Monday, January 14, 2019

ಅಕ್ಬರನ ಸಾಧನೆಗಳು

ಅಕ್ಬರನ ಸಾಧನೆಗಳು
    ಮೊಗಲರ ಅರಸರಲ್ಲಿಯೇ ಅಕ್ಬರ ಅತ್ಯಂತ ಶ್ರೇಷ್ಟ ಅರಸ.ಶೂರ ಸೇನಾನಿಯಾಗಿ ,ದಕ್ಷ ಆಡಳಿತಗಾನಾಗಿ, ಧರ್ಮ ಸಹಿಷ್ಣುವಾಗಿ,ಕಲೆ & ಸಾಹಿತ್ಯ ಫೋಷಕನಾಗಿ ಭಾರತ ಚರಿತ್ರೆಯಲ್ಲಿ ಮಹಾಶಯನೆಂದು   ಹೆಸರಾಗಿದ್ದಾನೆ.
  ಅಕ್ಬರ ಹುಮಾಯೂನ ಹಾಗು ಹಮೀದಾಬಾನು ಬೇಗಂ ಮಗನಾಗಿ  ಸಾ.ಶ.1542 ಸಿಂಧದ ಅಮರಕೊಟದಲ್ಲಿ ಜನಿಸಿದ ತಂದೆಯ ಅಕಾಲ ಮರಣದಿಂದಾಗಿ ಚಿಕ್ಕಪ್ಪ ಬೈರಮಖಾನನ ಪೋಷಣೆಯಲ್ಲಿ ಬೆಳೆದ ಈತ ಅಧಿಕಾರಕ್ಕೆ ಬಂದಾಗ ಅನೇಕ ಆಂತರಿಕ ಸಮಸ್ಯೆಗಳನ್ನು ಎದುರಿಸಿ ಅವುಗಳಿಂದ ಮುಕ್ತನಾದ
ಸೈನಿಕ ಸಾದನೆಗಳು
2ನೇ ಪಾನಿಪತ್ ಕಾಳಗ : 1556 ಬಂಗಾಳದ ಆದಿಲ್ ಷಾನ ಮಂತ್ರಿ ಹೇಮುವನ್ನು ಪಾಣಿಪತ್ ಕದನದಲ್ಲಿ ಸೋಲಿಸಿ ದೆಹಲಿ,ಆಗ್ರಾ ವಶಪಡಿಸಿಕೊಂಡ.
ಗೊಂಡವನದ ರಾಣಿದುರ್ಗಾವತಿ ಸೋಲಿಸಿ ಗೊಂಡವನ ರಾಜ್ಯವನ್ನು ವಿಲೀನೀಕರಿಸಿಕೊಂಡ.
ಗುಜರಾತಿನ ಮುಜಾಫರ ಷಾನನ್ನು ಸೋಲಿಸಿ ಗುಜರಾತ ವಶಪಡಿಸಿಕೊಂಡ.ಬಂಗಾಲ ಓರಿಸ್ಸಗಳನ್ನು ವಶಪಡಿಸಿಕೊಂಡು ರಾಜ್ಯದಲ್ಲಿ ವಿಲಿನೀಕರಿಸಿದ. ಹಕೀಮ ಮಿರ್ಜಾನನ್ನು ಸೊಲಿಸಿ ಕಾಬುಲು ಹಾಗೂ ಕಾಶ್ಮೀರಗಳನ್ನು ವಶಪಡಿಸಿಕೊಂಡ.
ರಜಪೂತ ನೀತಿ: ಸಾಮ್ರಾಜ್ಯ ವಿಸ್ತರಿಸಲು ರಜಪೂತರೊಂದಿಗೆ ಸ್ನೇಹ ಸಂಬಂಧದ ,ಸಹಕಾರದ ಹಾಗೂ ವೈವಾಹಿಕ ಸಂಬಂಧ ಬೆಳೆಸುವ ನೀತಿಯನ್ನು ಅನುಸರಿಸಿದ. ಅಂಬರದ ಬಿಹಾರಿಮಲ್ಲನ ಮಗಳಾದ ಜೋದಾಬಾಯಿಯನ್ನು ಮದುವೆಯಾದ.ರಣತಂಭೊರ ,ಕಲಿಂಜರ ಬಿಕಾನೇರ ಮುಂತಾದ ಅರಸರು ಇವನ ಸಾರ್ವಭೌಮತ್ವವನ್ನು ಒಪ್ಪಿಕೊಂಡರು.ಅಲ್ಲದೆ ದಕ್ಷಿಣÀದ ರಾಜ್ಯಗಳಾದ ಬೀದರ್ ಖಾನ್ದೇಶ,ಅಹಮದನಗರ ಬಿಜಾಪುರ ಅಕ್ಬರನ ಸಾರ್ವಭೌಮತ್ವನ್ನು ಒಪ್ಪಿಕೊಂಡವು.
ಅಕ್ಬರನ ಆಡಳಿತ; ಸಾಮ್ರಾಜ್ಯಕ್ಕೆ ಒಂದು ಉತ್ತಮ ಆಡಳಿತ ಒದಗಿಸಿದನು ಆಡಳಿತದ ಕೇಂದ್ರವಾಗಿದ್ದ ಇವನನ್ನು ಬಾದಷಹಾ ಎಂದು ಕರೆಯಲಾಗುತ್ತಿತ್ತು.ಮಂತ್ರಿಗಳ ಸಹಾಯದಿಂದ ಆಡಳಿತ ನಿರ್ವಹಿಸುತ್ತಿದ್ದ.ಅವರುಗಳೆಂದg ವಕೀಲ,ದಿವಾನ,ದಿವಾನ್ ಇ ಅಲ್  ಮಿರ್ ಬಕ್ಷಿ,ಸದರ್ ಉಸ್ ಸದರ ಖಾನ ಇ ಸಮನ್ ಹಾಗೂ ಖಾಜಿ ಇತ್ಯಾದಿ.ಅಕ್ಬರ ತನ್ನ ಸಾಮ್ರಾಜ್ಯವನ್ನು 16 ಪ್ರಾಂತ್ಯಗಳನ್ನಾಗಿ ಮಾಡಿದ್ದ ಪ್ರಾಂತ್ಯಗಳ ಆಡಳಿತವನ್ನು ದಿವಾನ,ಬಕ್ಷಿ,ಸದರ,ಪೌಜದಾರ ಕೊತ್ವಾಲ ನೋಡಿಕೊಳ್ಳುತ್ತಿದ್ದರು.
ಮನಸಬ್ದಾರಿ ಪದ್ದತಿ: ಅಕ್ಬರ ಸೈನಿಕ ಹಾಗೂ ನಾಗರಿಕ ಆಡಳಿತದಲ್ಲಿ ಮನಸಬ್ದಾರಿ ಪದ್ದತಿ ಜಾರಿಗೆ ತಂದ ಮನಸಬ್ ಎಂದರೆ ಶ್ರ್ರೀಣಿ ಎಂದರ್ಥ ಈತನ ಆಸ್ಥಾನದಲ್ಲಿ 10ರಿಂದ 10 ಸಾವಿರದ ಸೈನಿಕರನ್ನು ನಿಯಂತ್ರಿಸುವ ವಿವಿಧ ಶ್ರೇಣಿಯ ಮನಸಬ್ದಾರರಿದ್ದರು ಮನಸಬ್ದಾರಿ ಪದ್ಧತಿಯು “ಜಾಟ” ಮತ್ತು “ಸವಾರ್’ರನ್ನು ಒಳಗೊಂಡಿತ್ತು. ಮನಸಬ್ದಾರನು ನಿರ್ವಹಿಸುವ ಸೈನಿಕರ ಸಂಖ್ಯೆಯನ್ನು ಜಾಟ ಸೂಚಿಸುತ್ತದೆ.ಸವಾರ ಎಂದರೆ ಅವನು ನಿರ್ವಹಿಸುವ ನಿರ್ದಷ್ಟ ಕುದುರೆ ಸಂಖ್ಯೆಯಾಗಿತ್ತು.
ರಾಜಾ ತೋದರ ಮಲ್ಲನ ಕಂದಾಯ ಪದ್ದತಿ: ಅಕ್ಬರನು ಕಂದಾಯ ಮಂತ್ರಿ ತೊದರ ಮಲ್ಲನಿಂದ ಅತ್ಯುತ್ಮಮ ರೀತಿಯ ಕಂದಾಯ ಪದ್ಧತಿ ರೂಪಿಸಿದ್ದ ಇದನ್ನು ಜಬ್ತಿ ಪದ್ಧತಿ ಎಂದುಕರೆಯಲಾಗಿತ್ತು ಈ ಪದ್ಧತಿಯನ್ವಯ ಭೂಮಿಯ ಫಲವತ್ತತೆ ಆಧಾರದ ಮೇಲೆ ಪೋಲಜ್, ಪರೌತಿ, ಚಚರ್, ಬಂಜರ ಎಂದು ವರ್ಗಿಕರಿಸಲಾಗಿತ್ತು.ಬಂದೋಬಸ್ತ ಪದ್ಧತಿಯಲ್ಲಿ ಸುಗ್ಗಿ ಕಾಲದಲ್ಲಿ ಅಧಿಕರಿಗಳು ವೀಕ್ಷಣೆಗೆ ಹೋಗಿ ಕೃಷಿ ಭೂಮಿಗಳ ಸ್ಥಿತಿಗತಿಗಳನ್ನು ಗಮನಿಸಿ ಸಲಹೆ ಸೂಚನೆ ಹಾಗೂ ಸಾಲ ಸೌಲಬ್ಯ ನಿಡುತ್ತಿದ್ದರು.
ಧಾರ್ಮಿಕ ನೀತಿ: ಅಕ್ಬರ ಮಧ್ಯಕಾಲೀನ ಭಾರತದಲ್ಲಿ ಜ್ಞಾನ ಸಂಪನ್ನ ಅರಸ 1581-82 ರಲ್ಲಿ ದಿನ್ –ಇ-ಇಲಾಹಿ ಎಂಬ ಹೊಸ ಧರ್ಮ ಸ್ಥಾಪಸಿದ ಈ ಹೊಸ ಧರ್ಮ ಸರ್ವರಿಗೂ ಶಾಂತಿ ಎಂಬ ತತ್ವವನ್ನಾಧರಸಿತ್ತು .ವಿವಿಧ ಮತಗಳನ್ನು ಭ್ರಾತೃ ಭಾವನೆಯಂದ ಒಗ್ಗೂಡಿಸುವ ಪ್ರಯತ್ನ ಇದಾಗಿತ್ತು.
ಸಾಹಿತ್ಯ ಫೋಷಣೆ :ಅಕ್ಬರನ ಕಾಲದಲ್ಲಿ ಅಪಾರ ಪ್ರಮಾಣದ ಸಂಸ್ಕತ ಹಾಗೂ ಇ್ರತರೆ ಭಾಷೆಯ ಸಾಹಿತ್ಯ ಕೃತಿಗಳು ಭಾಷಾಂತರಗೊಂಡವು,ರಾಮಾಯನ,ಮಹಾಭಾರತ, ರಾಜತರಂಗಿಣಿ,ಪಂಚತಂತ್ರ ಇತ್ಯಾದಿ. ಹಿಂದಿ ಸಾಹಿತ್ಯದಲ್ಲಿ ಸೂರದಾಸ, ತುಳಿಸಿದಾಸ,ಅಬ್ದುಲ್ ರಹಿಮ ಖ್ಯಾತ ಸಾಹಿತಿಗಳಾಗಿದ್ದರು.ಅಬಲ್ ಫಜಲ್ ಐನ್-ಇ-ಅಕ್ಬರಿ ಮತ್ತು ಅಕ್ಬರನಾಮಾ ಕೃತಿ ಬರೆದ.
ಕಲೆ ಮತ್ತು ವಾಸ್ತು ಶಿಲ್ಪ ;ಅಂಬರ್,ಬಿಕಾನೇರ ,ಜೋಧ್‍ಪುರ್ ಹಲವಾರು ಕಡೆ ಅರಮನೆ ನಿರ್ಮಿಸಿದನು.ಕರೆ ಕಾಲುವೆ ನಿರ್ಮಿಸಿದ,ಅವನ ಪ್ರಭಾವ ಪೂರ್ಣ ಕಟ್ಟಡಗಳನ್ನು ಪತ್ತೇಪುರ ಸಿಕ್ರಿಯಲ್ಲಿ ಕಾಣಬಹುದು.ಅವುಗಳೆಂದರೆ ಬುಲಂದ್ ದರ್ವಾಜ,ಪಂಚಮಹಲ್ ಸಲೀಂ ಚಿಸ್ತಿ ಘೋರಿ,ಜೋಧಾಬಾಯಿ ಅರಮನೆ, ದಿವಾನ -ಇ-ಅಮ್,ದಿವಾನ –ಇ-ಖಾಸ್ ಇತ್ಯಾದಿ.
   ಮೊಗಲ್ ಚಕ್ರವರ್ತಿಗಳಲ್ಲಿಯೆ ಅತ್ಯಂತ ಪ್ರಸಿದ್ದ ಅರಸನಾದ ಅಕ್ಬರ ಅನಕ್ಷರನಾದರೂ ಎಲ್ಲಾ ವಿವರ ಗಳನ್ನು ಗ್ರಹಿಸುವ ಅಗಾದವಾದ ತಿಳುವಳಿಕೆ ಹಾಗೂ ಅಪುರ್ವ ಜ್ಞಾನ ಶಕ್ತಿಯನ್ನು ಹೊಂದಿದ್ದನು ತತ್ವ ಶಾಸ್ತ್ರ ಇತಿಹಾಸ ಸಾಹಿತ್ಯಗಳಲ್ಲಿ ಅಪಾರ ಜ್ಞಾನ ಹೊಂದಿದ್ದನು. ಹಿಗಾಗಿಯೆ  ಅಕ್ಬರನನ್ನು ಮಹಾಶಯ ಎಂದು ಕರೆಯಲಾಗಿದೆ




3 comments:

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...