ಚೀಲ
ಚಲುವಿಗೆ ಚಿತ್ತಾರ ಬೇಕೆ
ಒಲುವೆ ಅದಕೆ ಮೂಲ
ಹಾಗಾಗಿ ನನ್ನಾಕಿ
ದಿನಾಲೂ ಕೈಯಾಗ ಇಡತಾಳ
ದಿನಸಿ ಕಾಯಿಪಲ್ಲೆ ಚೀಲ
🖋️ಬಸನಗೌಡ ಗೌಡರ
ಪಾಠ
ಶಿಕ್ಷಕ ರಕ್ಷಿತನಿಗೆ ನಡೆದಿತ್ತು ಪಾಠ
ನಗೆ ಪ್ರಕಾರಗಳು ಎಷ್ಟು ?
ಹುಡುಗ ಹೇಳಿದ, ಇರಬಹುದು
ಒಂದು ಏಳೆಂಟು
ಶಿಕ್ಷಕ ಕೇಳಿದರು, ನಸುನಗು ಎಂದರೇನು ?
ನಸುಕಿನಲ್ಲಿ ನಗುವುದೆ ನಸುನಗು.. ಹೇಳಿದ ಹುಡುಗ .
ಶಿಕ್ಷಕ ಸುಸ್ತೊ ಸುಸ್ತು
🖋️ ಬಸನಗೌಡ ಗೌಡರ
ಅತ್ತೆಭಯ
ಮಲ್ಲಿಗೆಯ ಮೊಗದವಳು
ಹಲ್ಲು ಗಿಂಜುವಳು ಒಮ್ಮೊಮ್ಮೆ
ಮುತ್ತು ಪೋಣಿಸಿದಂತೆ,
ನತ್ತು ತಿರುಗಿಸುವಳು ಇನ್ನೊಮ್ಮೆ
ಮುಂಗುರುಳು ಹೆಡೆಯೆತ್ತಿದಾಗ
ನಾ ನೋಡಲು ಹೆದರಿದೆ ಕಣ್ಣೆತ್ತಿ
ಯಾಕೆಂದರೆ ದುರುಗುಟ್ಟಿತ್ತು
ಮುಂದಾಗುವ ಅತ್ತೆ..... ನಾ ಕಾಲ್ಕಿತ್ತೆ .
ಬಸನಗೌಡ ಗೌಡರ
* ಸಾಲಿನ ಮಹಿಮೆ *
ನಿದ್ದೆಯಲೆದ್ದ ಬುದ್ದ ನಾದ
ಬುದ್ದನ ಕಥೆ ಓದಿಯೂ
ಸಂಸಾರದಲ್ಲಿ ಬಿದ್ದು
ಒದ್ದಾಡುತ್ತಿರುವೆನು ನಾ ಪೆದ್ದ/
ಕಲಾಮ ಸಾಹೇಬರಿಗೆ ಸಲಾಮ
ಹಾಕಿಯೂ ಕೆಲಸ ಕುಲಗೆಡಿಸಿ
ನಾ ಗರೀಬನಾಗಿದ್ದೆ /
ಏಕೆಂದರೆ ನಾನಿರುವದು
ಕಥೆ ಕೇಳಿಯೂ ವ್ಯತೆ ಪಡುವವರ ಸಾಲಿನಲ್ಲಿ ನಾನೊಬ್ಬನಾಗಿದ್ದೆ //
ಬಸನಗೌಡ ಗೌಡರ
ಹನಿಗವನ ಸ್ಪರ್ಧೆಗಾಗಿ
ಕ್ರಮ ಸಂ : 13
* ಕರ್ತವ್ಯ *
ಪ್ರಿಯೆ ಎದೆಯ ಬಾರದ ಮೋಡಕೆ
ಮುತ್ತುಗಳ ಮಳೆ ಸುರಿವ ಬಯಕೆ
ಹುಲುಸಾಗಿ ಬೆಳೆವೆ ಹೊಂಬಾಳೆ ಅಡಿಕೆ
ಕರ್ತಾರನ ಕಮ್ಮಟ ಕರ್ತವ್ಯ ಮರೆಯೆ
ಹೆತ್ತು ತುತ್ತ ನೀಡಿದ ಕರಗಳಿಗೆ ತರುವೆ
ಹೊತ್ತು ಸಾಗರದಿ ಮುತ್ತಿಗೇನು ಬರವೆ.
* ಅಂದ ಚಂದ *
ವಿರಹ ವೇದನೆಯಲ್ಲಿ ಪ್ರಿಯಕರನ
ಕನಸು ಕಾಣುವುದೆ ಚಂದ
ವರನ ಮುಂದೆ ಮಾಡುವ ವಧುವಿನ
ವನಪು ವಯ್ಯಾರವೆ ಅಂದ
ವಧುವರರು ಸಮರಸದಿ ಕೂಡಿ
ಬಾಳಿದಾಗ ಆಗುವುದು ಕಂದ
🖋️ ಬಸನಗೌಡ ಗೌಡರ
ಚಲುವಿಗೆ ಚಿತ್ತಾರ ಬೇಕೆ
ಒಲುವೆ ಅದಕೆ ಮೂಲ
ಹಾಗಾಗಿ ನನ್ನಾಕಿ
ದಿನಾಲೂ ಕೈಯಾಗ ಇಡತಾಳ
ದಿನಸಿ ಕಾಯಿಪಲ್ಲೆ ಚೀಲ
🖋️ಬಸನಗೌಡ ಗೌಡರ
ಪಾಠ
ಶಿಕ್ಷಕ ರಕ್ಷಿತನಿಗೆ ನಡೆದಿತ್ತು ಪಾಠ
ನಗೆ ಪ್ರಕಾರಗಳು ಎಷ್ಟು ?
ಹುಡುಗ ಹೇಳಿದ, ಇರಬಹುದು
ಒಂದು ಏಳೆಂಟು
ಶಿಕ್ಷಕ ಕೇಳಿದರು, ನಸುನಗು ಎಂದರೇನು ?
ನಸುಕಿನಲ್ಲಿ ನಗುವುದೆ ನಸುನಗು.. ಹೇಳಿದ ಹುಡುಗ .
ಶಿಕ್ಷಕ ಸುಸ್ತೊ ಸುಸ್ತು
🖋️ ಬಸನಗೌಡ ಗೌಡರ
ಅತ್ತೆಭಯ
ಮಲ್ಲಿಗೆಯ ಮೊಗದವಳು
ಹಲ್ಲು ಗಿಂಜುವಳು ಒಮ್ಮೊಮ್ಮೆ
ಮುತ್ತು ಪೋಣಿಸಿದಂತೆ,
ನತ್ತು ತಿರುಗಿಸುವಳು ಇನ್ನೊಮ್ಮೆ
ಮುಂಗುರುಳು ಹೆಡೆಯೆತ್ತಿದಾಗ
ನಾ ನೋಡಲು ಹೆದರಿದೆ ಕಣ್ಣೆತ್ತಿ
ಯಾಕೆಂದರೆ ದುರುಗುಟ್ಟಿತ್ತು
ಮುಂದಾಗುವ ಅತ್ತೆ..... ನಾ ಕಾಲ್ಕಿತ್ತೆ .
ಬಸನಗೌಡ ಗೌಡರ
* ಸಾಲಿನ ಮಹಿಮೆ *
ನಿದ್ದೆಯಲೆದ್ದ ಬುದ್ದ ನಾದ
ಬುದ್ದನ ಕಥೆ ಓದಿಯೂ
ಸಂಸಾರದಲ್ಲಿ ಬಿದ್ದು
ಒದ್ದಾಡುತ್ತಿರುವೆನು ನಾ ಪೆದ್ದ/
ಕಲಾಮ ಸಾಹೇಬರಿಗೆ ಸಲಾಮ
ಹಾಕಿಯೂ ಕೆಲಸ ಕುಲಗೆಡಿಸಿ
ನಾ ಗರೀಬನಾಗಿದ್ದೆ /
ಏಕೆಂದರೆ ನಾನಿರುವದು
ಕಥೆ ಕೇಳಿಯೂ ವ್ಯತೆ ಪಡುವವರ ಸಾಲಿನಲ್ಲಿ ನಾನೊಬ್ಬನಾಗಿದ್ದೆ //
ಬಸನಗೌಡ ಗೌಡರ
ಹನಿಗವನ ಸ್ಪರ್ಧೆಗಾಗಿ
ಕ್ರಮ ಸಂ : 13
* ಕರ್ತವ್ಯ *
ಪ್ರಿಯೆ ಎದೆಯ ಬಾರದ ಮೋಡಕೆ
ಮುತ್ತುಗಳ ಮಳೆ ಸುರಿವ ಬಯಕೆ
ಹುಲುಸಾಗಿ ಬೆಳೆವೆ ಹೊಂಬಾಳೆ ಅಡಿಕೆ
ಕರ್ತಾರನ ಕಮ್ಮಟ ಕರ್ತವ್ಯ ಮರೆಯೆ
ಹೆತ್ತು ತುತ್ತ ನೀಡಿದ ಕರಗಳಿಗೆ ತರುವೆ
ಹೊತ್ತು ಸಾಗರದಿ ಮುತ್ತಿಗೇನು ಬರವೆ.
* ಅಂದ ಚಂದ *
ವಿರಹ ವೇದನೆಯಲ್ಲಿ ಪ್ರಿಯಕರನ
ಕನಸು ಕಾಣುವುದೆ ಚಂದ
ವರನ ಮುಂದೆ ಮಾಡುವ ವಧುವಿನ
ವನಪು ವಯ್ಯಾರವೆ ಅಂದ
ವಧುವರರು ಸಮರಸದಿ ಕೂಡಿ
ಬಾಳಿದಾಗ ಆಗುವುದು ಕಂದ
🖋️ ಬಸನಗೌಡ ಗೌಡರ
* ಕರ್ಮ *
ನಾವು ಮಾಡಿದ ಪಾಪ ಪುಣ್ಯಗಳು
ನಮ್ಮ ನೆರಳಿನಂತೆ ಹಿಂದೆ ಮುಂದೆ.
ತಿರುಗುವು ಚಪ್ಪಡಿಗೆ ಬಡಿದು ಬರುವ
ಪ್ರತಿದ್ವನಿಯಂತೆ ಬೆನ್ನ ಹಿಂದೆ.
ಕಾರ್ಯ ಮಾಡುವಾಗ ಕ್ರಮವಿರಲಿ
ಧರ್ಮದೂಳಗೂ ಕರ್ಮವಿರಲಿ.
ಬಸನಗೌಡ ಗೌಡರ
* ಕಂಪನ *
ಕಗ್ಗತ್ತಲು ಕವಿಯಲಿ
ಕಾರ್ಮೋಡ ಮುಸುಕಲಿ
ಕಡಲ ಒಡಲಾಳದಲ್ಲಿರಲಿ
ಕೈ ತುತ್ತು ತಿನಿಸಿದ ಕರುಳೆ ಕಣ್ಣಾಗಿ
ತನ್ನ ಕಂದನ ಗುರುತು ಕಂಪಣವಾಗಿ
ಅಂತಕರಣ ಹುಡುಕುವುದು ಹಸಿವಾಗಿ
ಬಸನಗೌಡ ಗೌಡರ
* ಹರಾಮ ಶಾಮ *
ನಾಮ, ನೇಮ್ ಬೇಕಂದ್ರ ಮಾಡ ಹೋಮ
ಅಡ್ಡ ಇರಲಿ,ಉದ್ದ ಇರಿಲಿ ದೇಹಕ್ಕಿರಲಿ
ಅದು ನಿನ್ನ ದೇಹದಲ್ಲೆ ಇರಲೊ ಶಾಮ!
ಹಾಕಬೇಡ ಇನ್ನೊಬ್ಬರಿಗೆ ಪಂಗನಾಮ
ನೇಮ್ ಬೇಕೆಂದ್ರ ತಿನಬ್ಯಾಡ ಹರಾಮ
ತಿಂದರ ಬೆಂಡೆತ್ತತಾರ ಪೋಲಿ ಮಾಮಾ
*
* ನಾಕ ನರಕ *
ಉಕ್ಕಿ ಹರಿದರೆ ಸದಾಕಾಲ ನಗೆ ಬುಗ್ಗೆ
ನೆರೆಹೊರೆ ಮೊಗವರಳತೈತಿ ಮೊಗ್ಗು !
ಸೊಕ್ಕು ಬೆಳೆದರೆ ಮುದಡತೈತ ನಾಕ
ಸಾಗ ಹಾಕತಾರು ತಿಳಿ ಬದುಕು ನರಕ!
ಕಟ್ಟಿಕೊಂಡವರು ಬಿಟ್ಟು ಹೊದಾರು
ಸುಟ್ಟು ಬಿಡು ಅರಿಷಡ್ವರ್ಗ ಬೇರು.
ಬಸನಗೌಡ ಗೌಡರ
* ನವರಂಗಿ *
ಕೆಂದುಟಿಯ ಮೇಲೊಂದು
ಕವನ ಬರೆಯಲೆ ಅರ್ಧಾಂಗಿ,
ಕೇಳಿದೆ ನಾ ವಿನಮ್ರವಾಗಿ !
ಹನಿ ಹನಿ ಬಳಗಕ್ಕೆ ಬರೆದು ಹಾಕು
ಊದಬೇಡ ಪುಂಗಿ
ನತ್ತಿಗೊಂದು ಮುತ್ತು ಕಾಣದು
ಸಾಕು ಕವಿತನದ ನವರಂಗಿ.
ಕಾಲಹರಣ ಸಾಕೆಂದು
ಜಾಡಿಸಿದಾಗ ನಾನು ಏಕಾಂಗಿ !
🖋️.ಬಸನಗೌಡ ಗೌಡರ
No comments:
Post a Comment