ಹಣ ಬಂದಾಗ ಗುಣ ಕಳದುಕೊಂಡು
ಹಾದಿ ತಪ್ಪಿದವರು ಬಾಳ ಜನ
ಗಳಿಸಿದಾಗ ಬಳಸಲು ಶಾಲೆಗೆ
ಬಂದವರು ಬಹಳ ಕಡಿಮೆ ಜನ
ಬಡವರ ಮಕ್ಕಳಿಗೆ ಬಾಗ್ಯ ನೀಡಲು
ಗುಳೇಗುಡ್ಡದಾಗ ಏನು ಕಡಿಮೆ ಜನ
ಕಳಸಾ ಹಿಡಕೊಂಡು ಕರಕೊಂಡ
ಬಂದಾರ ಪುರಂದರ ವಿಠ್ಠಲ, ಈ ದಿನ
ಓದುವ ಮಕ್ಕಳಿಗೆ ಪುಸ್ತಕ ತಂದಾರ
ಸವದತ್ತಿ ಯಲ್ಲಮ್ಮನ ಮಗ ಪರಸುರಾಮಣ್ಣ
ಓದುವುದೊಂದೆ ಬಾಕಿ ಐತಿ ಮಕ್ಕಳ,
ಜಾದೂ ಮಾಡಿದಂತಲ್ಲ ಸಾಧನ
ನಾವೆಲ್ಲ ತೆಗೆದುಕೊಳ್ಳೋಣ ಪ್ರತಿಜ್ಞೆ
ಮೊಬೈಲ್ ರೀಲ್ಸ್ ನೋಡೋದು ಬಿಡೋಣ
ಅದೆ ದಾನಿಗಳಗೆ ತುಂಬು ಹೃದಯದ ನಮನ
ತುಂಬು ಹೃದಯದ ನಮನ
No comments:
Post a Comment