುವ ಕಾರ್ಯಕ್ರಮದಲ್ಲಿ ನಡೆದದ್ದೆ ಬೇರೆ ಪ್ರತಿ ವರ್ಷ ನಿವೃತ್ತಲಾಗಲಿರುವ ಪ್ರಾಚಾರ್ಯರಿಗೆ ಹಾಗೂ ಉಪನ್ಯಾಸಕರಿಗೆ ಇತಿಹಾಸ ಮೌಲ್ಯ ಮಾಪನ ಕೇಂದ್ರ ದಲ್ಲಿ ಸನ್ಮಾನಿಸುವ ಲಘು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯ ಕ್ರಮದಲ್ಲಿ ಬೆಳಗಾವಿ ಜಿಲ್ಲೆಯ ಶಾಲಾ ಶಿಕ್ಷಣ (ಪದವಿ ಪೂರ್ವ) ಉಪನಿರ್ದೇಶಕರಾದ ಶ್ರೀ ಎಮ್ ಎಮ್ ಕಾಂಬಳೆ ಸಾಹೇಬರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.ಅವರು ಈ ಮೂಲಕ ಅಧಿಕಾರದಲ್ಲಿಯೂ ಪ್ರೀತಿಯ ನಗೆಯ ಹಬ್ಬಿಸುವ ಕಾರ್ಯ ಮಾಡಬಹುದು. ಎನ್ನುವದನ್ನು ಸಾಬೀತು ಮಾಡಿದರು ಅದನ್ನು ಇಲ್ಲಿ ಹಂಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನೆ.
   ಇವತ್ತಿನ ದಿನ ನಾವೆಲ್ಲ ಒತ್ತಡದ ಬದುಕಿನಲ್ಲಿ ಇದ್ದೇವೆ ಅದನ್ನು ಮೀರಿಯೂ ನಗು ಮೊಗದಲ್ಲಿ ಕೆಲಸಮಾಡಬೇಕಾಗಿದೆ.ಆ ಒತ್ತಡದ ಬದುಕಿಗೆ  ಅಂತರ್ಜಾಲವೇ ಕಾರಣ ಎನ್ನುವುದನ್ನ ಬಹು ಮಾರ್ಮಿಕವಾದ ದೃಷ್ಟಾಂತದ ಮೂಲಕ ತಿಳಿಸಿದ್ದು ಎಲ್ಲರಿಗೂ ಹಿಡಿಸಿತು 
    ಇತಿಹಾಸದಲ್ಲಿ ನಾವು ಓದುವುದು ಮಾನವ ತನ್ನ ಮೂಲ ಅವಶ್ಯಕತೆ ಪೂರೈಸಿಕೊಳ್ಳಲು ನಾನಾತರಹದ ಅನ್ವೇಷಣೆ ಮಾಡಿದ. ಉದ್ದೇಶ ಇಷ್ಟೆ ! ಬದುಕನ್ನು ಸುಲಬ ಮಾಡಿಕೊಳ್ಳಬೇಕಾಗಿತ್ತು. ಬದುಕನ್ನು ಸಲಬಮಾಡಿಕೊಳ್ಳಲು ಮಾಡಿದ ನಿರಂತರಾನ್ವೇಷಣೆಯೆ ನಾಗರಿಕತೆ ಎಂದರೆ ತಪ್ಪಾಗಲಾರದು .ಮಾನವನ ಮೂಲ ಪುರುಷರಾದ ಹೊಮಿನಾಯ್ಡೆಗಳು ಮರವಾಸಿಗಳು ಆದರೆ ಭೂಮಿ ಹಲವಾರು ಶೀತ ಯುಗಗಳನ್ನು  ಕಂಡಿತು,ಸುಮಾರು 2.5 ಲಕ್ಷ ವರ್ಷಗಳ ಹಿಂದೆ ಅದು ಕೊನೆಯ ಶೀತಯುಗ ಕಂಡಿತು.ಫಲಶೃತಿಯಾಗಿ ಮರಗಳು ಕಡಿಮೆಯಾಗಿ, ಮಾನವ ನದಿ ಬಯಲು ಪ್ರದೇಶಗಳಿಗೆ ಬರಬೇಕಾಯಿತು.ಅಲ್ಲದೆ ತನ್ನ ಆಹಾರಕ್ಕಾಗಿ ಮಾಂಸ ಸೇವನೆ ಮಾಡಲು ಪ್ರಾರಂಭಿಸಬೇಕಾಯಿತು ಅಂದರೆ ಮಾನವ ಮೂಲತಹ ಮಾಂಸಾಹಾರಿ ಅಲ್ಲ
ಆ ಮಾತು ಬೇರೆ. ಇಲ್ಲಿ ಮಾನ್ಯ ಉಪನಿರ್ದೇಶಕರು ವೃತ್ತಿ ಬಾಂದವರ ಒತ್ತಡದ ಬದುಕಿನ ಜೀವನವನ್ನು ತಮ್ಮ ಹಾಸ್ಯ ಶೈಲಿಯಲ್ಲಿ ವಿವರಿಸದ ಬಗೆ ನನ್ನ ಗಮನ ಸೆಳೆಯಿತು. ಅದೇನೆಂದರೆ ಮನುಷ್ಯ ಹಣ್ಣು ಹಂಪಲಗಳು ಸಿಗದಾದಾಗ ಪ್ರಾಣಿಗಳ ಬೇಟೆ ಇಲ್ಲವೆ ಮೀನು ಹಿಡಿಯುವ ಕಾರ್ಯದ ಮೂಲಕ ಹೊಟ್ಟೆಯನ್ನು ತುಂಬಿಸಿಕೊಳ್ಳಲು ಮತ್ತು ಮೀನು ಹಿಡಿಯಲು ಬಲೆ ಹೆಣೆಯುವ ಕೌಶಲ್ಯ ಕಲಿತುಕೊಂಡ ಮತ್ತು ಆ ಸಂದರ್ಭ ದಲ್ಲಿ ಒಂದು ದಿನ ಮಾನವ ಒಂದು ಸರೋವರದಲ್ಲಿ ಬಲೆ ಬೀಸಿದ ಆಗ ನೂರಾರು ಮೀನುಗಳು ಬಲೆಗೆ ಬಿದ್ದವು ನೀರಿನಿಂದ ಬಲೆ ಹೊರತೆಗೆದಾಗ ಏನಾಗುತ್ತದೆ ? ಮೀನುಗಳು ವಿಲ ವಿಲ ಒದ್ದಾಡಿದವು ಮತ್ತು ಸಾಯುವ ಮುನ್ನ  ಹೀಗೆ ಹೇಳಿದವು. ನನ್ನ ಸಂತಿತಿಯನ್ನು ಬಲೆಯಿಂದ ಒದ್ದಾಡುವಂತೆ ಮಾಡಿದ ನಿನ್ನ ಸಂತತಿಯು ಮುಂದೊಂದು ದಿನ ಇದೆ ತೆರನಾದ "ಜಾಲ" ಅಂತರ್ಜಾಲ ದಿಂದ ವಿಲ ವಿಲ ಎಂದು ಒದ್ದಾಡಿ ಸಾಯಿಲಿ ಎಂದು ಶಾಪ ಹಾಕಿದವಂತೆ !!!! ಹಾಗಾಗಿ ಇಂದು ಅಂತರ್ಜಾಲ ಎಂಬ ಮಾಯಾಜಾಲದಲ್ಲಿ ಒದ್ದಾಡುತ್ತಿದ್ದಿವೆ ಎನ್ನುವ ಉಪನಿರ್ದೇಶಕರ ಮಾತಿಗೆ ಎಲ್ಲರೂ ನಗೆಗಡಲಲ್ಲಿ ತೇಲಿ ಹೋದರು. 
       ಅವರ ಮಾತಿನ ಶೈಲಿಯೇ ಅಂತದು, ಕಾರ್ಯಕ್ರಮ ಪ್ರಾರಂಭವಾಯಿತು ವೇದಿಕೆಯ ಮಧ್ಯ ಭಾಗದಲ್ಲಿ ಆಸಿನರಾಗಿರವ ಮುಖ್ಯ ಅತಿಥಿಗಳಾದ ಉಪನಿರ್ದೇಶಕರ ಮಾತಿನ ಸರದಿ ಕಾಕತಾಳಿಯವೊ ಏನೋ ಕಾರ್ಯ ಕ್ರಮ ನಿರೂಪಕರು ಅವರು ಕುಳಿತಲ್ಲಿಯೇ ಮಾತನಾಡಲು ಮೈಕ್ ನೀಡಿದರು ಆಗ ಉಪನಿರ್ದೇಶಕರು ನಿಮ್ಮ ಕಷ್ಟ ನಾನು ಅರ್ಥೈಸಿಕೊಂಡಿದ್ದೇನೆ ! ಏನು ಹೇಳಿ ! ನಾನು ಡಯಾಸ್ ಹಿಂದೆ ನಿಂತು ಮಾತನಾಡಿದರೆ ನಿಮಗೆ ಕಾಣುವದಿಲ್ಲವಲ್ಲ ಎನ್ನಬೇಕೆ ?ಸನ್ನಿವೇಶ ಗಳನ್ನು ಹೇಗೆ ಹಾಸ್ಯ ಮಯವಾಗಿ ಮಾಡಬಹುದು ಎನ್ನುವುದನ್ನ ತೋರಿಸಿಕೊಟ್ಟರು. ಮಾತು ಮುಂದುವರಿದಂತೆ ಮತ್ತೆ ಹಾಸ್ಯ ಮಯ ಸನ್ನಿವೇಶ ಎಂಟತ್ತು ಹತ್ತು ದಿನ  ನೀವು ಸುಖವಾಗಿದ್ದೀರಿ ಏಕೆ ಹೇಳಿ ? ಮತ್ತೆ ಮತ್ತೆ ಸಂತೆ ಚೀಲ ನಿಮ್ಮನ್ನು ಸುತ್ತುವದಿಲ್ಲ ,ಗಿರಣಿ ಕಡೆ ಓಡಬೇಕಿಲ್ಲ ಎಂದಾಗ ಮತ್ತೆ ನಗುವಿನ ಹಬ್ಬ... ಇದಕ್ಕೆ ಉಪನ್ಯಾಸಕಿಯರು ಹೊರತಲ್ಲ. ಎನ್ನುವ ಮಾತಿಗೆ ಅವರೆಲ್ಲ. ತಮ್ಮ ಪೂರ್ವಾಶ್ರಮ ನೆನಸಿಕೊಂಡು ನಕ್ಕಿದ್ದೆ ನಕ್ಕಿದ್ದು.ಇದರ ಜೊತೆಗ ಉಪನ್ಯಾಸಕರ ಕಾಳಜಿಯ ಮಾತು ಪ್ರಾರಂಭಿಸಿದರು ನೀವು ನಿವೃತ್ತಿ ಯಾಗುವಾಗ ನಿಮ್ಮ ಧರ್ಮ ಪತ್ನಿಯದೆ ಕೊಡಿ. ಕೆಲವು ದಿನಗಳ ಹಿಂದೆ ಒಬ್ಬರು ತಮ್ಮ ನಂತರದ ಪತ್ನಿಯದು ನೀಡಿದ್ದರು ಆಗ ಮೊದಲನೆಯ ಪತ್ನಿ ವಕಿಲರೊಂದಿಗೆ ಹಾಜರ್, ಹಾಗಾಗಿ ನಾನು ನಿಮ್ಮ ಮನೆಗೆ ಬಂದು ಖಚಿತ ಪಡಿಸಿಕೊಂಡು ಸಹಿ ಮಾಡುತ್ತೇನೆ ಎಂದಾಗ ಮತ್ತೆ ನಗೆಯ ಅಲೆ, ಇದರ ಜೊತೆಗೆ ಅವಸರದ ಅದ್ವಾನಗಳನ್ನು ತಿಳಿಸುತ್ತಾ ಬೇಗ ಹೊರಡಿ, ಲೇಟಾದರೆ ಪ್ರಾಚಾರ್ಯ ರಿಗೆ ಇಲ್ಲವೆ ಹಿರಿಯ  ಉಪನ್ಯಾಸಕರಿಗೆ ತಿಳಸಿ ಒತ್ತಡದ ಸನ್ನಿವೇಶವನ್ನು ನಿಭಾಯಿಸುವುದನ್ನು ವಿವರಿಸಿದರು   ಹಾಗೆಯೆ ಪಾಠ ಮಾಡಿದ ಉಪನ್ಯಾಸಕರನ್ನು ನೆನೆಯುವುದನ್ನು ಮರೆಯಲಿಲ್ಲಿ ಮತ್ತು ಅವರಲ್ಲಿಗೆ ಹೋಗಿ ಹರುದುಂಬಿಸಿದ್ದ ಸನ್ನಿವೇಶವನ್ನು ನೆನಪಿಸಿಕೊಂಡರು. ಬಹುತೇಕ ನಾನು ಇಲ್ಲಿಯವರೆಗೆ ಕೇಳಿದ ಅಧಿಕಾರಿಗಳ ಮಾತುಗಳಲ್ಲಿ ಹಾಸ್ಯದ ಮೂಲಕ ತನಗಿಂತ ಕಿರಿಯ ನೌಕರರನ್ನು ನಗೆಗಡಲಿನಲ್ಲಿ ತೇಲಿಸಿದ ಮೊದಲ ಮುಖ್ಯ ಅತಿಥಿ ಎಂದರೆ ತಪ್ಪೇನಿಲ್ಲ. ಉಪನ್ಯಾಸಕರು ಎಂದರೆ ಮಾತುಗಾರರು ಅವರಿಗೆ ಮಾತನಾಡಿ ಅಭ್ಯಾಸ , ಕೇಳುವುದರಲ್ಲಿ ಅಲ್ಲ ಅವರನ್ನು ಸೆರೆ ಹಿಡಿಯುವ ಕೆಲಸ ಸುಲಬದ್ದಲ್ಲ .ಇಂದು ಉಪನಿರ್ದೇಶಕರಾದ ಶ್ರೀ ಎಮ್ ಎಮ್ ಕಾಂಬಳೆ ಸರ್ ನಿವೃತ್ತಿ ಅಂಚಿನಲ್ಲಿರುವ ಪ್ರಾಚಾರ್ಯ/ಉಪನ್ಯಾಸಕರಿಗೆ ಜೀವನೋತ್ಸಾಹ ತುಂಬಿದ್ದಂತು ಸತ್ಯ .ಮಾನ್ಯ ಸಾಹೇಬರು ತಾನು ಮರಾಠಿ ಮತ್ತು  ಇಂಗ್ಲಿಷ್ನಲ್ಲಿ ಹೆಚ್ಚಿನ ಅಭ್ಯಾಸ  ಮಾಡಿದ್ದು ಕನ್ನಡ ಅಷ್ಟು ಚನ್ನಾಗಿ ಮಾತನಾಡಲಿಕ್ಕಿಲ್ಲ ಎನ್ನುತ್ತ ಅಚ್ಚಕನ್ನಡದಲ್ಲಿ ನಗೆಬುಗ್ಗಿ ಎಬ್ಬಿಸಿ ಎಲ್ಲ ಮೌಲ್ಯ ಮಾಪಕರ ಕಾರ್ಯೋತ್ಸಾಹ ಹೆಚ್ಚಿಸಿದರು ಅವರಿಗೆ ಈ ಮೂಲಕ ಇತಿಹಾಸ ಮೌಲ್ಯಮಾಪಕರ ಪರವಾಗಿ ಹೃದಯಪೂರ್ವಕ ಧನ್ಯವಾದಗಳು.

Thursday, March 27, 2025

ನನ್ನ ನೆಲದಲ್ಲಿ ನಾ ನೆಟ್ಟ ಮಾವು

ನನ್ನ ಮಗ ಹೊಲಕ್ಕೆ ಹೋಗಿ ನೀರು ಹಾಕಿ ಪೊಟೋ ತೆಗೆದು ಕಳಿಸಿದ ಚಿತ್ರ 

ನನ್ನ ನೆಲದಲ್ಲಿ 
ನಾ ನೆಟ್ಟ ಮಾವು
ನಗು ಮುಖದ ಸಿಂಗಾರಿ
ಏನಿವಳ ವೈಯಾರ
ಕಾಗೆ ಗುಬ್ಬಚ್ಚಿಗೂ ಕಚಗುಳಿ 
ಇಟ್ಟವಳಿವಳು 
ಕೋಗಿಲೆಗೆ ದ್ವನಿ ನೀಡಿದವಳು
ನವಿಲಿಗೆ ನರ್ತನ ಕಲಿಸಿದವಳಿವಳು
ಪ್ರೀತಿಯಿಂದ ಬೆಳಸಿ ಸೋತು ತಿರುಗುವೆ 
ಹಗಲಿರುಳು
ಹಸಿವು ಹಿಂಗಲಲ್ಲ 
ಹೊಸ ಹುರುಪು 
ಹುರಿಗೊಂಡು ಹೊಸ ಚೈತನ್ಯ ತರಲು
ಏನಿವಳ ಅಂದ ಕಣ್ಮನಕೆ ಚಂದ
ಉರಿವ ಸೂರ್ಯನೂ ಸೋತು 
ಸ್ನೇಹಕ್ಕೆ ಹಾತೊರೆದ.
ನಾನೆ ಬೆಳೆಸಿದ ಬೆಡಗಿ 
ನನಗಿರಲಿ ಎಂದರೇನು ಚಂದ 
ನಗು ನಗುತ ರವಿಯ 
ಗೆಳೆತನ ಮಾಡಿದವಳು !
ನಿನ್ನ ರಕ್ಷಣೆಗೆ 
ನನ್ನ ಜಾಲಿ ಇಪ್ಪಡಿಯ ಕೋಟೆ 
ಭೇಧಿಸ ಬಯಸಿದರೆ ಬಾಣ. 
ಮುಂದೆ ಹೋಗಿ ಹಿಂದೆ ಸರಿದರೆ 
ರಕ್ತದ ತರ್ಪಣ 
ಸ್ನಿಗ್ದ ಸೌಂದರ್ಯದ ಕಣಿ
ನಗನಾಣ್ಯ ಗಳು ಸಾಟಿ ಏನು ನಿನಗೆ
ಕುರಿಗಾಯಿ ಕರಿಯ, ದನಗಾಯಿ ಭೀಮ
ದುರುಗುಟ್ಟಿ ನೋಡುವರು ನಿನ್ನ
ಮರವಾಗುವ ಮುನ್ನ 
ಕುರಿಗಾರ ಹಾಕಿದರ ಕಣ್ಣು 
ನನ್ನ ಬಾಯಿಗೆ ಬೀಳುವುದೇನೋ ಮಣ್ಣು !!!!

Wednesday, March 26, 2025

ಹಾರುಗೇರಿಯ ಅನ್ನದಾನಿ.

      ಬೇಡಿಕೆ ಈಡಿರಿಕೆಗಾಗಿ ಪದವಿ ಪೂರ್ವ ಉಪನ್ಯಾಸಕರು ಹೋರಾಟ ಮಾಡುತ್ತಿದ್ದ ಕಾಲಘಟ್ಟ ವದು, ಹೋರಾಟದ ಮುಂಚೂಣಿಯಲ್ಲಿದ್ದ ಶಾಮಪ್ರಸಾದ ಸರ್, ಶಾಣವಾಡ ಸರ್ ಪ.ಪೂರ್ವ.ಕಾಲೇಜಿನ ಉಪನ್ಯಾಸಕರ ವೇತನ ತಾರತಮ್ಯ ದ ಕುರಿತು ಹರಿತವಾದ ಮಾತುಗಳನ್ನು ರೊಷದಿಂದ ಹೊರಹಾಕುತ್ತಿದ್ದರು  ಅದನ್ನೆಲ್ಲ ನಾವು ತದೇಕ ಚಿತ್ತದಿಂದ ಆಲಿಸುತ್ತಿದ್ದೆವು  ಅದೇ ಅವಧಿಯಲ್ಲಿ ಇನ್ನೊಬ್ಬ ವ್ಯಕ್ತಿ ಅತ್ಯಂತ ಹರಿತವಾದ ಮಾತುಗಳಿಂದ ಉಪನ್ಯಾಸಕರಿಗಾದ ತಾರತಮ್ಯವನ್ನು  ಅತ್ಯಂತ ತೀಕ್ಷ್ಣ ವಾಗಿ ಉಪನ್ಯಾಸಕರಿಗೆ ತಲುಪುವಂತೆ ಮಾಡುತ್ತಿದ್ದರು ಅವರು ಬೇರೆ ಯಾರು ಅಲ್ಲ  ಅವರೆ ಹಾರುಗೇರಿ ಕಾಲೇಜಿನ ಇತಿಹಾಸ ಉಪನ್ಯಾಸಕ ಮಾಳಿ ಸರ್ , ಅಂದು ನಾನು ತಿಳಿದುಕೊಂಡ ಮಾಳಿ ಸರ್ ಗೂ ಇಂದು ನಾನು ಕಾಣುತ್ತಿರುವ ಮಾಳಿ ಸರ್ ಗೂ ಬಹು ವ್ಯತ್ಯಾಸವಿದೆ. ಇಂದು ಅವರ ಮಾಗಿದ, ತೂಕದ ಮಾತುಗಳು, ಒತ್ತಡದ ನಡುವೆಯೂ ಎಲ್ಲರ ಪ್ರೀತಿಯ ಗೆದ್ದಿರುವ ಅವರ ಪ್ರಭಾವಲಯ ಅವರನ್ನು ಸಂತನನ್ನಾಗಿ ಪರಿವರ್ತಿಸಿದೆ.ಇಂದು ಅವರು ಉಪನ್ಯಾಸಕರೆಲ್ಲರಿಗೂ ಊಟದ ವ್ಯವಸ್ಥೆ ಮಾಡಿದರು ಎನ್ನುವ ಹೊಗಳಿಕೆ ಕಾರಣಕ್ಕಲ್ಲ ಬದಲಾಗಿ ಇಂತಹ ಮನಸ್ಥಿತಿಯ ಜನರ ಸಂತತಿ ಇನ್ನೂ ಇದೆಯಲ್ಲಾ ಎನ್ನುವ ಕಾರಣಕ್ಕೆ ಅವರ ಸಂತತಿ ಸಾವಿರವಾಗಲಿ ಎನ್ನುವ ಕಾರಣಕ್ಕಾಗಿ ಹೇಳುತ್ತಿದ್ದೇನೆ. ಇದು ಇಂದು ಮಾತ್ರ ನೆಡೆದದ್ದಲ್ಲ ಎರಡು ಮೂರು ವರ್ಷಗಳಿಂದ ಸತತವಾಗಿ ನಡೆಯುತ್ತಿದೆ.ಶಿಬಿರದ ಒಳಗಡೆ ಅವರು ಪ್ರತಿದಿನ ಏಳೆಂಟು ಜನರಿಗೆ ಸೇವಿಸುವ ಆಹಾರ ,ಬುತ್ತಿ ಕಟ್ಟಿಕೊಂಡು ಬರುತ್ತಿದ್ದಾರೆ, ಅವರ ಈ ಉದಾರತನಕ್ಕೆ ಇನ್ನೇನು ಹೇಳಬೇಕು ? ಅವರಿಗೆ ಚುನಾವಣೆಗೆ ನಿಲ್ಲಬೇಕಾದ ಯಾವುದೆ ಪ್ರಮೆಯ ಇಲ್ಲ, ಮೂರು ನೂರಕ್ಕಿಂತ ಹೆಚ್ಚು ಮೌಲ್ಯ ಮಾಪಕರಿಗೆ ಊಟದ ವ್ಯವಸ್ಥೆಯನ್ನು ಮಾಡುವುದು ಸಣ್ಣ ವೀಷಯವೇನಲ್ಲ . ಮೂವತ್ತು ,ಮೂವತ್ತೈದು ಸಾವಿರ ಹಣ ಖರ್ಚಾಗಿರಬಹುದೇನೊ, ಒಂದು ಪೈಸೆಗೂ ಲೆಕ್ಕಾಚಾರ  ಮಾಡುವ ಈ ಕಾಲಘಟ್ಟ ದಲ್ಲಿ ತೋರಿದ ಉದಾರ ಮನಸ್ಸಿಗೆ ಭೇಷ್ ಎನ್ನಲೆಬೇಕು ! ಏಕೆಂದರೆ ಅದು ಶ್ರಮದ ದುಡ್ಡು, ಚಂದಾವಸೂಲಿಯಂತೆ ಬಂದ ಹಣವಲ್ಲ !
ಸಂತೋಷ ಕಾಣುವ ದಾರಿಗಳು ನೂರಾರು ಅದರಲ್ಲಿ ಮಾಳಿಯವರು ಕಂಡುಕೊಂಡ ದಾರಿ ಸಮಾಜಕ್ಕೊಂದು ಮಾರ್ಗದರ್ಶಿ.ಇದ್ದದ್ದು ಇದ್ದಂತೆ ಹೇಳವದರಲ್ಲಿ ಅವರು ಎತ್ತಿದಕೈ ಹೋದ ವರ್ಷ ವೇದಿಕೆ ಮೇಲೆಯೆ ಮುಂದಿನ ವರ್ಷ ಈ ವರ್ಷದ ಎಲ್ಲರಿಗೂ ಡಿ ಸಿ ಬರುತ್ತದೆ ಎನ್ನುವದನ್ನು ಮರೆಯರಿ  ಎಂದು ಹೇಳಿದ್ದು ನಾನು ಕೇಳಿದ್ದೆ, ಅದು ಈಗ ಆಗಿದೆ ಅದು ಕಾಕತಾಳಿಯವೋ ಏನೋ ನನಗೆ ಗೊತ್ತಿಲ್ಲ.ಅತ್ಯಂತ ದೀರ್ಘ ಸೇವಾನುಭವ ಹೊಂದಿರುವ ಅವರಿಗೆ ಯಾವ ಹುದ್ದೆ ಬಂದರೂ ಬೇಸರವಿಲ್ಲ ಆದರೆ ನ್ಯಾಯಯುತವಾಗಿ ಇರಬೇಕು ಎನ್ನುವುದು ಅವರ ಕಳಕಳಿ, ಮೊನ್ನೆ ದಿನ ಅಧಿಕಾರಿಗಳು ಬಂದಾಗ ಮೌಲ್ಯ ಮಾಪನದ ಡಿ ಸಿ ನೇಮಕದ ಕುರಿತು  ಅವರಿಂದ ಬಂದ ಮಾತು,ಅವರ ಬೇಸರ,ಹಾಗೆಯೇ ಮಾತನಾಡುವಾಗ ಅವರ ಹತ್ತಿರವೇ ನಿಂತ ನನಗೆ ಅವರ ಬಗ್ಗೆ ಇದ್ದ ಅಭಿಮಾನ ನೂರ್ಮಡಿಯಾಯಿತು.ಬಾಗಲಕೋಟೆ ಇತಿಹಾಸ ಉಪನ್ಯಾಸಕರ ಸಂಘ ನೀಡಿದ ಪ್ರೀತಿಯ  ಸನ್ಮಾನ ಸ್ವೀಕರಿಸಿದ ಮಾಳಿ ಕುಟುಂಬಕ್ಕೆ ಗುರು ಬಳಗ ಚಿರ ಋಣಿ ದೇವರು ಅವರ ಕುಟುಂಬಕ್ಕೆ ಆರೋಗ್ಯ ಸಂಪತ್ತು ದಯಪಾಲಿಸಲಿ. 
 

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...