Saturday, April 11, 2020

ಶಾಂತಿಗೆ ಮಂತ್ರ

ಮಂದಿರ ಮಸೀದಿಗಳನ್ನಿಂದೀಕರಿಸಿ
ಓ ಮಾನವರೆ
ಅವುಗಳನ್ನಿಂದೀಕರಿಸಿ
ಓ ಮಾನವರೆ.      //ಪ//

ಧರ್ಮವೆಂದರೆ ಸತ್ಯದ ಕಾಯಕ
ಸಂಸ್ಕಾರವೆಂದರೆ ಶಿಸ್ತಿನ ಕಾಯಕ
ಮರ್ಮ ಅರಿಯೋಣ
ಬದುಕ ಕಟ್ಟುವ ಕೇಂದ್ರಗಳಲ್ಲ
ಪಂತ ಪಂಗಡ ಬೆಳೆಸಲು
ಹೇಳಿಯೇ ಇಲ್ಲ //

ಸಂತ ಮಹಾಂತರ ತಂತ್ರ ಒಂದೆ
ಸನ್ಮಾರ್ಗ ಸನ್ನಡತೆ
ಮಂತ್ರತಾನೊಂದೆ.
ಸಾವು ಬದುಕು ಸಹಜ ಕ್ರಿಯೆ
ಹುಟ್ಟು ಸಾವಿಗೆ
ಕ್ರಿಯಾವಿಧಿ ಬೇಕೆ //

ರಾಮ, ರಹೀಮ್, ಅಬ್ರಹಾಂ, ಸಿಂಗ್,
ರಾಗಿ ಬೆಳೆಯಲು
ಭೂಮಿಗೆ ಬರಬೇಕು
ಗಣಕ ಯಂತ್ರ  ಭಯಂಕರ ತಂತ್ರ
ಭಾರ ಇಳಿಸಲು
ಅಳವಡಿಸಿದ ತಂತ್ರ //

ಮುಲ್ಲಾ ಸ್ವಾಮಿ ಎಲ್ಲರೂ ಕೂಡಿ
ಮಾನವತೆ ಬೆಳೆಸಲು
ಬಯಲಿಗೆ ಬರೋಣ//
ರಾಷ್ಟ್ರ ಕಟ್ಟಿದ ನಾಯಕರೆಲ್ಲ
ದೇಶ ಸ್ವತಂತ್ರ ಗೊಳಿಸಲು
ಧರ್ಮ ಎಣಿಸಿಯೆ ಇಲ್ಲ

              ಬಸನಗೌಡ ಗೌಡರ







No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...