Monday, December 24, 2018

1885 ರಿಂದ 1920 ರ ವರೆಗಿನ ರಾಷ್ಟ್ರೀಯ oಚಳುವಳಿಯನ್ನು ವಿಶದಪಡಿಸಿರಿ

1885 ರಿಂದ 1920 ರ ವರೆಗಿನ ರಾಷ್ಟ್ರೀಯ ಚಳುವಳಿಯನ್ನು ವಿಶದಪಡಿಸಿರಿ

         ಭಾರತದ ರಾಷ್ಟ್ರೀಯ ಚಳುವಳಿ ಯಾವಾಗ ಪ್ರಾರಂಭವಾಯಿತೆಂದು ಹೇಳುವದು ಚರ್ಚಾಸ್ಪದ ವಿಷಯವಾದರೂ ಭಾರತದ ರಾಷ್ಟ್ರೀಯ ಕಾಂಗ್ರಸ್ ನ ಸ್ಥಾಪನೆಯೊಂದಿಗೆ ಖಚಿತವಾಗಿ ಪ್ರಾರಂಭವಾಯಿತೆಂದು ಹೇಳಬಹುದು.

        ಅಲನ್ ಆಕ್ಟೇವಿಯನ್ನು ಹ್ಯೂಮ್ 1À885 ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪಿಸಲು ಪ್ರೇರೇಪಿಸಿದ. ಇದರ ಮೊದಲ ಅಧಿವೇಶನ ಬೊಂಬಾಯಿಯಲ್ಲಿ ನಡೆಯಿತು. ಮೊದಲ ಅಧ್ಯಕ್ಷರು ಉಮೇಶ ಚಂದ್ರ ಬ್ಯಾನರ್ಜಿ, ಇದರಲ್ಲಿ ಭಾರತದ ವಿವಿಧ ಭಾಗಗಳಿಂದ 72 ಪ್ರತಿನಿಧಿಗಳು ಭಾಗವಹಿಸಿದ್ದರು ಇದರ ಮುಖ್ಯ ಉದ್ದೇಶಗಳೆಂದರೆ ರಾಷ್ಟ್ರೀಯ ಏಕತೆಯನ್ನು ಪ್ರೋತ್ಸಾಹಿಸುವದು,ಧರ್ಮ ಜಾತಿ,ಪ್ರಾಂತ್ಯ ಮತ್ತಿತರ ಪೂರ್ವಾಗ್ರಹ ಹೋಗಲಾಡಿಸುವದು,ಭಾರತೀಯ ಜನಸಮೂಹಕ್ಕೆ ರಾಜಕೀಯ ಶಿಕ್ಷಣ ನೀಡುವದು ಮತ್ತು ಸಾರ್ವಜನಿಕ ಅಭಿಪ್ರಾಯ ಮೂಡಿಸುವದು ಮುಂತಾದವು.

        1885 ರಿಂದ 1905 ರ ಅವದಿಯನ್ನು ಮಂದಗಾಮಿಗಳ ಅವದಿ ಎಂದು ಕರೆಯುತ್ತಾರೆ ಈ ಅವದಿಯ ಪ್ರಮುಖರೆಂದರೆ ದಾದಾ ಬಾಯಿ ನವರೋಜಿ, ಗೋಪಾಲಕ್ರಷ್ಣ ಘೋಖಲೆ, ಸುರೇಂದ್ರ ನಾಥ ಬ್ಯಾನರ್ಜಿ, ಫಿರೋಜಷಾ ಮೆಹತಾ ಮುಂತಾದವರು ಇವರು ಬ್ರಿಟಿಷರ ಆಡಳಿತದಲ್ಲಿ ನಿಷ್ಠೆ ವ್ಯಕ್ತಪಡಿಸಿದರು ಮತ್ತು ಪ್ರಾರ್ಥನೆ ,ಬಿನ್ನಹಗಳ ಮೂಲಕ ಬ್ರಟಿಷ ಸರಕಾರದ ಮೇಲೆ ಒತ್ತಡ ತರುವ ಉದ್ದೇಶ  ಹೊಂದಿದ್ದರು.ದಾದಾಬಾಯಿ ನವರೋಜಿ 1866 ರಲ್ಲಿ ಈಸ್ಟ ಇಂಡಿಯಾ ಅಸೋಸಿಯೇಷನ್ ಸ್ಥಾಪಿಸಿದರು ಇದು ಭಾರತಿಯರಿಗೆ ಅನಕೂಲವಾಗುವ ಕಾನೂನು ಜಾರಿಗೆ ತರುವಂತೆ ಪ್ರಯತ್ನಿಸತು. ಆದರೆ ಬ್ರಿಟಿಷರು ಕಾಂಗ್ರೆಸ್‍ನ್ನು ರಾಜದ್ರೋಹದ ಕಾರ್ಖಾನೆ ಎಂದು ಕರೆದರು. ಈ ಹಂತದಲ್ಲಿ ತೀವ್ರತರ ಬದಲಾವಣೆ ಸಾದ್ಯವಾಗದಿದ್ದರು ಬ್ರಿಟಷರ ಶೋಷಣಾತ್ಮಕ ವಸಾಹತುಷಾಹಿ ಅಡಳಿತ ಮತ್ತು ನೀತಿಯನ್ನು ಹೊರಗೆಳಿದರು.

   1905 ರಿಂದ 1920 ರ ಅವದಿಯನ್ನು ತೀವ್ರಗಾಮಿಗಳ ಯುಗ ಎಂದು ಕರೆಯಲಾಗಿದೆ. ಇವರು ಹೋರಾಟ ಪ್ರವತ್ತಿಯುಳ್ಳುವರಾಗಿದ್ದರು ಈ ಅವದಿಯ ಪ್ರಮಖರೆಂದರೆ ಬಾಲಗಂಗಾಧರ ತಿಲಕ,ಲಾಲಾ ಲಜಪತರಾಯ ಮತ್ತು ಬಿಪಿನ ಚಂದ್ರಪಾಲ.

ತೀವ್ರ ಗಾಮಿಗಳ ಉದಯಕ್ಕೆ ಕಾರಣವೆಂದರೆ.

1) ಮಂದಗಾಮಿಗಳು ತಮ್ಮ ಸಂವಿಧಾನಾತ್ಮಕ ಕ್ರಮಗಳಿಂದ ಯಾವುದೆ ಫಲಿತಾಂಶ ಸಾಧಿಸುವಲ್ಲಿ ವಿಫಲರಾದರು.

2) 1896-1901 ರ ವರೆಗೆ ಬಂದ ಕ್ಷಾಮ ನಿರ್ವಹನೆಯಲ್ಲಿ ಉದಾಸೀನತೆ ತೋರಿಸಿ ಸಾವಿರಾರು ಭಾರತಿಯರ ಮರಣಕ್ಕೆ ಕಾರಣರಾದರು.

3) ಭಾರತದ ರಾಷ್ಟ್ರೀಯವಾದಿಗಳ ಪ್ರಯತ್ನ  ಭಾರತೀಯರಲ್ಲಿ ಆತ್ಮವಿಶ್ವಾಸ ಮತ್ತು ಆತ್ಮಾಭಿಮಾನ ಮೂಡಿಸಿದವು

4) ಅಂತರಾಷ್ಟ್ರೀಯ ಪ್ರಭಾವ: ಇಟಲಿ, ಜರ್ಮನಿ ಎಕೀಕರಣ ಹಾಗೂ ಸ್ವಾತಂತ್ರ್ಯ,ರಷ್ಯ ಸೊಲು,ಟರ್ಕಿ,ಪರ್ಷಿಯಾಗಳ ರಾಷ್ಟ್ರೀಯ ಚಳುವಳಿಗಳು

 ಈ ಅವದಿಯ ಪ್ರಮುಖ ಘಟನೆಗಳೆಂದರೆ

1) ಬಂಗಾಳದ ವಿಭಜನೆ 1905- ಹಿಂದೂ ಮುಸ್ಲಿಮರಲ್ಲಿ ಒಡಕನ್ನುಂಟು ಮಾಡವ ಉದ್ದೇಶವನ್ನು ಹೊಂದಿದ್ದರು ಇದರಿಂದ ವಿಭಜನಾ ಚಳುವಳಿ ಪ್ರಾರಂಭವಾದವು.ವಿದೇಶಿ ಬಹಿಷ್ಕಾರ ಮತ್ತು ಸ್ವದೇಶಿ ಚಳುವಳಿ ಪ್ರಾರಂಭವಾದವು.

2) ಸೂರತ್ ಒಡಕು 1907- ಸುರತ್ ಅದಿವೇಶನದಲ್ಲಿ ಮಂದಗಾಮಿಗಳು ರಾಸ್ ಬಿಹಾರಿ ಘೋಸ್ ರನ್ನು ,ತೀವ್ರ ಗಾಮಿಗಳು ಲಾಲ ಲಜಪತರಾಯರನ್ನು ಅಧ್ಯಕ್ಷರನ್ನಾಗಿ ಮಾಡಲು ಬಯಸಿದರು. ಎರಡು ಗುಂಪು ಹೊಂದಾಣಿಕೆಯಾಗಲಿಲ್ಲಿ ಇದು ಕಾಂಗ್ರಸ್ ನಲ್ಲಿ ಒಡಕನ್ನುಂಟು ಮಾಡಿತು.ತೀವ್ರಗಾಮಿಗಳನ್ನು ಸೆದೆ ಬಡೆಯಲು ಬ್ರಿಟಿಷರು ಅನೇಕ ಕ್ರಮ ಕೈಕೊಂಡರು.

3) ಕ್ರಾಂತಿಕಾರಿ ಚಟುವಟಿಕೆಗಳು: ಬ್ರಿಟಿಷರ ದಮನಕಾರಿ ಚಟುವಟಿಕೆಗಳು ಕ್ರಾಂತಿಕಾರಿ ಬೆಳವಣಿಗೆಗೆ ಕಾರಣವಾಯಿತು.ಗುಪ್ತ ಸಂಘಗಳು ತಲೆ ಎತ್ತದವು ಇವರು ಆಡಳಿತದಲ್ಲಿ ಕೊಲಾಹಾಲ ಉಂಟುಮಾಡಿದರೂ ಬ್ರಿಟಿಷರು ಅವರನ್ನು ಹತೋಟಿಗೆ ತಂದರು

4)ಕೋಮುವಾದದ ಬೆಳವಣಿಗೆ:ನವಾಬ ಅಗಾಖಾನ್ ಹಾಗು ನವಾಬ ಮೊಹ್ಸನ್ ಉಲ್ ಮುಲ್ಕ 1906 ರಲ್ಲಿ ಮುಸ್ಲಿಮ್ ಲೀಗ ಸ್ಥಾಪಿಸಿದರು ಮತ್ತು ಮಸ್ಲಿಮರಿಗೆ ಪ್ರತ್ಯೇಕ ಮತದಾನ ಕೇಳಿದರು 1909 ರಲ್ಲಿ ಪಂಜಾಬ ಹಿಂದೂ ಸಭಾ ಸ್ಥಾಪನೆ. ಇವೆರಡು ಕಾಂಗ್ರೆಸ್ ವಿರೋಧಿಗಳಾಗಿದ್ದರು

5)ಮಾರ್ಲೆ-ಮಿಂಟೊ ಸುಧಾರಣೆಗಳು 1909-ಈ ಕಾಯಿದೆ ಕೇಂದ್ರ ಹಾಗೂ ಪ್ರಾಂತೀಯ ಶಾಸಕಾಂಗ ವಿಸ್ತರಿಸಲು ಸೂಚಿಸಿತು ಮತ್ತು ಮುಸ್ಲಿಮರಿಗೆ ಪ್ರತ್ಯೇಕ ಮತದಾನಕ್ಕೆ ಅವಕಾಶ ಕಲ್ಪಿಸಿತು.

6)ಹೋಮ್ ರೂಲ್ ಚಳುವಳಿ 1916-ಬಾಲ ಗಂಗಾಧರ ತಿಲಕ ಮತ್ತು ಅನಿಬೆಸೆಂಟ ಇದನ್ನು ಪ್ರಾರಂಭಿಸಿದರು.ಕರಪತ್ರ ಧಾರ್ಮಿಕ ಸಮಾರಂಭಗಳ ಮೂಲಕ ಸಂದೆಶ ಸಾರಿದರು. ತಿಲಕರು “ಸ್ವರಾಜ್ಯ ನನ್ನಜನ್ಮಸಿದ್ದ ಹಕ್ಕು ಅದನ್ನುಪಡೆದೇ ತೀರುತ್ತೇನೆ” ಎಂದು ಘೋಷಿಸಿದರು

7) ಮಾಂಟಿಂಗೋ ಜೆಮ್ಸ ಪಡ್ ಸುಧಾರನೆಗಳು: ಈ ಸುಧಾರಣೆಗಳು ದ್ವಿಸದನ ಶಾಸನಸಭೆ ಜಾರಿಗೊಳಿಸಿತು ಕೆಳಮನೆಯಲ್ಲಿ 144 ರಲ್ಲಿ 40 ಚುನಾಯಿತ 40 ನೇಮಿತ ಮೇಲ್ಮನೆಯಲ್ಲಿ 60ರಲ್ಲಿ 34 ಚುನಾಯಿತ 26 ನೇಮಿತ.

  ಹೀಗೆ 1885 ರಿಂದ 19020 ರ ವರೆಗೆ ಮಂದಗಾಮಿಗಳು ಹಾಗೂ ತೀವ್ರಗಾಮಿಗಳು ಬ್ರಿಟಿಷರ ಮೇಲೆ ತಮ್ಮದೆ ಆದ ರೀತಿಯಲ್ಲಿ ಒತ್ತಡ ಹಾಕಿ ಭಾರತದಲ್ಲಿ ಕೆಲವು ಸಾಂವಿಧಾನಾತ್ಮಕ ಸುಧಾರಣೆ ತರುವಲ್ಲಿ ಸ್ವಲ್ಪ ಮಟ್ಟಿಗೆ ಯಶ ಕಂಡರು.



2 comments:

  1. Tq u for such a wonderful topic.. once again tq u sir...

    ReplyDelete
  2. ಸ್ವಾತಂತ್ರ ಹೋರಾಟದ ಪ್ರಮುಖ ಘಟನೆಗಳ ಬಗ್ಗೆ ಮಾಹಿತಿ

    ReplyDelete

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...