ಬೇಡಿಕೆ ಈಡಿರಿಕೆಗಾಗಿ ಪದವಿ ಪೂರ್ವ ಉಪನ್ಯಾಸಕರು ಹೋರಾಟ ಮಾಡುತ್ತಿದ್ದ ಕಾಲಘಟ್ಟ ವದು, ಹೋರಾಟದ ಮುಂಚೂಣಿಯಲ್ಲಿದ್ದ ಶಾಮಪ್ರಸಾದ ಸರ್, ಶಾಣವಾಡ ಸರ್ ಪ.ಪೂರ್ವ.ಕಾಲೇಜಿನ ಉಪನ್ಯಾಸಕರ ವೇತನ ತಾರತಮ್ಯ ದ ಕುರಿತು ಹರಿತವಾದ ಮಾತುಗಳನ್ನು ರೊಷದಿಂದ ಹೊರಹಾಕುತ್ತಿದ್ದರು ಅದನ್ನೆಲ್ಲ ನಾವು ತದೇಕ ಚಿತ್ತದಿಂದ ಆಲಿಸುತ್ತಿದ್ದೆವು ಅದೇ ಅವಧಿಯಲ್ಲಿ ಇನ್ನೊಬ್ಬ ವ್ಯಕ್ತಿ ಅತ್ಯಂತ ಹರಿತವಾದ ಮಾತುಗಳಿಂದ ಉಪನ್ಯಾಸಕರಿಗಾದ ತಾರತಮ್ಯವನ್ನು ಅತ್ಯಂತ ತೀಕ್ಷ್ಣ ವಾಗಿ ಉಪನ್ಯಾಸಕರಿಗೆ ತಲುಪುವಂತೆ ಮಾಡುತ್ತಿದ್ದರು ಅವರು ಬೇರೆ ಯಾರು ಅಲ್ಲ ಅವರೆ ಹಾರುಗೇರಿ ಕಾಲೇಜಿನ ಇತಿಹಾಸ ಉಪನ್ಯಾಸಕ ಮಾಳಿ ಸರ್ , ಅಂದು ನಾನು ತಿಳಿದುಕೊಂಡ ಮಾಳಿ ಸರ್ ಗೂ ಇಂದು ನಾನು ಕಾಣುತ್ತಿರುವ ಮಾಳಿ ಸರ್ ಗೂ ಬಹು ವ್ಯತ್ಯಾಸವಿದೆ. ಇಂದು ಅವರ ಮಾಗಿದ, ತೂಕದ ಮಾತುಗಳು, ಒತ್ತಡದ ನಡುವೆಯೂ ಎಲ್ಲರ ಪ್ರೀತಿಯ ಗೆದ್ದಿರುವ ಅವರ ಪ್ರಭಾವಲಯ ಅವರನ್ನು ಸಂತನನ್ನಾಗಿ ಪರಿವರ್ತಿಸಿದೆ.ಇಂದು ಅವರು ಉಪನ್ಯಾಸಕರೆಲ್ಲರಿಗೂ ಊಟದ ವ್ಯವಸ್ಥೆ ಮಾಡಿದರು ಎನ್ನುವ ಹೊಗಳಿಕೆ ಕಾರಣಕ್ಕಲ್ಲ ಬದಲಾಗಿ ಇಂತಹ ಮನಸ್ಥಿತಿಯ ಜನರ ಸಂತತಿ ಇನ್ನೂ ಇದೆಯಲ್ಲಾ ಎನ್ನುವ ಕಾರಣಕ್ಕೆ ಅವರ ಸಂತತಿ ಸಾವಿರವಾಗಲಿ ಎನ್ನುವ ಕಾರಣಕ್ಕಾಗಿ ಹೇಳುತ್ತಿದ್ದೇನೆ. ಇದು ಇಂದು ಮಾತ್ರ ನೆಡೆದದ್ದಲ್ಲ ಎರಡು ಮೂರು ವರ್ಷಗಳಿಂದ ಸತತವಾಗಿ ನಡೆಯುತ್ತಿದೆ.ಶಿಬಿರದ ಒಳಗಡೆ ಅವರು ಪ್ರತಿದಿನ ಏಳೆಂಟು ಜನರಿಗೆ ಸೇವಿಸುವ ಆಹಾರ ,ಬುತ್ತಿ ಕಟ್ಟಿಕೊಂಡು ಬರುತ್ತಿದ್ದಾರೆ, ಅವರ ಈ ಉದಾರತನಕ್ಕೆ ಇನ್ನೇನು ಹೇಳಬೇಕು ? ಅವರಿಗೆ ಚುನಾವಣೆಗೆ ನಿಲ್ಲಬೇಕಾದ ಯಾವುದೆ ಪ್ರಮೆಯ ಇಲ್ಲ, ಮೂರು ನೂರಕ್ಕಿಂತ ಹೆಚ್ಚು ಮೌಲ್ಯ ಮಾಪಕರಿಗೆ ಊಟದ ವ್ಯವಸ್ಥೆಯನ್ನು ಮಾಡುವುದು ಸಣ್ಣ ವೀಷಯವೇನಲ್ಲ . ಮೂವತ್ತು ,ಮೂವತ್ತೈದು ಸಾವಿರ ಹಣ ಖರ್ಚಾಗಿರಬಹುದೇನೊ, ಒಂದು ಪೈಸೆಗೂ ಲೆಕ್ಕಾಚಾರ ಮಾಡುವ ಈ ಕಾಲಘಟ್ಟ ದಲ್ಲಿ ತೋರಿದ ಉದಾರ ಮನಸ್ಸಿಗೆ ಭೇಷ್ ಎನ್ನಲೆಬೇಕು ! ಏಕೆಂದರೆ ಅದು ಶ್ರಮದ ದುಡ್ಡು, ಚಂದಾವಸೂಲಿಯಂತೆ ಬಂದ ಹಣವಲ್ಲ !
ಸಂತೋಷ ಕಾಣುವ ದಾರಿಗಳು ನೂರಾರು ಅದರಲ್ಲಿ ಮಾಳಿಯವರು ಕಂಡುಕೊಂಡ ದಾರಿ ಸಮಾಜಕ್ಕೊಂದು ಮಾರ್ಗದರ್ಶಿ.ಇದ್ದದ್ದು ಇದ್ದಂತೆ ಹೇಳವದರಲ್ಲಿ ಅವರು ಎತ್ತಿದಕೈ ಹೋದ ವರ್ಷ ವೇದಿಕೆ ಮೇಲೆಯೆ ಮುಂದಿನ ವರ್ಷ ಈ ವರ್ಷದ ಎಲ್ಲರಿಗೂ ಡಿ ಸಿ ಬರುತ್ತದೆ ಎನ್ನುವದನ್ನು ಮರೆಯರಿ ಎಂದು ಹೇಳಿದ್ದು ನಾನು ಕೇಳಿದ್ದೆ, ಅದು ಈಗ ಆಗಿದೆ ಅದು ಕಾಕತಾಳಿಯವೋ ಏನೋ ನನಗೆ ಗೊತ್ತಿಲ್ಲ.ಅತ್ಯಂತ ದೀರ್ಘ ಸೇವಾನುಭವ ಹೊಂದಿರುವ ಅವರಿಗೆ ಯಾವ ಹುದ್ದೆ ಬಂದರೂ ಬೇಸರವಿಲ್ಲ ಆದರೆ ನ್ಯಾಯಯುತವಾಗಿ ಇರಬೇಕು ಎನ್ನುವುದು ಅವರ ಕಳಕಳಿ, ಮೊನ್ನೆ ದಿನ ಅಧಿಕಾರಿಗಳು ಬಂದಾಗ ಮೌಲ್ಯ ಮಾಪನದ ಡಿ ಸಿ ನೇಮಕದ ಕುರಿತು ಅವರಿಂದ ಬಂದ ಮಾತು,ಅವರ ಬೇಸರ,ಹಾಗೆಯೇ ಮಾತನಾಡುವಾಗ ಅವರ ಹತ್ತಿರವೇ ನಿಂತ ನನಗೆ ಅವರ ಬಗ್ಗೆ ಇದ್ದ ಅಭಿಮಾನ ನೂರ್ಮಡಿಯಾಯಿತು.ಬಾಗಲಕೋಟೆ ಇತಿಹಾಸ ಉಪನ್ಯಾಸಕರ ಸಂಘ ನೀಡಿದ ಪ್ರೀತಿಯ ಸನ್ಮಾನ ಸ್ವೀಕರಿಸಿದ ಮಾಳಿ ಕುಟುಂಬಕ್ಕೆ ಗುರು ಬಳಗ ಚಿರ ಋಣಿ ದೇವರು ಅವರ ಕುಟುಂಬಕ್ಕೆ ಆರೋಗ್ಯ ಸಂಪತ್ತು ದಯಪಾಲಿಸಲಿ.
No comments:
Post a Comment