Tuesday, December 11, 2018

ಮಕ್ಕಳ ಕಲಿಕೆಯಲ್ಲಿ ಭಾರತೀಯ ಪ್ರಜ್ಞೆ

ಮಕ್ಕಳ ಕಲಿಕೆಯಲ್ಲಿ ಭಾರತೀಯ ಪ್ರಜ್ಞೆ 
      ಮಕ್ಕಳೇ ನಮಗೆಲ್ಲ ಹೆಮ್ಮೆಯ ವಿಷಯ ಏನೆಂದರೆ ಭಾರತ ದೇಶ 32,87,263 ಚ.ಕಿ ಮೀ ವಿಸ್ಥಾರ ಹೊಂದಿದ್ದು ಜಗತ್ತಿನಲ್ಲಿ ಏಳನೇ ದೊಡ್ಡ ದೇಶ, ಮಾನವ ಸಂಪನ್ಮೂಲದಲ್ಲಿ2ನೇ ದೇಶ.  ಭಾರತವನ್ನು ಒಂದು ಉಪಖಂಡವೆಂದು ಕರೆಯಲಾಗಿದೆ ಅಂದರೆ ಭಾರತದಲ್ಲಿ ಒಂದು ಖಂಡದಲ್ಲಿ ಇರಬೇಕಾದ ಎಲ್ಲಾ ವೈವಿದ್ಯತೆಗಳು ಭಾರತದಲ್ಲಿ ಇವೆ.
       ಜಾಗತಿಕ ನಕ್ಷೆಯನ್ನು ನೋಡಿದಾಗ ಭಾರತದೇಶವು 80  ಉತ್ತರ ಅಕ್ಷಾಂಶ ದಿಂದ 370 ಉತ್ತರ ಅಕ್ಷಾಂಶದವರೆಗೂ   680 ಪೂರ್ವ ರೇಖಾಂಶದಿಂದ 980 ಪೂರ್ವ ರೇಖಾಂಶದವರೆಗೊ ವ್ಯಾಪಿಸಿದೆ. ಉತ್ತರದಲ್ಲಿ ಹಿಮಾಲಯ ಪರ್ವತಗಳು,ಉತ್ತರದ ಮೈದಾನಗಳು, ಪರ್ಯಾಯ ದ್ವೀಪದ ಪ್ರಸ್ಥಭೂಮಿ, ಪೂರ್ವ & ಪಶ್ಚಿಮ ತೀರ ಪ್ರದೇಶಗಳು ಭಾರತದ ಸ್ವಾಭಾವಿಕ ವಿಭಾಗಗಳು. ಭಾರತವು ಸಂಪನ್ನೂಲಗಳ ಆಗರವಾಗಿದೆ ಇಲ್ಲಿ ಫಲವತ್ತಾದ ಬಯಲು ಪ್ರದೇಶ, ಖನಿಜ ಸಂಪನ್ಮೂಲ ಹೇರಳವಾಗಿದೆ. ವಿಫುಲ ಮಳೆ  ಅನುಕೂಲಕರ ಹವಾಮಾನವು ಸಂಪದ್ಭರಿತ ಮತ್ತು ವೈವಿದ್ಯಪೂರ್ಣ ಸಸ್ಯ ಹಾಗೂ ಪ್ರಾಣಿ ಸಂಕುಲಗಳ ಬೆಳವಣಿಗೆಗೆ ಕಾರಣವಾಗಿದೆ .
       ಭಾರತೀಯರಾದ ನಾವೆಲ್ಲ ಐಕ್ಯತೆಯಿಂದ ಬದುಕುತ್ತಿದ್ದೇವೆ ಈ ಐಕ್ಯತೆ ಬ್ರಿಟಷರ ಕಾಲದಲ್ಲಿ ಮಾತ್ರ ಆಗಿದ್ದಲ್ಲ, ಪುರಾತನ ಕಾಲದಲ್ಲಿ ಇರಲಿಲ್ಲ ಎಂದು ತೀರ್ಮಾನಸಿದರೆ ದೊಡ್ಡ ತಪ್ಪನ್ನು ಎಸಗಿದಂತೆ ಆಗುತ್ತದೆ ಭಾರತದಲ್ಲಿ ಐಕ್ಯತೆ ಭಾವನೆಯು ಇತ್ತೀಚನದಲ್ಲ ಮತ್ತು ಸಂಶೋಧನೆಯೂ ಅಲ್ಲ, ಇಂತಹ ಭಾವನೆ ಭಾರತದ ನಾಗರಿಕತೆ ಮತ್ತು ಸಂಸ್ಕøತಿಗೆ ಅಸ್ತಿಭಾರಹಾಕಿದವರಲ್ಲಿ ಸ್ಪಷ್ಟವಾಗಿತ್ತು. ಅವರು ಭಾರತದ ಭೌಗೋಳಿಕ ಐಕ್ಯತೆ ಬಗ್ಗೆ ಮೇಲಿಂದ ಮೇಲೆ ಸ್ಫಷ್ಟ ಮಾತುಗಳಲ್ಲಿ ಹೇಳಿದ್ದಾರೆ. ಋಷಿಮುನಿಗಳು ಭಾರತವನ್ನು ಭರತವರ್ಷ & ಭರತಖಂಡ,ಎಂದು ಕರೆಯುತ್ತಿದ್ದರು.ಎಲ್ಲ ಪುರಾಣ ಮತ್ತು ಕಾವ್ಯಗಳಲ್ಲಿ ಈ ಹೆಸರು ಅಖಂಡವಾಗಿ ಪ್ರಸ್ತಾಪವಾಗಿದೆ.ವಿಷ್ಣು ಪುರಾಣದ ಒಂದು ಶ್ಲೋಕದಲ್ಲಿ;-
                                      ಉತ್ತರಂ ಯತ್ ಸಮುದ್ರಸ್ಯ ಹಿವiದ್ರಿಶ್ಚೈವ ದಕ್ಷಣಂ
                                  ವರ್ಷಂ ತದ್ಭಾರತಾಮ ನಾಮ: ಭಾರತೀಯತ್ರ ಸಂತತಿ   ಎಂದಿದೆ
ಇದರ ಅರ್ಥ;ಸಮುದ್ರದಿಂದ ಉತ್ತರಕ್ಕೆ ಮತ್ತು ಹಿಮಾಲಯದಿಂದ ದಕ್ಷಿಣಕ್ಕೆ ಇರುವ ದೇಶವೆ ಭಾರತ ಇಲ್ಲಿ ವಾಸಿಸುವ ಜನರು ಭರತನ ವಂಶಸ್ಥರು. ಭಾರತದ ಬಹು ಸಂಖ್ಯಾತರಾದ ಹಿಂದೂಗಳ ಪ್ರಾತ: ಪ್ರಾರ್ಥನೆ ಗೀತೆಯು
                 ಗಂಗೇ ಚ ಯಮುನೆಚೈವ
               ಗೋದಾವರಿ ಸರಸ್ವತಿ.
               ನರ್ಮದೇ ಸಿಂದೂ ಕಾವೇರಿ
               ಜಲಸ್ಮಿನ್ ಸನ್ನಿದಿ ಕುರು || ಎಂದಿದೆ
    ಭಾರತದಲ್ಲಿ ವಿವಿಧ ಧರ್ಮ ಜಾತಿ ಮತ್ತು ಉಪಜಾತಿಗಳು ಕಂಡುಬಂದರೂ ಸಹ ಮೂಲಭೂತವಾಗಿ ಧಾರ್ಮಿಕ ಐಕ್ಯತೆ ಇದೆ ಎಲ್ಲ ಪಂಥಗಳು ಮತಗಳು ಆಧ್ಯಾತ್ಮಿಕ ಮಹತ್ತಿನಲ್ಲಿ ನಂಬಿಕೆನ್ನಿಟ್ಟಿವೆ ಶಿವನ ಮತ್ತು ವಿಷ್ಣುವಿನ ಆರಾಧನೆ ಒಂದಲ್ಲಾ ಒಂದು ರೂಪದಲ್ಲಿ ಭಾರತದಾದ್ಯಂತ ರೂಢಿಯಲ್ಲಿದೆ.ಪುರಾತನ ಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತಗಳನ್ನು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಅದೆ ಪವಿತ್ರ ಭಾವನೆಯಿಂದ ಪಠಿಸಲಾಗುತ್ತದೆ. ಬಾರತೀಯ ಜನಜೀವನದ ಗುರಿ ಎಲ್ಲಾ ಕಡೆ ಮೋಕ್ಷ ಮತ್ತು ನಿರ್ವಾಣವಾಗಿದೆ ಧಾರ್ಮಿಕ ಆಚಾರ ವಿಚಾರಗಳು ವಿಧಿ ನಿಯಮಗಳು ಸಾಮಾನ್ಯವಾಗಿ ಒಂದೆಯಾಗಿವೆ. ಮಹಾಭಾರತದಲ್ಲಿ ಉಲ್ಲೆಖಿಸಿರುವಂತೆ ದುಷ್ಯಂತ ಶಾಕುಂತಲೆಯರ ಮಗನಾದ ಭರತನಿಂದಾಗಿ  ಭರತಖಂಡಕ್ಕೆ ಭರತವರ್ಷ ಹಾಗು ಭಾರತ ಹೆಸರು ಬಂದಿದೆ ಈ ದೇಶಕ್ಕೆ ಜಂಬೂದ್ವೀಪ,ಹಿಂದೂಸ್ಥಾನ ಮತ್ತು ಇಂಡಿಯಾ ಎಂಬ ಹೆಸರುಗಳು ಇವೆ
       ಭಾರತದ ಇತಿಹಾಸವು ವಿಶ್ವದ ಆರಂಭಿಕ ಇತಿಹಾಸಗಳಲ್ಲಿ ಒಂದಾಗಿದೆ. ಭಾರತೀಯರು “ವಸುದೈವಕ ಕುಟುಂಬಂಕಂ” ಹಾಗೂ ಸರ್ವೇಜನ ಸುಖಿನೋಭವಂತು ಎಂಬ ತತ್ವದಲ್ಲಿ ನಂಬಿಕೆ ಹೊಂದಿದ್ದಾರೆ ಇದರರ್ಥ ವಿಶ್ವವೆ ಕುಟುಂಬ,ಸಮಸ್ತ ಜನರಿಗೆ ಸುಖವಾಗಲಿ ಎಂದಾಗುತ್ತದೆ.
     ಭಾರತಿಯೀರು ಜಗತ್ತಿನ ಸಾಹಿತ್ಯ,ತತ್ವಜ್ಞಾನ ಸಂಗೀತ,ವಾಸ್ತುಶಿಲ್ಪ,ವಿಜ್ಞಾನ ಯೋಗ,ವೈದ್ಯಕೀಯ, ಖಗೋಳಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.ವಾಸ್ತುಶಿಲ್ಪ ಹಾಗೂ ಸಾಂಸ್ಕøತಿಕ ಸ್ಮಾರಕಗಳಾದ ಕೋಟೆಗಳು ಗಿರಿದುರ್ಗ,ಅರಮನೆಗಳು,ದೇವಾಲಯಗಳು,ಸಮಾದಿಗಳು,ಗುಹೆಗಳು ಭಾರತೀಯ ಕಲಾಶ್ರೇಷ್ಠತೆಯ ಕುರುಹುಗಳಾಗಿವೆ. ವಿಶ್ವಸಂಸ್ಥೆಯು ಹಂಪಿ ಐಹೊಳೆ ಪಟ್ಟದಕಲ್ ಕಜರಾಹೋ ಕೊನಾರ್ಕ ತಾಜಮಹಲ್ ಜಂತರ್ ಮಂತರ್ ಸಾಂಚಿ ಅಜಂತಾ ಎಲ್ಲೋರ ಮುಂತಾದ ಮೂವತ್ತಕ್ಕೂ ಹೆಚ್ಚು ತಾಣಗಳನ್ನು ವಿಶ್ವಪಾರಂಪರೆ ಪಟ್ಟಿಗೆ ಸೇರಿಸಿದೆ.
      ನಿಸರ್ಗಸೌಂದರ್ಯ ತಾಣಗಳಾದ ಗಿರಿದಾಮಗಳು ಹಿಮಾಲಯ ಕಾಶ್ಮೀರಕಣಿವೆ ಕೇರಳದ ರಾಷ್ಟ್ರೀಯ ಉದ್ಯಾನಗಳು ಕಡಲತೀರಗಳು ಮತ್ತು ಐತಿಹಾಸಿಕ ಸ್ಮಾರಕಗಳು ವಿಶ್ವದಾದ್ಯಂತ ಪ್ರವಾಸಿಗರನ್ನು ಆಕರ್ಷಿಸಿಸುತ್ತವೆ
   
       ಪ್ರಾಚೀನ ಬಾರತವು ಭಾರತೀಯರ ಅನೈಕ್ಯತೆಯಿಂದ ಹಲವಾರು ದಾಳಿಗಳನ್ನು ಕಾಣುವಂತಾಯಿತು ಗ್ರಿಕರು (ಅಲೆಗ್ಸಾಂಡರ) ಭಾರತದ ಮೆಲೆ ದಾಳಿ ಮಾಡಿದರು ಮತ್ತು ಭಾರತೀಯ ಸಂಸ್ಕøತಿಗೆ ತಮ್ಮದೆಯಾದ ಅಮೂಲ್ಯ ಕೊಡುಗೆ ನೀಡಿದ್ದಾರೆ. ಮೌರ್ಯರು ಭರತದಲ್ಲಿ ಮೊದಲು ಬಾರಿಗೆ ವಿಶಾಲವಾದ ಸಾಮ್ರಾಜ್ಯವನ್ನು ಕಟ್ಟಿ ಅಡಳಿತ ಮಾಡಿದರು ಅದರ ಶ್ರೇಯಸ್ಸು ಚಂದ್ರಗುಪ್ತ ಮೌರ್ಯ ಮತ್ತು ಆಶೋಕನಿಗೆ ಸಲ್ಲಬೇಕು. ಮೌರ್ಯರ ಪತನಾನಂತರ ಶಕರು&ಕುಶಾನರು ಭಾರತದ ಮೇಲೆ ದಾಳಿ ಮಾಡಿದರು. ಕುಶಾನರು ಭಾರತದ ಮೆಲೆ ದಾಳಿ ಮಾಡಿ ಭಾರತದಲ್ಲಿ ಅಧಿಕಾರ ಸ್ಥಾಪಿಸಿದರು ಮುಂದೆ ಅವರು ಭಾರತೀಯರೆ ಆಗಿ ಹೋದರು ಮತ್ತು ಬಾರತದ ಸಂಸ್ಕøತಿಗೆ ತಮ್ಮದೆ ಆದ ಕೊಡುಗೆಯನ್ನು ನೀಡಿದ್ದಾರೆ. ಗುಪ್ತರು ಸಾಹಿತ್ಯ, ವಿಜ್ಞಾನ,ಖಗೋಳ,ಕಲೆ ಮತ್ತು ವಾಸ್ತುಶಿಲ್ಪಕ್ಕೆ ನೀಡಿದ ಕೊಡುಗೆ ಅವಿಸ್ಮರಣೀಯ,ಅವರು ಭಾರತದಲ್ಲಿ ಸುವರ್ಣ ಯುಗ ನಿರ್ಮಿಸಿದರು.   ಭಾರತದಲ್ಲಿ ಆಶೋಕನ ನಂತರ ವಿಸ್ತಾರವಾದ ಸಾಮ್ರಾಜ್ಯ ಕಟ್ಟಿದ ಶ್ರೇಯಸ್ಸು ಸಮುದ್ರಗುಪ್ತನಿಗೆ ಸಲ್ಲುತ್ತದೆ ಈ ಅವದಿಯಲ್ಲಿ ಹೂಣರ ದಾಳಿಯು ಗುಪ್ತರ ಅವನತಿಗೆ ಅಲ್ಪ ಮಟ್ಟನ ಕಾರಣವಾಯಿತು.
     ಭಾರತದ ಮೇಲೆ ದಾಳಿ ಮಾಡಿದ ಮುಸ್ಲಿಮರಲ್ಲಿ ಅರಬ್ಬರು ಮೊದಲಿಗರು 712ರಲ್ಲಿ ಬಸ್ರಾ ಪ್ರಾಂತ್ಯದ ರಾಜ್ಯಪಾಲನಾಗಿದ್ದ ಬಿನ್ ಖಾಸಿಮ ಭಾರತದ ಮೇಲೆ ದಾಳಿ ಮಾಡಿ ಅಪಾರ ರಕ್ತಪಾತಕ್ಕೆ ಕಾರಣನಾದ ಆದರೆ ಅದು ಭಾರತದ ಕೆಲವೆ ಭಗಕ್ಕೆ ಮಾತ್ರ ಸೀಮಿತವಾಗಿತ್ತು ಸಾಶ.1000 ರಿಂದ 1027 ರ ವರೆಗೆ ಘಜ್ನಿ ಮಹಮದ 17 ಸಾರಿ ದಂಡಯತ್ರೆ ಮಾಡಿದ ಈ ಅವದಿಯಲ್ಲಿ ಗುಜರಾತಿನ ಸೋಮನಾಥದವರೆಗೂ ಬಂದಾಗ ಅತ್ಯಂತ ಸಣ್ಣ ಸೈನ್ಯದ ಘಜ್ನಿ ಮಹಮದ್ ನನ್ನು ಎದುರಿಸಲಾರದ್ದು ರಾಷ್ಟ್ರೀಯತೆಯ ಕೊರತೆಯಲ್ಲದೆ ಇನ್ನೆನು ? ನಂತರ ಒಂದುವರೆ ಶತಮಾನಗಳವರೆಗೆ ಭಾರತ ಯಾವುದೆ ದಾಳಿಗೆ ಒಳಗಾಗಲಿಲ್ಲಿ ಸಾ.ಶ 1175 ರಿಂದ ಮಹಮ್‍ದ ಘೊರಿ ದಾಳಿ ಪ್ರಾರಂಭವಾಗಿ ಸಾ.ಶ. 1206 ರಲ್ಲಿ ಭಾರತದಲ್ಲಿ ದೆಹಲಿ ಸುಲ್ತಾನರ ಆಡಳಿತ ಪ್ರಾರಂಭವಾಗುವಂತಾಯಿತು. ಇದೆ ಅವದಿಯಲ್ಲಿ ಅಂದರೆ 1221 ರಲ್ಲಿ ವಾಯವ್ಯ ಭಾರತದಲ್ಲಿನಡೆದ ಚೆಂಘೀಜಖಾನ ದಾಳಿ,ಸಾ.ಸ.1399 ರಲ್ಲಿ ದೆಹಲಿಯನ್ನು ನಡುಗಿಸಿದ ಕುಂಟ ತೈಮೂರನ ದಾಳಿಯು ಉಲ್ಲೇಖನಾರ್ಹ.  ಸಾ.ಶ.1526 ರಿಂದ 1707 ರ ವರೆಗೆ ಆಳಿದ ಮೊಗಲರು ವಿದೇಶಿಗರೆ ಅವರ ವಂಶದ  ಕುಡಿ 1857 ರ ವರೆಗೆ ಅಸ್ಥಿತ್ವದಲ್ಲಿ ಇತ್ತು.ಯಾರೆ ದಾಳಿ ಮಾಡಿರಲಿ ಬಹುತೇಕ ಅವರೆಲ್ಲರು ಭಾರತಿಯರೆ ಆಗಿ ಹೊಗಿದ್ದಾರೆ ಹಾಗಾಗಿ ಜವಾಹರಲಾಲ ನೆಹರೂರವರು ಭಾರತವನ್ನು ಕರಗಿಸು ಮೂಸೆ ಂದು ಕರೆದಿದ್ದಾರೆ.

      1498 ರಲ್ಲಿ ಪೋರ್ಚಗೀಸರು ಭಾರತಕ್ಕೆಹೊಸ ಜಲಮಾರ್ಗ ಕಂಡುಹಿಡಿದ ಮೆಲೆ ಯುರೋಪಿಯನ್ನರು ಭಾರತಕ್ಕೆ ಬರಲಾರಂಭಿಸಿಸದರು. ಆಂಗ್ಲರು ವ್ಯಾಪಾರದ ಉದ್ದೇಶವಿಟ್ಟುಕೊಂಡು ಭಾರತಕ್ಕೆ ಬಂದಿದ್ದರೂ ಕೂಡಾ ರಾಷ್ಟ್ರೀಯತೆಯ ಕೊರತೆಯಿಂದ ಅನೈಕ್ಯದಿಂದ ಕಚ್ಚಾಡುತ್ತಿದ್ದ ಭಾರತೀಯರನ್ನು ಸೋಲಿಸಿ ರಾಜ್ಯಾಡಳಿತ ವಶಪಡಿಸಿಕೊಂಡರು. ಆಡಳಿತದ ಅನುಕೂಲಕ್ಕೆ ಭಾರತೀಯರಿಗೆ ನೀಡಿದ ಶಿಕ್ಷಣದಿಂದ ಭಾರತೀಯರು ರಾಷ್ಠ್ರೀಯತೆ ಬೆಳೆಸಿಕೊಂಡರು.
ಭಾರತೀಯರ ರಾಷ್ಠ್ರೀಯತೆಗೆ ಕಾರಣವಾದ ಅಂಶಗಳೆಂದರೆ;
 1) ಬ್ರೀಟಿಷರ ಆರ್ಥೀಕ ಶೋಷನೆ ಅರಿವು

 3) ಏಕರೂಪದ ಆಡಳಿತ ವ್ಯವಸ್ಥೆ & ನ್ಯಾಯಾಂಗ ವ್ಯವಸ್ಥೆ
 4) ಭ್ರಿಟಿಷರು ಅನುಸರಿಸಿದ ಪ್ರತಿಗಾಮಿ ದೊರಣೆ
 5) ಭಾರತದ ಪತ್ರಿಕೊದ್ಯಮ ಮತ್ತು19 & 20 ನೇ ಶತಮಾನದ ಆರಂಭದ ಸಾಹಿತ್ಯ ಭಾರತೀಯರಲ್ಲಿ ರಾಷ್ಟ್ರಿತೆಯನ್ನು ಪ್ರಚೋದಿಸಿವು. ರಾಷ್ಟ್ರೀಯತಯನ್ನು ಪ್ರಚೋದಿಸುವ ಅನೇಕ ಲೆಖನಗಳು & ಕವಿತೆಗಳು ಇಂಗ್ಲಿಷ ಹಾಗು ದೇಶಿ ಭಾಷೆಗಳೆರಡರಲ್ಲೂ ಪ್ರಕಟವಾದವು. ವಿದ್ವಾಂಸರು ಸಂಶೋಧನೆಗಳನ್ನು ನಡೆಸಿ ಭಾರತದ ಭವ್ಯ ಸಾಂಸ್ಕøತಿಕ ಇತಿಹಾಸದ ಮೇಲೆ ಬೆಳಕು ಚೆಲ್ಲಿದರು ಇದು ಭಾರತದ ಸಾಂಸ್ಕøತಿಕ ಪರಂಪರೆ,ರಾಷ್ಟೀಯವಾದಿಗಳಲ್ಲಿ ಹೆಮ್ಮೆ ಹಾಗು ಆತ್ಮವಿಸ್ವಾಸವನ್ನು ತುಂಬಿತು
           ಭಾರತದ ರಾಷ್ಟ್ರಿಯ ಚಳುವಳಿಗಳು ವಿವಿಧ ಹಂತಗಳಲ್ಲಿ ನಡೆದವು ಅವು ಮಂದಗಾಮಿಗಳ ಹೋರಾಟ ಇರಬಹುದು ಇಲ್ಲವೆ ತೀವ್ರಗಾಮಿಗಳ ಹೋರಾಟವಿರಬಹುದು ಇಲ್ಲವೆ ಕ್ರಾಂತಿಕಾರಿಗಳು ಬ್ರಿಟಿಷರನ್ನು ಭಾರತದಿಂದ ಓಡಿಸಲು ಹಿಂಸಾತ್ಮಕ ಚಟುವಟಿಕೆಗಳಿಗೆ ಸಿದ್ದರಿದ್ದ ಗುಪ್ತ ಸಂಘಗಳಿರಬಹುದು,ಇವರೆಲ್ಲರ ಪ್ರಯತ್ನದ ಫಲದಿಂದ ಭಾರತಕ್ಕೆ ಸ್ವಾತಂತ್ರ್ಯ ದೊರಕಿತು.
1947 ರ ಸಂವಿಧಾನೀಯ ಶಾಸನವು ಭಾರತವನ್ನು ಎರಡು ದೇಶಗಳಾಗಿ ವಿಭಜಿಸಲು ಮತ್ತು ಇಲ್ಲಿಯ ಸಂಸ್ಥಾನಗಳು ತಮ್ಮಗಿಷ್ಟವಾದ ದೇಶದಲ್ಲಿ ಸೇರಲು ಇಲ್ಲವೆ ಸ್ವತಂತ್ರವಾಗಿಲು ಅವಕಾಶ ಮಾಡಿಕೊಟ್ಟಿತು ಇದನ್ನೆ  ಆಧಾರವಾಗಿಟ್ಟುಕೊಂಡ ಜುನಾಗಡ,ಹೈದರಾಬಾದ,ಕಾಶ್ಮಿರ ಸಂಸ್ಥಾನಗಳು ವಿಲೀನಕ್ಕೆ ಹಿಂದೆ ಮುಂದೆ ನೋಡಿದವು ಸರ್ದಾರ ವಲ್ಲಭಬಾಯಿ ಪಟೇಲರ ದಿಟ್ಟ ನಿರ್ದಾರದಿಂದಾಗಿ 550 ಕ್ಕೂ ಹೆಚ್ಚು ಸಂಸ್ಥಾನಗಳು ಭಾರತದಲ್ಲಿ ವಿಲೀನಗೊಂಡವು, ಈ ಅಖಂಡತೆಯನ್ನು ಕಾಪಾಡಿದ ಸರ್ದಾರ ವಲ್ಲಭಬಾಯಿ ಪಟೇಲರ ಜಯಂತಿಯನ್ನು ಏಕತಾ ದಿನವನ್ನಾಗಿ ಆಚರಿಸುತ್ತಿದ್ದೆವೆ, ಭಾರತ ಸಕಾರವು ಗುಜರಾತಿನ ಸರ್ದಾರ ಸರೊವರದಲ್ಲಿ 182 ಮೀಟರ ಬೃಹತ್‍ಮೂರ್ತಿಯನ್ನು  ನಿರ್ಮಿಸಿ ಅವರಿಗೆ ಗೌರವ ಅರ್ಪಿಸಿದೆ.
    .
 
                                                                                                                                                                                                                                                                                                                                                                                                                                                                                                                                                                      ಭಾರತ ದೇಶದ ರಾಷ್ರಚಿಹ್ನೆ,ರಾಷ್ಟ್ರಗೀತೆ,ರಾಷ್ಟ್ರಧ್ವಜ ರಾಷ್ಟ್ರೀಯ ಹಬ್ಬಗಳು ನಮ್ಮನ್ನು ಒಂದುಗೂಡಿಸುವ ಮಹಾನ್ ಶಕ್ತಿಗಳು ನಮ್ಮಲ್ಲಿ ಭೌಗೋಳಕ,ಜನಾಂಗೀಯ,ಭಾಷಾ ಸಾಮಾಜಿಕ ಮತ್ತು ಧಾರ್ಮಿಕ ಆರ್ಥಿಕ ವೈವಿಧ್ಯತೆಗಳೇನೆ ಇದ್ದರೂ ನಾವು ಅಖಂಡವಾಗಿದ್ದೇವೆ,ಇದಕ್ಕೆ ಕಾರಣ ಭಾರತವನ್ನು ಹಿಮಾಲಯ ಜಗತ್ತಿನ ಇತರೆ ಭಾಗಗಳಿಂದ ಪ್ರತ್ಯೇಕಗೊಳಿಸಿ ಒಂದು ಪ್ರತ್ಯೇಕ ಭೌಗೋಳಕ ವಿಭಾಗ ಮಾಡಿದೆ ಅಲ್ಲದೆ ಭಾರತದ ಪ್ರಾಚೀನ ಆಡಳಿತ ವ್ಯವಸ್ಥೆಗಳು ಬಹುತೇಕ ಏಕರೂಪವಾಗಿದ್ದು  ಅವು ಚಾಣಕ್ಯನ ಅರ್ಥಶಾಸ್ತ್ರದಿಂದ ಹೊರಹೊಮ್ಮಿದವುಗಳಾಗಿವೆ.ಪ್ರಾಚೀನ ಭಾರತದಲ್ಲಿ ಏಕರೂಪದ ಆಡಳಿತ ಶಿಕ್ಷಣ & ಸಾಹಿತ್ಯವಿತ್ತು, ರಾಮಾಯಣ ಮತ್ತು ಮಹಾಭರತ, ಭಗವದ್ಗೀತೆಗಳು ಭಾರತೀಯರಲ್ಲಿ ಏಕತೆಯ ಭಾವವನ್ನು ತುಂಬಿವೆ.

      ಇಂದು ಮಕ್ಕಲ್ಲಿ ಭಾರತೀಯತೆ ಕೊರತೆಯಾಗುತ್ತಿದೆ ಎನ್ನುವದಾದರೆ ಇದಕ್ಕೆ ಶಿಕ್ಷಣದಲ್ಲಿರುವ ದೋಷಗಳು ಕಾರಣವಲ್ಲದೆ ಇನ್ನೇನು? ಮಕ್ಕಳಲ್ಲಿ ಅದು ಮನೆಯಿಂದಲೆ ಭಾರತೀಯ ಪ್ರಜ್ಞೆ ಪ್ರಾರಂಭವಾಗಬೇಕು, ಪಾಲಕರಿಗೆ ಪ್ರಣಾಮ, ಹಿರಿಯರಿಗೆ ಗೌರವ,ಪ್ರೀತಿ ತೊರಿಸುವ ಮೂಲಕ ಸನ್ನಡತೆಯನ್ನು ಕಲಿಸಬೇಕಾಗಿದೆ. ಶಾಲೆಗೆ ಸೇರಿದ ಮೆಲೆ ಅದು ಹೆಮ್ಮರವಾಗಿ ಬೆಳೆಯುತ್ತದೆ ರಾಷ್ಟ್ರಗೀತೆ ಹಾಡುವ ಮೂಲಕ ಗೀತೆಯಲ್ಲಿ ವರ್ಣಸಿದ ಪಂಜಾಬ ಸಿಂದ್ ಗುಜರಾತ ಮರಾಠ ದ್ರಾವಿಡ ಉತ್ಕಲ ವಂಗ ಪ್ರದೇಶಗಳ ಪರಿಚಯದೋಂದಿಗೆ ವಿಂದ್ಯ ಹಿಮಾಚಲ ಯಮುನಾ ಗಂಗಾ ನಮ್ಮ ದೇಶದ ಹಿಮಾಲಯ ನದಿ ಬೆಟ್ಟಗಳ ವರ್ಣನೆ ಭಾರತದ ಬಗ್ಗೆ ಅಭಿಮಾನ ಹೊಂದುವಂತೆ ಮಾಡುತ್ತದೆ, ರಾಷ್ಟ್ರದ್ವಜ,ರಾಷ್ಟ್ರ ಚಿಹ್ನೆ ರಾಷ್ಟ್ರಿಯ ಹಬ್ಬಗಳು ರಾಷ್ಟ್ರಾಭಿಮಾನ ಬೆಳೆಯುವಂತೆ ಮಡುತ್ತವೆ. ಬಾರತೀಯ ಇತಿಹಾಸ, ಸ್ಮಾರಕಗಳು ವಸ್ತು ಸಂಗ್ರಹಾಲಯಗಳು, ನಮ್ಮ ಮಹಾನ್ ಪರಂಪರೆ, ರಾಷ್ಟ್ರಕ್ಕಾಗಿ ಹೋರಾಡಿ ಮಡಿದ ಮಹಾಪುರುಷರ ಜೀವನ ಚರಿತ್ರೆಗಳು ನಮ್ಮನ್ನು ಹೆಮ್ಮೆ ಪಡುವಂತೆ ಮಾಡುತ್ತವೆ. ರಾಷ್ಟ್ರದ ಗಡಿಯಲ್ಲಿ ನಮಗೆ ರಕ್ಷಣೆ ನಿಡುತ್ತಿರುವ ನಮ್ಮ ವೀರ ಸೈನಿಕರು ತಮ್ಮ ಪ್ರದೇಶ ಭಾಷೆ,ಜಾತಿ,ಧರ್ಮವನ್ನು ಮೀರಿ ನಮಗಾಗಿ ಪ್ರಾಣಾರ್ಪಣೆ ಮಾಡುತ್ತಿದ್ದಾರೆ. ಭಾರತ ದೇಶವು ನಮ್ಮ ನೆರೆಯ ರಾಷ್ಟ್ರಗಳೊಂದಿಗೆ ನಾಲ್ಕು ಯುದ್ದಗಳನ್ನು ಮಾಡಿದೆ 1962 ರ ಚೀನಾ ಭಾರತ ಯುದ್ಧ ಹೊರತು ಪಡಿಸಿ 1948,1966,1999 ರ ಭಾರತ ಪಾಕಿಸ್ತಾನ ಯುದ್ಧಗಳಲ್ಲಿ ನಮ್ಮ ಬಾರತೀಯ ಸೈನಿಕರು ಪರಾಕ್ರಮ ಮೆರೆದಿದ್ದಾರೆ. ಇತ್ತೀಚಗೆ ಸೈನ್ಯಕ್ಕೆ ಸೇರುತ್ತಿರವವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಕಾಣುತ್ತಿದೆ ಹೀಗಾಗಿಯೆ ಭಾರತ ಸರಕಾರ ನಾಗರಿಕ ಸೇವೆಗೆ ಸೇರುವವರಿಗೆ ಸೈನಿಕ ಸೇವೆ ಕಡ್ಡಾಯ ಮಾಡಲು ಚಿಂತಿಸುತ್ತಿದೆ ಇದರ ಯಾವುದೆ ಪರಿವೆ ಇಲ್ಲದೆ ದೇಶದ ಒಳಗಡೆ ಕೆಲವು ವಿಛ್ಛಿದ್ರಕಾರಿ ಶಕ್ತಿಗಳು  ನಕ್ಸಲ್ಯೆಟ ಸಮಸ್ಯೆ,ಭಯೋತ್ಪಾದಕತೆ, ಕಾಶ್ಮೀರ ಸಮಸ್ಯೆ, ಈಶಾನ್ಯ ಭಾರತದ ಸಮಸ್ಯೆಗಳು,ನಿರಾಶ್ರಿತರ ಸಮಸ್ಯೆ ಮುಂತಾದವಗಳನ್ನು ಜಿವಂತವಾಗಿಡಲು ಪ್ರಯತ್ನಿಸುತ್ತ್ತಿವೆ ಮತ್ತು ಭಾರತದ ಪ್ರಗತಿಗೆ ಮಾರಕವಾಗಿವೆ ಇವುಗಳೆಲ್ಲವನ್ನು ಮೀರಿ ಜಾಗತಿಕವಾಗಿ ಎದ್ದು ನಿಲ್ಲಬೇಕಾದರೆ ಅದಕ್ಕೆ ರಾಷ್ಟ್ರೀಯತೆ ಒಂದು ಪರಿಹಾರವಾಗಬಲ್ಲದು. ಒಟ್ಟಾರೆಯಾಗಿ ಭಾರತೀಯರಾದ ನಾವೆಲ್ಲ ರಾಷ್ಟಕ್ಕಾಗಿ ನಿಷ್ಠರಾಗಿರುವುದು ನಮ್ಮ ಕರ್ತವ್ಯವಾಗಿದೆ. ದೇಶವನ್ನು ನಾವು ತಾಯಿ ಎಂದು ಭಾವಿಸಬೇಕು ತಾಯಿ ತನ್ನ ಮಗುವನ್ನು ಹೆಗೆ ಸಂರಕ್ಷಿಸುವಳೋ ಹಾಗೆಯೇ ದೇಶವು ನಮ್ಮನ್ನು ರಕ್ಷಿಸತ್ತದೆ.  ಜೈ ಭಾರತ ಮಾತೆ ಜೈ ಕರ್ನಾಟಕ ದೇವಿ.



                                                                                                               ಶ್ರೀ ಬಸನಗೌಡ ಯ ಗೌಡರ
                                                                                                                    ಉಪನ್ಯಾಸಕರು
                                                                          ಬಾಲಕರ ಸರಕಾರಿ ಪ, ಪೂ,ಕಾಲೇಜು ಗುಳೇದಗುಡ್ಡ

No comments:

Post a Comment

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...