Friday, April 10, 2020

ಗೌರವಿಸಿ

ಗೌರವಿಸಿ

ದುಡಿಯದೆ ಸಂಬಳ ಕೊಡುವ
ಸರಕಾರ ಇರುವಾಗ ಮನಿಯಾಗ
ಇರಾಕ ಏನ್ರೊ  ನಿಮಗ ದಾಡಿ.(2)/ಪ/

ಹೊರಗ ಬರತಿರಿ ಹೊರಿಯಂಗ
ಕುರಿ ದೊಡ್ದಿ ಬಿಟ್ಟ ಬಂದಾಂಗ   
ಪೋಲಿ ಹಡುಗರು ಪಟಿಂಗರಂಗ
ತಿರಗತಿರ ಪಿರಿ ಪಿರಿಯಾಂಗ.   //

ಪೊಲೀಸರು ಕೊಡಾ ಮನುಷ್ಯರಪ್ಪ
ತಾಳ್ಮೆ ಪರೀಕ್ಷೆ ಮಾಡ ಬ್ಯಾಡರಪ್ಪ 
ಪಟಾರ ಅಂತಾ ಬಾರಸ್ತಾರ ಬಪ್ಪ
ತಿಳಿದಿದ್ದರ ಜೈಲಿಗೆ ಕಳಸ್ಟಾರ ತಿಪ್ಪ//

ಜಗತ್ತ ತಿಪ್ಪರಲಾಗ ಹಾಕಿ ತಿಣಕಾಡಿದರ
ತಿಳಿಯವಲ್ಲದು  ರೋಗ ತಳತನಕ
ವೈದ್ಯ ನರ್ಸ ದುಡಿತಾರ ನಮಗಾಗಿ ಬೆಳತನಕ
ಮನುಷ್ಯರಾಗಿ ದಂಡಿಸಿಕೊಳ್ಳದೆ ನಾವೆಲ್ಲ ಅರಿಯಬೇಕ //

ತಪ್ಪಿನಡೆದರ ತಿಪ್ಯಾಗ ಬಿದ್ದು ಸಾಯಿತಿರಪ್ಪ
ಒಪ್ಪಿ ನಡೆದರಿನ್ನಷ್ಟ ದಿನ ಬಾಳತಿರಪ್ಪ
ತಿಳಿದವರು ಹೇಳಿದಂಗ ಕೆಳದಿದ್ದರ
ಮುನಸಿಪಾಲ್ ಹೆಣ ಅಗತಿವಪ್ಪ//

               ಬಸನಗೌಡ ಗೌಡರ

No comments:

Post a Comment

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...