Saturday, June 28, 2025

ಕಾರ್ಗಿಲ್ ವೀರರ ಕವನ ಸ್ಫರ್ಧೆ

ಅನು ದಿನವು ಮಾತಾಡಿ ಅರಕ್ಷಣವೂ ಓದದೆ ಅದೆಂತು ಲಭಿಸಿವುದು ಜಾಣ್ಮೆ ಅದಕ್ಕೂ ಬೇಕು ತಾಳ್ಮೆ . ಬರೆಯುವುದು  ನನ್ನ ಹವ್ಯಾಸ ಬೆನ್ನು ಬೀಳುವುದಿಲ್ಲ ಬೆಕೆಂದು ಸಾಹಿತ್ಯದ ಪಟ್ಟ ಆದರೆ ಕೊಟ್ಟರೇನು ಮಾಡುವುದು ?  ಬರಹಗಾರನಿಗೆ ನೀಡುವಂತೆ ನನಗೂ ನೀಡಿದರೆ ಇ-ಪ್ರಮಾಣಪತ್ರದ ಹೂಗುಚ್ಚ 
ಬಿಟ್ಟು ಇರಲಾದೀತೆ.... ಹಂಚಿಕೊಳ್ಳುವ ತವಕ !.
ಅದು ಶಿಕ್ಷಕರ ಪರಿಷತ್, ಕಲಿಸುವ ಕರಗಳಿಗೆ 
ಕನ್ನಡ ಕಟ್ಟುವ ಕೆಲಸ, ಮೇಲೆ ರಾಷ್ಟ್ರದ ಭಕ್ತಿಯ ಪ್ರೀತಿ . ಬರೆಯದೆ ಇರಲಾದೀತೆ ಚಿತ್ರ ಕವನ ಸ್ಪರ್ಧೆ ! 
ಬರೆದೆ ...ಕಾರ್ಗಿಲ್ ಕದನ ವೀರರ ಕ್ಷಾತ್ರ ತೇಜಸ್ಸು,
ಸ್ಥಾನ ಯಾವುದಾದರೇನು ? ನೂರಾರು ಕವನಗಳ ವೀರ ಸೈನಿಕರ ಗುಣಗಾಣ ಅದರಲ್ಲಿ ನನದೊಂದು ಅಳಿಲು ಸೇವೆ ಮೂರು ಹತ್ತುಗಳಲ್ಲಿ ಮುತ್ತಾಗಿ ಬಂದರೆ ಪ್ರೀತಿಯಿಂದ ಎತ್ತಿಕೊಳ್ಳದೆ ಇರಲಾದೀತೆ ...ಹೆತ್ತವರಿಗೆ ಹೆಗ್ಗಣವೂ ಮುದ್ದು ಮತ್ತೆ ಮತ್ತೆ ಬರೆಯಲು ಪ್ರೇರಿಪಿಸಿದ ಶಿಕ್ಷಕ ಸಂಘಟನೆಯ ಬಳಗಕ್ಕೆ ನೂರೊಂದು ನಮನಗಳು.

Sunday, June 1, 2025

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"


ಶಾಂತಿ ಮಂತ್ರ ಪಠಿಸುವ ಶಾಲೆಯ
ಕ್ರಾಂತಿಯ ಗೀತೆಯ ಹಾಡುವ ಕಲಿಗಳು
ಕೆದುಕದೆ ಕದನ ಮಾಡದ ಹುಲಿಗಳು
ಭಾರತದ ಯೋಧರು ಭಾಗ್ಯವಿದಾತರು॥

ಹೆತ್ತವರ ಮಮತೆ ಮನದಲ್ಲಿ ನೆಟ್ಟು
ಮಡದಿಯ ಪ್ರೀತಿಯ ಅದುಮಿಟ್ಟು
ಉತ್ತರದ ಹಿಮಶಿಖರ ಹತ್ತುವರು, 
ತಟ್ಟಿದರೆ ನೆತ್ತರಿನೋಕಳಿಯಾಡುವರು॥

ರಕ್ತ ಹೆಪ್ಪುಗಟ್ಟಿದರೂ ತಪ್ಪಿಸಿಕೊಳ್ಳದೆ
ಸೂಕ್ತ ಸಮಯಕೆ ಕಾಯುವವರು
ವೈರಿ ತಂತ್ರಕೆ ಪ್ರತಿ ತಂತ್ರ ಹೆಣೆಯುವರು
ಮಂತ್ರ ಒಂದೆ ನಾವು ಭಾರತೀಯರು॥

ಪಾಕ್ ಕುನ್ನಿಗಳ ಹೇತು ಒಂದೇ
ಕಾಶ್ಮೀರ ಕದಿಯಲು ಭಯೋತ್ಪಾದನೆ ಮುಂದೆ
ಕಾರ್ಗಿಲ್ ದ್ರಾಸ್ ಭೇಧಿಸ ಬಯಸಿದರು
ಧೀರ ಯೋಧರು ಗುನ್ನ ಇಟ್ಟರು ಅಂದು॥

ಜೈ ಜವಾನ ಜೈ ಕಿಸಾನ
ಬರಿ ಘೋಷಣೆಯಲ್ಲ ಭಾರತದುಸಿರು
ಯೋಧರ ಕಷ್ಟಕೆ ಹಿಂದುಸ್ತಾನ ಮುಂದು
ಗಡಿ ಕಾಯುವವರಿಗೆ ಗುಡಿ ಕಟ್ಟುವರಿಂದು ॥


ಸ್ವಾತಂತ್ರ್ಯ ದಿನಾಚರಣೆ

      ತಮಗೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು,       ವೇದಿಕೆಯ ಮೇಲೆ ಆಶೀನರಾಗಿರುವ ಗಣ್ಯ ಮಾನ್ಯರೆ ಹಾಗೂ ಪ್ರೀತಿಯ ವಿದ್ಯಾರ್ಥಿಗಳೆ, ಗುಳೇಗುಡ್ಡ ನಾಗರಿಕರ...