Monday, October 28, 2019

ಸಾಧನೆ

 ಸಾಧನೆ ಸರಳವಲ್ಲ ಶಿಷ್ಯ
 ವಿರಳರಿಗರಳವುದೀ ವಿಷ್ಯ
ತೆಗಳುವವರು ಹೊಗಳ ಬೇಕು
ಮಾಡಿದ ಕರ್ಮದ ಬೆವರು
ದೂಡುವುದು ವರ್ಮ
ಧರ್ಮ ನೀ ಪಾಲಿಸಬೇಕು
ಗರ್ವದ  ದನಿ ಸುಡಬೇಕು

ಸಾಧಕನದಲ್ಲ  ಅದು ರಹದಾರಿ
ಕಂಟಿ  ಮುಳ್ಳು ಬರಿ ಕಮರಿ
ಕರದಲಿ ಸಾಧನ ಪ್ರಶಸ್ತಿ ಗರಿ
ಕಾಲಿನ ತುಂಬಾ ನೆತ್ತರದ ಗೆರಿ



ಭಾವ ಭಾಷೆ ಬಂಧನ


ಭಾಷೆ ಒಂದು ಭಾವ ನೂರು
ಏಕೆ ಬಂಧನ
ಬಾಲ್ಯ ಕಿತ್ತು ಭಾರ ಹೆರಿ
ಏಕೆ  ನಿಂದನ
ಹಲವು ಭಾಷೆ ಕೆಲವು ವೇಷ
ಉದರ ಪೋಷಣ

ತೆಲುಗು ತಮಿಳು ಬಂಗಾಳಿ ಹಿಂದಿ
ಕನ್ನಡಕಲ್ಲ  ಬಂಧನ
ಆಗಸವೊಂದೆ ತಾರೆ ನೂರು
ಬೆಳಕು ಒಂದೆ ಕಂದನ
ಭೇಧ ಭಾವ ನಾವು ನೀವು
ಕೊಳಕು ಬೇಡ ವಂದನ

ಹಲವು ಭಾಷೆ  ಅಲ್ಲ ವಿಷ
ಭಾವ ಬೆಸುಗೆ  ಬಂಧನ
ತಾಯಿ ನುಡಿ  ಬಾಳಿಗೆ ಮುನ್ನುಡಿ
ಭಿನ್ನ ನುಡಿ  ಅನ್ನದ ನುಡಿ
ಜೊತೆಯಾಗಿ ನಡೆಸು  ಕಂದನ
















Friday, October 18, 2019

astra

ಅಣುಬಾಂಬು ತಯಾರಿಕೆ

 ಬಳಕೆಗೆ ಅಲ್ಲ

ಸ್ವಗೌರವ ,ಸ್ವಪ್ರತಿ಼ಷ್ಠೆ,ಸ್ವರಕ್ಷಣೆಗೆ

 ಸಂಹಾರಕ್ಕಲ

ಹಿಂಸೆ, ದಬ್ಬಾಳಿಕೆ,ಶೋಷಣೆ

ಸಬಲರಲ್ಲಿಇರಲ್ಲ

ಅಹಿಂಸೆ ತಾಳ್ಮೆ ಸಹಣೆ

ದುರ್ಬಲರಲ್ಲಿ ಬರಲ್ಲ

ಅಣು ಬಾಂಬ ಬಳಕೆಗೆ  ಬಿಡಬಾರದು 

ಬಿಟ್ಟರೆ ಬಿಟ್ಟ ವನು ಇಲ್ಲ

ಬಿಡಿ ಸಿಕೊಂಡವನು ಇಲ್ಲ

ಸಹನೆ ದುರ್ಬಲತೆ ಅಲ್ಲ 

ಅದು ಸಬಲ ನ ಲಕ್ಷಣ


ಅದುವೆ ಕೊನೆ ಕ್ಷಣ







Sunday, October 13, 2019

ಪ್ರವಾಹ

ಆಗಸದ ಚಪ್ಪರಕೆ ಚೂರಿ ಗೀರಿ
ಬೊಗಸೆ ನೀರು ಕಾಣದ ನೆಲವೆರಿ
ಬಂತಲ್ಲ ಈ  ಮಹಾ ಮಾರಿ
ಕನಸು ಕಾಣುವ ಕರ್ಮಯೋಗಿಯನೆರಿ
ಹಳ್ಳ ತೆಗ್ಗು ದಿಣ್ಣೆ ಮೀರಿ
ಊರು ಕೇರಿ ಆಕ್ರಮಣದ ಪೇರಿ


ಹಗಲು ರಾತ್ರಿ ಚಳಿ ಗಾಳಿ ಮೀರಿ
ಹೊಟ್ಟೆ ಬಟ್ಟೆ ಬಯಕೆಯ ಮೀರಿ
ದುಡಿದವನಿಗೆ ನೀ ತಗೆದೆ ಘೊರಿ
ಕಣ್ಣು ಬಿಟ್ಟಾಗ  ಬದುಕು ಬಿಕಾರಿ
ಭರವಸೆ ಭವಕೆ ಬೆಳಕಾದ ನದಿ
ಇಂದು ಮಸಣದಾ ಬೆಗುದಿಯ ಹಾದಿ

ಉಟ್ಟ ಬಟ್ಟೆಯಲಿ ದಟ್ಟಡವಿ ಸೇರಿ
ನಿಟ್ಟುಸಿರು ಬಿಟ್ಟು ನೊಡಿತಾ ಕೇರಿ
ಕುರಿ ಕತ್ತೆ ಗೊಗೆ ಕಾಗೆ ಗುಡಿಸಿ
ಕೊಂಪೆ ಮಾಡಿತಾ ಮರಾಠಿ  ಮಳೆ
ಮಹಾಮಳೆ  ಮೌನದುತ್ತರಕ್ಕೆ
ಮಾನವರೆಲ್ಲರು ತತ್ತರ

ನಾ ಮೇಲು ತಾ ಮೇಲು ಎಲ್ಲರೂಬುಡಮೇಲು
ಬಡವ ಶ್ರೀಮಂತ ನಿನಗೆಲ್ಲರು ಸರಿಸಮಾನಾರು
ಬದುವಿಗಾಗಿ ಬಡಿದಾಡಿ ಬೆಂದವರು ಕೊಂದವರು
ಇಂದು ಬರಿ ನೊಂದವರು ಬರಿ ನೊಂದವರು
ಬಸವಾದಿ ಶರಣರು,  ಸಂವಿಧಾನ ಹೇಳಿದರೂ
ಬೆಸೆಯದ ಸಮಾನತೆ , ಮರೆಯಿತೀಗ ಅಸಮಾನತೆ

ಬೆಂದಕಾಳೂರಿಗೆ ತಲುಪಿತು ಭವನೆ
ಹಾದಿ ಬೀದಿಗಳಲ್ಲಿ ದುಖ ಸಂತಾಪ
ದಾನ ಧರ್ಮಗಳ ಮೇಲಾಟ
ಹೃದಯ ತುಂಬೀ ನೀಡಿದವರೆಸ್ಟೋ
ಪೋಟೋಕೆ ಹಲ್ಲು ಗಿಂಜಿದವರೆಸ್ಟೋ
ನಿಸರ್ಗದುತ್ತರಕ್ಕೆ ಗರ್ವ ರೆಸ್ಟೋ ರೆಸ್ಟೋ




























"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...