ರಾಷ್ಟ್ರೀಯತೆ ಬೆಳವಣಿಗೆ
ರಾಷ್ಟ್ರೀಯತೆ ಎಂದರೆ ತಮ್ಮ ರಾಷ್ಟ್ರದ ಬಗ್ಗೆ ಜನರ ನಿಷ್ಠೆ ಹಾಗೂ ಭಕ್ತಿ ಎಂದು ಹೇಳಬಹುದು. ಇನ್ನೊಂದು ಅರ್ಥದ ತಮ್ಮ ಸಂಸ್ಕತಿ, ಭಾಷೆ ಮತ್ತು ರಾಷ್ಟ್ರದ ಬಗ್ಗೆ ಜನರ ಉತ್ಕಟ ಪ್ರೀತಿ, ಇದು ಜನರನ್ನು ತನ್ನ ಎಲ್ಲಾ ವೈವಿದ್ಯತೆ ಗಳನ್ನು ಮೀರಿ ಒಂದುಗೂಡಿಸುತ್ತದೆ. Nationalism is the only thread which binds the people together in the thread of oneness
ರಾಷ್ಟ್ರೀಯತೆ ಪರಿಕಲ್ಪನೆಯನ್ನು ಮೊದಲು 18 ನೇ ಶತಮಾನದಲ್ಲಿ ಯುರೂಪಿನಲ್ಲಿ ಕಾಣುತ್ತೆವೆ. ಪ್ರಾನ್ಸ ಕ್ರಾಂತಿಯ ಶಿಶು ಎಂದು ಕರೆದುಕೊಂಡಿರುವ ನೆಪೋಲಿಯನ್ ಯುರೋಪಿನ ಚಿತ್ರಣ ಬದಲಿಸುವ ಮೂಲಕ ಒಂದು ಜನಾಂಗ ಒಂದು ಭಾಷೆ ಒಂದು ಸಂಸ್ಕøತಿ ಜನರು ಒಂದುಗೂಡುವಂತೆ ಮಾಡುವ ಮೂಲಕ ಯುರೋಪಿನಲ್ಲಿ ರಾಷ್ಟ್ರೀಯತೆ ಬೆಳವಣಿಗೆಗೆ ಕಾರಣಿಭೂತನಾದ ಫಲಶೃತಿಯಾಗಿ ಇಟಲಿ,ಜರ್ಮನಿಯಂಥಹ ರಾಷ್ಟ್ರಗಳು ಉಗಮವಾದವು,ಈ ರಾಷ್ಟ್ರಗಳ ಉಗಮಕ್ಕೆ ಕಾರಣರಾದ ಜೋಶೆಪ್ ಮ್ಯಜನಿ ಕೌಂಟ ಕವೂರ,ಬಿಸ್ಮಾರ್ಕ ಸ್ಮರಣೀಯರು.
20ನೇ ಶತಮಾನದ ಆದಿ ಭಾಗದಲ್ಲಿ ರಾಷ್ಟ್ರೀಯತೆ ಉಗ್ರರಾಷ್ಟ್ರೀಯತೆ ರೂಪ ತಾಳಿ ಎರಡು ಮಹಾಯುದ್ದಗಳು ಸಂಭವಿಸಿ ಅಪಾರ ಹಾನಿಮಾಡಿದ್ದು ಇತಿಹಾಸದಲ್ಲಿ ದಾಖಲಾಗಿದೆ ಆದರೆ 19ನೆಯ ಶತಮಾನದಲ್ಲಿ ಆರಂಭವಾದ ರಾಷ್ಟ್ರಿಯತೆ ಬೆಳವಣಿಗೆ ಏಷಿಯಾ ಆಪ್ರಿಕಾ ಲ್ಯಾಟಿನ ಅಮೆರಕಾದ ದೇಶಗಳು ಸ್ವಾತಂತ್ರ್ಯ ಹೊಂದಲು ದಾರಿ ಮಾಡಿಕೊಟ್ಟಿತು. ಆಧುನಿಕ ಇತಿಹಾಸದ ಪ್ರಗತಿ ಆ ದೇಶದ ರಾಷ್ಟ್ರೀಯತೆ ಮೇಲೆ ನಿಂತಿರುವದು ಅಷ್ಟೆ ಸತ್ಯ.
ಪ್ರಾಚೀನ ಭಾರತದಲ್ಲಿ ರಾಷ್ಟ್ರೀಯತೆ ಕೊರತೆಯಿಂದಾಗಿ ಬಾರತವು ಹಲವಾರು ದಾಳಿಗಳನ್ನು ಕಾಣುವಂತಾಯಿತು ಸಾಮ್ರಾಟ ಅಶೋಕನ ಪೂರ್ವದಲ್ಲಿ ಗ್ರಿಕರು (ಅಲೆಗ್ಸಾಂಡರ) ಭಾರತದ ಮೆಲೆ ದಾಳಿ ಮಾಡಿದರು, ಮೌರ್ಯರ ಪತನಾನಂತರ ಶಕರು ಭಾರತದ ಮೇಲೆ ದಾಳಿ ಮಾಡಿದರು. ಸಾ.ಶ. 40 ರ ಹೊತ್ತಿಗೆ ಕುಶಾನರು ಭಾರತದ ಮೆಲೆ ದಾಳಿ ಮಾಡಿ ಭಾರತದಲ್ಲಿ ಅಧಿಕಾರ ಸ್ಥಾಪಿಸಿದರು. ಸಾ.ಶ. 450 ರ ಸುಮಾರಿಗೆ ಗುಪ್ತರ ಅವದಿಯಲ್ಲಿ ಹೂಣರ ದಾಳಿಯು ಭಾರತದಲ್ಲಿ ಸುವರ್ಣ ಯುಗ ನಿರ್ಮಿಸಿದ ಗುಪ್ತರ ಅವನತಿಗೆ ಅಲ್ಪ ಮಟ್ಟನ ಕಾರಣವಾಯಿತು.ಭಾರತದ ಮೇಲೆ ದಾಳಿ ಮಾಡಿದ ಮುಸ್ಲಿಮರಲ್ಲಿ ಅರಬ್ಬರು ಮೊದಲಿಗರು 712ರಲ್ಲಿ ಬಸ್ರಾದ ಪ್ರಾಂತ್ಯದ ರಾಜ್ಯಪಾಲನಾಗಿದ್ದ ಬಿನ್ ಖಾಸಿಮ ಭಾರತದ ಮೇಲೆ ದಾಳಿ ಮಾಡಿ ಅಪಾರ ರಕ್ತಪಾತಕ್ಕೆ ಕಾರಣನಾದ. ಸಾಶ.1000 ರಿಂದ 1027 ರ ವರೆಗೆ ಘಜ್ನಿ ಮಹಮದ 17 ಸಾರಿ ದಂಡಯತ್ರೆ ಮಾಡಿದ ಈ ಅವದಿಯಲ್ಲಿ ಗುಜರಾತಿನ ಸೋಮನಾಥದವರೆಗೂ ಬಂದಾಗ ಅತ್ಯಂತ ಸಣ್ಣ ಸೈನ್ಯದ ಘಜ್ನಿ ಮಹಮದ್ ನನ್ನು ಎದುರಿಸಲಾರದ್ದು ರಾಷ್ಟ್ರೀಯತೆಯ ಕೊರತೆಯಲ್ಲದೆ ಇನ್ನೆನು ? ನಂತರ ಒಂದುವರೆ ಶತಮಾನಗಳವರೆಗೆ ಭಾರತ ಯಾವುದೆ ದಾಳಿಗೆ ಒಳಗಾಗಲಿಲ್ಲಿ ಸಾ.ಶ 1175 ರಿಂದ ಮಹಮ್ದ ಘೊರಿ ದಾಳಿ ಪ್ರಾರಂಭವಾಗಿ ಸಾ.ಶ. 1206 ರಲ್ಲಿ ಭಾರತದಲ್ಲಿ ದೆಹಲಿ ಸುಲ್ತಾನರ ಆಡಳಿತ ಪ್ರಾರಂಭವಾಗುವಂತಾಯಿತು. ಇದೆ ಅವದಿಯಲ್ಲಿ ಅಂದರೆ 1221 ರಲ್ಲಿ ವಾಯವ್ಯ ಭಾರತದಲ್ಲಿನಡೆದ ಚೆಂಘೀಜಖಾನ ದಾಳಿ,ಸಾ.ಸ.1399 ರಲ್ಲಿ ದೆಹಲಿಯನ್ನು ನಡುಗಿಸಿದ ಕುಂಟ ತೈಮೂರನ ದಾಳಿಯು ಉಲ್ಲೇಖನಾರ್ಹ. ಸಾ.ಶ.1526 ರಿಂದ 1707 ರ ವರೆಗೆ ಆಳಿದ ಮೊಗಲರು ವಿದೇಶಿಗರೆ ಅವರ ವಂಶದ ಕುಡಿ 1857 ರ ವರೆಗೆ ಅಸ್ಥಿತ್ವದಲ್ಲಿ ಇತ್ತು
1492 ರಲ್ಲಿ ಭಾರತಕ್ಕೆ ಬಂದ ಪೋರ್ಚಗೀಸರಾದಿಯಾಗಿ ಭಾರತವಾಳಿದ ಆಂಗ್ಲರು ವ್ಯಾಪಾರಕ್ಕಾಗಿ ಭಾರತಕ್ಕೆಬಂದು ರಾಷ್ಟ್ರೀಯತೆಯ ಕೊರತೆಯಿಂದ ಅನೈಕ್ಯದಿಂದ ಕಚ್ಚಾಡುತ್ತಿದ್ದ ಭಾರತೀಯರನ್ನು ಸೋಲಿಸಿ ರಾಜ್ಯಾಡಳಿತ ಮಾಡಿದರು. ಆಡಳಿತದ ಅನುಕೂಲಕ್ಕೆ ಭಾರತೀಯರಿಗೆ ನೀಡಿದ ಶಿಕ್ಷಣದಿಂದ ಭಾರತೀಯರು ರಾಷ್ಠ್ರೀಯತೆ ಬೆಳೆಸಿಕೊಳ್ಳಲು ಸಹಾಯಕವಾಯಿತು. ಭಾರತೀಯರು ರಾಷ್ಠ್ರೀಯತೆಗೆ ಕಾರಣವಾದ ಅಂಶಗಳೆಂದರೆ;
1) ಬ್ರೀಟಿಷರ ಆರ್ಥೀಕ ಶೋಷನೆ ಅರಿವು
2)ಭಾರತವನ್ನುಆಡಳತಕ್ಕಾಗಿಒಗ್ಗೂಡಿಸಿದ್ದು
3) ಏಕರೂಪದ ಆಡಳಿತ ವ್ಯವಸ್ಥೆ & ನ್ಯಾಯಾಂಗ ವ್ಯವಸ್ಥೆ
4) ಭ್ರಿಟಿಷರು ಅನುಸರಿಸಿದ ಪ್ರತಿಗಾಮಿ ದೊರಣೆ
5) ಭಾರತದ ಪತ್ರಿಕೊದ್ಯಮ ಮತ್ತು19&20 ನೇ ಶತಮಾನದ ಆರಂಭದ ಸಾಹಿತ್ಯ ಭಾರತೀಯರಲ್ಲಿ ರಾಷ್ಟ್ರಿತೆಯನ್ನು ಪ್ರಚೋದಿಸಿವು. ರಾಷ್ಟ್ರೀಯತಯನ್ನು ಪ್ರಚೋದಿಸುವ ಅನೇಕ ಲೆಖನಗಳು & ಕವಿತೆಗಳು ಇಂಗ್ಲಿಷ ಹಾಗು ದೇಶಿ ಭಾಷೆಗಳೆರಡರಲ್ಲೂ ಪ್ರಕಟವಾದವು. ವಿದ್ವಾಂಸರು ಸಂಶೋಧನೆಗಳನ್ನು ನಡೆಸಿ ಭಾರತದ ಭವ್ಯ ಸಾಂಸ್ಕøತಿಕ ಇತಿಹಾಸದ ಮೇಲೆ ಬೆಳಕು ಚೆಲ್ಲಿದರು ಇದು ಭಾರತದ ಸಾಂಸ್ಕøತಿಕ ಪರಂಪರೆ,ರಾಷ್ಟೀಯವಾದಿಗಳಲ್ಲಿ ಹೆಮ್ಮೆ ಹಾಗು ಆತ್ಮವಿಸ್ವಾಸವನ್ನು ತುಂಬಿತು
ಭಾರತದ ರಾಷ್ಟ್ರಿಯ ಚಳುವಳಿಗಳು ವಿವಿಧ ಹಂತಗಳಲ್ಲಿ ನಡೆದವು ಅವು ಮಂದಗಾಮಿಗಳ ಹೋರಾಟ ಇರಬಹುದು ಇಲ್ಲವೆ ತೀವ್ರಗಾಮಿಗಳ ಹೋರಾಟವಿರಬಹುದು ಇಲ್ಲವೆ ಕ್ರಾಂತಿಕಾರಿಗಳು ಬ್ರಿಟಿಷರನ್ನು ಭಾರತದಿಂದ ಓಡಿಸಲು ಹಿಂಸಾತ್ಮಕ ಚಟುವಟಿಕೆಗಳಿಗೆ ಸಿದ್ದರಿದ್ದ ಗುಪ್ತ ಸಂಘಗಳಿರಬಹುದು,ಇವರೆಲ್ಲರ ಪ್ರಯತ್ನದ ಫಲದಿಂದ ಭಾರತಕ್ಕೆ ಸ್ವಾತಂತ್ರ್ಯ ದೊರಕಿತು.
1947 ರ ಸಂವಿಧಾನೀಯ ಶಾಸನವು ಭಾರತವನ್ನು ಎರಡು ದೇಶಗಳಾಗಿ ವಿಭಜಿಸಲು ಮತ್ತು ಇಲ್ಲಿಯ ಸಂಸ್ಥಾನಗಳು ತಮ್ಮಗಿಷ್ಟವಾದ ದೇಶದಲ್ಲಿ ಸೇರಲು ಇಲ್ಲವೆ ಸ್ವತಂತ್ರವಾಗಿಲು ಅವಕಾಶ ಮಾಡಿಕೊಟ್ಟಿತು ಇದನ್ನೆ ಆಧಾರವಾಗಿಟ್ಟುಕೊಂಡ ಜುನಾಗಡ,ಹೈದರಾಬಾದ,ಕಾಶ್ಮಿರ ಸಂಸ್ಥಾನಗಳು ವಿಲೀನಕ್ಕೆ ಹಿಂದೆ ಮುಂದೆ ನೋಡಿದವು ಸರ್ದಾರ ವಲ್ಲಭಬಾಯಿ ಪಟೇಲರ ದಿಟ್ಟ ನಿರ್ದಾರದಿಂದಾಗಿ 550 ಕ್ಕೂ ಹೆಚ್ಚು ಸಂಸ್ಥಾನಗಳು ಭಾರತದಲ್ಲಿ ವಿಲೀನಗೊಂಡವು, ಈ ಅಖಂಡತೆಯನ್ನು ಕಾಪಾಡಿದ ಸರ್ದಾರ ವಲ್ಲಭಬಾಯಿ ಪಟೇಲರ ಜಯಂತಿಯನ್ನು ಏಕತಾ ದಿನವನ್ನಾಗಿ ಆಚರಿಸುತ್ತಿದ್ದೆವೆ, ಭಾರತ ಸಕಾರವು ಗುಜರಾತಿನ ಸರ್ದಾರ ಸರೊವರದಲ್ಲಿ 182 ಮೀಟರ ಬೃಹತ್ಮೂರ್ತಿಯನ್ನು ನಿರ್ಮಿಸಿ ಅವರಿಗೆ ಗೌರವ ಅರ್ಪಿಸಿದೆ.
ಮಕ್ಕಳಲ್ಲಿ ಮನೆಯಿಂದಲೆ ರಾಷ್ಟ್ರೀಯತೆ ಪ್ರಾರಂಭವಾಗುತ್ತದೆ ಪಾಲಕರಿಗೆ ಪ್ರಣಾಮ, ಹಿರಿಯರಿಗೆ ಗೌರವ,ಪ್ರೀತಿ ತೊರಿಸುವ ಮೂಲಕ ಪ್ರಾರಂಭವಾಗುತ್ತದೆ ಶಾಲೆಗೆ ಸೇರಿದ ಮೆಲೆ ರಾಷ್ಟ್ರಗೀತೆ ಹಾಡುವ ಮೂಲಕ ಗೀತೆಯಲ್ಲಿ ವರ್ಣಸಿದ ಪಂಜಾಬ ಸಿಂದ್ ಗುಜರಾತ ಮರಾಠ ದ್ರಾವಿಡ ಉತ್ಕಲ ವಂಗ ಪ್ರದೇಶಗಳ ಪರಿಚಯದೋಂದಿಗೆ ವಿಂದ್ಯ ಹಿಮಾಚಲ ಯಮುನಾ ಗಂಗಾ ನಮ್ಮ ದೇಶದ ಹಿಮಾಲಯ ನದಿ ಬೆಟ್ಟಗಳ ವರ್ಣನೆ ಭಾರತದ ಬಗ್ಗೆ ಅಭಿಮಾನ ಹೊಂದುವಂತ ಮಾಡುತ್ತದೆ, ರಾಷ್ಟ್ರಗೀತೆ,ರಾಷ್ಟ್ರದ್ವಜ,ರಾಷ್ಟ್ರ ಚಿಹ್ನೆ ರಾಷ್ಟ್ರಿಯ ಹಬ್ಬಗಳು ರಾಷ್ಟ್ರಾಭಿಮಾನ ಬೆಳೆಯುವಂತೆ ಮಡುತ್ತವೆ. ಬಾರತೀಯ ಇತಿಹಾಸ, ಸ್ಮಾರಕಗಳು ವಸ್ತು ಸಂಗ್ರಹಾಲಯಗಳು, ನಮ್ಮ ಮಹಾನ್ ಪರಂಪರೆ, ರಾಷ್ಟ್ರಕ್ಕಾಗಿ ಹೋರಾಡಿ ಮಡಿದ ಮಹಾಪುರುಷರ ಜೀವನ ಚರಿತ್ರೆಗಳು ಮಕ್ಕಳು ಹೆಮ್ಮೆ ಪಡುವಂತೆ ಮಾಡುತ್ತವೆ.
ಭಾರತ ದೇಶ 3287263 ಚ.ಕಿ ಮೀ ವಿಸ್ಥಾರ ಹೊಂದಿದ್ದು ಅಪಾರ ಖನಿಜ ಸಂಪನ್ನೂಲಗಳ ಆಗರವಾಗಿದೆ ನಿತ್ಯ ಹರಿದ್ವರ್ಣ ಕಾಡುಗಳಿಂದ ಹಿಡಿದು ಕುರುಚಲ ಸಸ್ಯವರ್ಗಗಳವರೆಗೆ ಅಪಾರ ಸಸ್ಯ ರಾಶಿ ಹಾಗೂ ಪ್ರಾಣಿ ಸಂಕುಲಗಳನ್ನು ಹೊಂದಿದೆ.ಭಾರತದ ಇತಿಹಾಸವು ವಿಶ್ವದ ಆರಂಭಿಕ ಇತಿಹಾಸಗಳಲ್ಲಿ ಒಂದಾಗಿದೆ. ಭಾರತೀರು “ವಸುದೈವಕ ಕುಟುಂಬಂ” ಹಾಗೂ ಸರ್ವೇಜನ ಸುಖಿನೋಭವಂತು ಎಂಬ ತತ್ವದಲ್ಲಿ ನಂಬಿಕೆ ಹೊಂದಿದ್ದಾರೆ ಇದರರ್ಥ ವಿಶ್ವವೆ ಕುಟುಂಬ,ಸಮಸ್ತ ಜನರಿಗೆ ಸುಖವಾಗಲಿ ಎಂದಾಗುತ್ತದೆ
ಭಾರತಿಯೀರು ಜಗತ್ತಿನ ಸಾಹಿತ್ಯ,ತತ್ವಜ್ಞಾನ ಸಂಗೀತ,ವಾಸ್ತುಶಿಲ್ಪ,ವಿಜ್ಞಾನ ಯೋಗ,ವೈದ್ಯಕೀಯ, ಖಗೋಳಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.ವಾಸ್ತುಶಿಲ್ಪ ಹಾಗೂ ಸಾಂಸ್ಕøತಿಕ ಸ್ಮಾರಕಗಳಾದ ಕೋಟೆಗಳು ಗಿರಿದುರ್ಗ,ಅರಮನೆಗಳು,ದೇವಾಲಯಗಳು,ಸಮಾದಿಗಳು,ಗುಹೆಗಳು ಭಾರತೀಯ ಕಲಾಶ್ರೇಷ್ಠತೆಯ ಕುರುಹುಗಳಾಗಿವೆ. ವಿಶ್ವಸಂಸ್ಥೆಯು ಹಂಪಿ ಐಹೊಳೆ ಪಟ್ಟದಕಲ್ ಕಜರಾಹೋ ಕೊನಾರ್ಕ ತಾಜಮಹಲ್ ಜಂತರ್ ಮಂತರ್ ಸಾಂಚಿ ಅಜಂತಾ ಎಲ್ಲೋರ ಮುಂತಾದ ಮೂವತ್ತಕ್ಕೂ ಹೆಚ್ಚು ತಾಣಗಳನ್ನು ವಿಶ್ವಪಾರಂಪರೆ ಪಟ್ಟಿಗೆ ಸೇರಿಸಿದೆ.
ನಿಸರ್ಗಸೌಂದರ್ಯ ತಾಣಗಳಾದ ಗಿರಿದಾಮಗಳು ಹಿಮಾಲಯ ಕಾಶ್ಮೀರಕಣಿವೆ ಕೇರಳದ ರಾಷ್ಟ್ರೀಯ ಉದ್ಯಾನಗಳು ಕಡಲತೀರಗಳು ಮತ್ತು ಐತಿಹಾಸಿಕ ಸ್ಮಾರಕಗಳು ವಿಶ್ವದಾದ್ಯಂತ ಪ್ರವಾಸಿಗರನ್ನು ಆಕರ್ಷಿಸಿಸುತ್ತವೆ
ಭಾರತ ದೇಶದ ರಾಷ್ರಚಿಹ್ನೆ,ರಾಷ್ಟ್ರಗೀತೆ,ರಾಷ್ಟ್ರಧ್ವಜ ರಾಷ್ಟ್ರೀಯ ಹಬ್ಬಗಳು ನಮ್ಮನ್ನು ಒಂದುಗೂಡಿಸುವ ಮಹಾನ್ ಶಕ್ತಿಗಳು ನಮ್ಮಲ್ಲಿ ಭೌಗೋಳಕ,ಜನಾಂಗೀಯ,ಭಾಷಾ ಸಾಮಾಜಿಕ ಮತ್ತು ಧಾರ್ಮಿಕ ಆರ್ಥಿಕ ವೈವಿಧ್ಯತೆಗಳೇನೆ ಇದ್ದರೂ ನಾವು ಅಖಂಡವಾಗಿದ್ದೇವೆ,ಇದಕ್ಕೆ ಕಾರಣ ಭಾರತವನ್ನು ಹಿಮಾಲಯ ಜಗತ್ತಿನ ಇತರೆ ಭಾಗಗಳಿಂದ ಪ್ರತ್ಯೇಕಗೊಳಿಸಿ ಒಂದು ಪ್ರತ್ಯೇಕ ಭೌಗೋಳಕ ವಿಭಾಗ ಮಾಡಿದೆ ಅಲ್ಲದೆ ಭಾರತದ ಪ್ರಾಚೀನ ಆಡಳಿತ ವ್ಯವಸ್ಥೆಗಳು ಬಹುತೇಕ ಏಕರೂಪವಾಗಿದ್ದು ಅವು ಚಾಣಕ್ಯನ ಅರ್ಥಶಾಸ್ತ್ರದಿಂದ ಹೊರಹೊಮ್ಮಿದವುಗಳಾಗಿವೆ.ಪ್ರಾಚೀನ ಭಾರದಲ್ಲಿ ಏಕರೂಪದ ಆಡಳಿತ ಶಿಕ್ಷಣ &ಸಾಹಿತ್ಯವಿತ್ತು, ರಾಮಾಯಣ ಮತ್ತು ಮಹಾಭಾರತ ಮತ್ತು ಮಹಾಭರತ, ಭಗವದ್ಗೀತೆಗಳು ಭಾರತೀಯರಲ್ಲಿ ಏಕತೆಯ ಭಾವವನ್ನು ತುಂಬಿವೆ.
ರಾಷ್ಟ್ರದ ಗಡಿಯಲ್ಲಿ ನಮಗೆ ರಕ್ಷಣೆ ನಿಡುತ್ತಿರುವ ನಮ್ಮ ವೀರ ಸೈನಿಕರು ತಮ್ಮ ಪ್ರದೇಶ ಭಾಷೆ,ಜಾತಿ,ಧರ್ಮವನ್ನು ಮೀರಿ ನಮಗಾಗಿ ಪ್ರಾಣಾರ್ಪಣೆ ಮಾಡುತ್ತಿರುವದು ರಾಷ್ಟ್ರೀಯತೆಯಲ್ಲದೆ ಇನ್ನೇನು ? ಇದರ ಯಾವುದೆ ಪರಿವೆ ಇಲ್ಲದೆ ದೇಶದ ಒಳಗಡೆ ಕೆಲವು ವಿಛ್ಛಿದ್ರಕಾರಿ ಶಕ್ತಿಗಳು ಅಂದರೆ ನಕ್ಸಲ್ಯೆಟ ಸಮಸ್ಯೆ ಭಯೋದಕತೆ ಕಾಶ್ಮೀರ ಸಮಸ್ಯೆ ಈಶಾನ್ಯ ಭಾರತದ ಸಮಸ್ಯೆಗಳು,ನಿರಾಶ್ರಿತರ ಸಮಸ್ಯೆ ಮುಂತಾದವು ಭರತದ ಪ್ರಗತಿಗೆ ಮಾರಕವಾಗಿವೆ ಇವುಗಳೆಲ್ಲವನ್ನು ಮೀರಿ ಜಾಗತಿಕವಾಗಿ ಎದ್ದು ನಿಲ್ಲಬೇಕಾದರೆ ಅದಕ್ಕೆ ರಾಷ್ಟ್ರೀಯತೆ ಒಂದು ಪರಿಹಾರವಾಗಬಲ್ಲದು. ಇತ್ತೀಚಗೆ ಕೇಂದ್ರ ಸರಕಾರ ನಾಗರಿಕ ಸೇವೆಗೆ ಸೇರಬೇಕಾದರೆ ಸೈನಿಕ ಸೇವೆ ಕಡ್ಡಾಯಮಾಡಬೇಕೆಂದು ಚಿಂತಿಸುತ್ತಿರುವದು ಇದೆ ಕಾರಣಕ್ಕಾಗಿ ಅಲ್ಲವೆ, ಒಟ್ಟಾರೆಯಾಗಿ ಭಾರತೀಯರಾದ ನಾವೆಲ್ಲ ರಾಷ್ಟಕ್ಕಾಗಿ ನಿಷ್ಠರಾಗಿರುವುದು ನಮ್ಮ ಕರ್ತವ್ಯವಾಗಿದೆ. ದೇಶವನ್ನು ನಾವು ತಾಯಿ ಎಂದು ಭವಿಸಬೇಕು ತಾಯಿ ತನ್ನ ಮಗುವನ್ನು ಹೆಗೆ ಸಂರಕ್ಷಿಸುವಳೋ ಹಾಗೆಯೇ ದೇಶವು ನಮ್ಮನ್ನು ರಕ್ಷಿಸತ್ತದೆ ಜೈ ಭಾರತ ಮಾತೆ ಜೈ ಕರ್ನಾಟತಕ ದೇವಿ.
No comments:
Post a Comment