ನಾನೂ ಬದುಕಬೇಕು ಎಂಬಲ್ಲಿಂದ ನಾನೇ ಬದುಕಬೇಕು ಎಂಬಲ್ಲಿಗೆ ಬಂದು ನಿಂತಿದ್ದೆವೆ .ಇದು ಅಭಿವೃದ್ದಿಯೇ ಅಥವಾ ಪ್ರಗತಿಯೆ ? ಗಿಡ ಮರ ಪ್ರಾಣಿ ಪಕ್ಷಿ ಸಕಲ ಜೀವರಾಶಿಗಳು ಬದುಕಬೇಕಲ್ಲವೆ ಇದಕ್ಕೆ ಹೊರತಾದ ಪ್ರಗತಿ ಅಥವಾ ಅಭಿವೃದ್ಧಿ ಅಭಿವೃದ್ಧಿ ಅಲ್ಲ .ಅತಿ ಬುದ್ಧಿವಂತನಾದ ಮಾನವ ಎರಡನೆಯದನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾನೆ . ಇದು ವಿಷಾದಕರ ಸಂಗತಿ.ಇದನ್ನೆ ನಾವು ಅತಿಬುದ್ಧಿವಂತಿಕೆ ಎಂದು ಕರೆಯುತ್ತಿರುವದು.ಇದು ಮಾನವ ಸಮಾಜಕ್ಕೆ ಮಾರಕ ಅತಿ ಬುದ್ಧಿವಂತಿಕೆ ಎಂದರೇನು ? ಇಲ್ಲದ್ದನ್ನು ಇದ್ದಂತೆ ಬಿಂಬಿಸುವುದು ಇದ್ದದ್ದನ್ನು ಇಲ್ಲದಂತೆ ಬಿಂಬಿಸುವದು.ವಿಜ್ಞಾನಿಗಳು ,ತಂತ್ರಜ್ಞಾನಿಗಳು ಇದಕ್ಕೆ ಹೊರತಾದವರು ತಮ್ಮ ಅನ್ವೇಷಣೆ ಮತ್ತು ಸಂಶೋಧನೆಯಿಂದ ಸಮಾಜಕ್ಕೆ ಫಲ ನಿಡುವವರು.ಆದರೆ ಅತಿ ಬುದ್ಧಿವಂತರು ಇವರ ಫಲವವನ್ನು ಗರಿಷ್ಠವಾಗಿ ಬಳಸಿಕೊಳ್ಳುತ್ತಾರೆ.ಅತಿ ಬುದ್ಧಿವಂತರು ಬ್ರಮಾಲೋಕ ಸೃಷ್ಠಸಬಲ್ಲರು ಇವರಿಗೆ ಎರಡು ಮುಖಗಳು ಒಂದು ಅಂತರ್ಮುಖ ಇನ್ನೊಂದು ಬಹಿರ್ಮುಖ ಜನಸಾಮಾನ್ಯರಿಗೆ ಇದನ್ನು ಅರಿಯಲು ಶಿಕ್ಷಣ ಬಹು ದೊಡ್ಡ ಅಸ್ತ್ರ ಇದು ಇಲ್ಲದಿದ್ದರೆ ಕಾನೂನು ಮರಿದು ಸಾಮ್ರಾಜ್ಯ ಕಟ್ಟಿದ ಕೂಳರನ್ನು ಗೌರವಿಸಿ ಕರ್ಮ ಶಪಿಸುವಂತಾಗುತ್ತದೆ.
ಅತಿ ಬುದ್ಧಿವಂತರಿಗೆ ಅತಿ ಸುಲಬವಾಗಿ ಸಿಗುವ ಅಸ್ತ್ರಗಳೆಂದರೆ ಒಂದು ಜಾತಿ ಇನ್ನೊಂದು ಧರ್ಮ. ಜಾತಿ ಬಂದದ್ದಾದರು ಹೇಗೆ ? ಪೂರ್ವ ವೇದ ಕಾಲದಲ್ಲಿ ಸರ್ವರ ಸಮೃದ್ದ ಬದುಕಿಗೆ ಅನುಕೂಲ ಕಲ್ಪಿಸಲು ಉದ್ಯೋಗ ವಿಭಜನೆ ಮಾಡಿದರು ಅವುಗಳೆ ವರ್ಣಗಳು ಇವುಗಳಲ್ಲಿ ಚಲನಶೀಲತೆ ಇತ್ತು ಆದರೆ ಮುಂದೆ ಉತ್ತರವೇದ ಕಾಲದಲ್ಲಿ ಇವು ಜಾತಿಗಳಾಗಿ ಮಾರ್ಪಟ್ಟವು ಮತ್ತು ವಂಶಪಾರಂಪರ್ಯವಾದವು ಮತ್ತು ಬದಲಿಸಲಸಾಧ್ಯವಾದವು. ಇಂದು ಈ ವ್ಯವಸ್ಥೆ ಇನ್ನಷ್ಟು ಗಟ್ಟಿಗೊಳ್ಳುತ್ತಿರುವದು ಚಿಂತನಾರ್ಹ
ಧರ್ಮ ಬಂದದ್ದಾದರೂ ಹೇಗೆ ನಿಸರ್ಗದ ನೀಗೂಢ ಅರಿಯಲು ಪ್ರಾಚೀನ ಮಾನವ ಕಂಡುಕೊಂಡ ಸಾಧನವೆ ಧರ್ಮ ಅದು ಬಂದು ನಿಂತದ್ದಾದರು ಎಲ್ಲಿಗೆ ? ಒಂದು ಧರ್ಮ ಇನ್ನೊಂದು ಧರ್ಮವನ್ನು ಸಂಶಯಪಡುವವರೆಗೆ ,ಕೃಷ್ಣ ,ಕ್ರೈಸ್ತ ಪೈಗಂಬರರು ಹೇಳಿದ್ದೇನು ಧರ್ಮದ ಹೆಸರಿನಲ್ಲಿ ನಾವು ಮಾಡುತ್ತಿರುವುದೇನು..
ಧರ್ಮದ ಪರಿಭಾಷೆ ತನ್ನ ಅರ್ಥ ಕಳೆದುಕೊಳ್ಳು ತ್ತಿರುವುದು ವಿಷಾದಕರ.ಧರ್ಮ& ಅದರಲ್ಲಿರುವ ಸಂಸ್ಕಾರಗಳು ಬಂದದ್ದೆ ಮನುಷ್ಯನಿಗೆ ಮೊಕ್ಷದ ಕಡೆಗೆ ಹೋಗಲು ದಾರಿ ಹಾಗಾದರೆ ಮೋಕ್ಷವೆಂದರೇನು ? ಮನುಷ್ಯನಿಗೆ ಸಂತೋಷ ಮತ್ತು ಸಂತೃಪ್ತಿಯನ್ನು ನೀಡುವ ಕೊನೇಯ ಬಿಂದು.ಅದಕ್ಕಾಗಿ ಧರ್ಮವು ಸಂಸ್ಕಾರಗಳನ್ನು ನಿರ್ದೇಶಿಸಿದೆ. ಸಂಸ್ಕಾರಗಳೆಂದರೇನು ? ಇನ್ನೂ ಸರಳವಾಗಿ ಹೇಳುವದಾದರೆ ಮಾನವ ತನ್ನ ಜೀವನವನ್ನು ಶಿಸ್ತಿಗೆ ಒಳಪಡಿಸುವುದು &ಇನ್ನೋಬ್ಬರ ಬದುಕಿಗೆ ಭಂಗ ಬರದಂತೆ ಸಂಯಮ ತೋರುವುದು ಸಮುದಾಯವನ್ನು ಸನ್ಮಾರ್ಗದಲ್ಲಿ ನಡೆಸುವುದೆ ಧರ್ಮದ ತಿರುಳು.ಆದರೆ ಆದದ್ದೆನು ನಾವು ಮಾಡುತ್ತಿರುವುದೇನು ಚೀನಾದ ಶ್ರೇಷ್ಟ ತತ್ವಜ್ಞಾನಿ ಕನ್ ಪ್ಯೂಸಿಯಸ್ ಹೀಗೆ ಹೇಳುತ್ತಾನೆ “ನೀವು ಇನ್ನೂಬ್ಬರು ನಿಮಗೇನು ಮಾಡಬಾರದೆಂದು ಬಯಸುತ್ತಿರೊ ಅದನ್ನು ಇನ್ನೂಬ್ಬರಿಗೆ ಮಾಡಬೇಡ “ ಪ್ರತಿಯೊಬ್ಬರು ಇದನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸುಮದುರ ಸಮಾಜ ನಿರ್ಮಿಸಲು ಸಾದ್ಯ.
ಕಾಡು ಕಡಿದು ನಾಡು ಕಟ್ಟುವ ಬರದಲ್ಲಿ ನಾವಿದ್ದೆವೆ ಅದನ್ನೆ ನಾವು ಪ್ತಗತಿ ಅಥವಾ ಅಭಿವೃದ್ಧಿ ಎಂದು ಬಾವಿಸಿದ್ದೇವೆ ನಿಸರ್ಗದ ವಿರುದ್ದವಾಗಿ ಹೋದ ಯಾವ ನಾಗರಿಕತೆ ಈ ಜಗತ್ತಿನಲ್ಲಿ ಉಳಿದಿಲ್ಲ ಅದು ವಿನಾಶಕ್ಕೆ ದಾರಿ ಆ ಕಾರಣಕ್ಕಾಗಿ ಪ್ರಾನ್ಸ ದೇಶದ ತತ್ವಜ್ಞಾನಿ ದೇಶದ ರೂಸೋ ನಿಸರ್ಗಕ್ಕೆ ಮರಳಿ “ ಎಂದು ಹೇಳಿದ್ದು ಹಾಗಾಗಿ ನಾವು ನಿಸರ್ಗದೋಂದಿಗೆ ಪ್ರಗತಿ ಹೊಂದೋಣ.
ಬಸನಗೌಡ ಯ ಗೌಡರ
ಉಪನ್ಯಾಸಕರು
ಬಾ.ಸ.ಪ.ಪೂ.ಕಾಲೇಜು ಗುಳೀದಗುಡ್ಡ
No comments:
Post a Comment