ಡಾ// ಅಂಬೇಡ್ಕರರಿಗೆ ಅರ್ಪಣೆ
ಹನುಮ, ಭೀಮನುದಿಯಿಸಿ
ಶ್ರೀರಾಮ, ಧರ್ಮರಿಗೆ ಬಿಡಿಸಿದರು
ಗ್ರಹಣ ಅಂದು,
ಜಾತೀಯ ಭೀತಿಯಲಿ ಬಸವಳಿದ
ಭಾರತಕೆ ನೀ ಬಂದೆ ಬಡವ,
ದಮನಿತರ ತಂದೆ,//
ಉಂಡುಟ್ತು ಮಲಗಿದವರ
ಮೊಂಡು ವಾದವ ಮೀರಿ
ಬೆಂಡೆತ್ತಿದೆ ಅಂದು,
ಸಮಾನತೆಯ ಬೀಜ ಬಿತ್ತಿದೆ
ನಿನ್ನರಿತ ಹದವಾದ ಮನದ
ಅಂಗಳದಲ್ಲಿ ಇಂದು //
ನೀ ನಮ್ಮೆಲ್ಲರ ದೈವ ಬಾಬಾ
ನೀ ನಮ್ಮೆಲ್ಲರ ಬದುಕಿನ
ಗ್ರಹಣ ಬಿಡಿಸಿದೆ ಇಂದು
ಪಶ್ಚಿಮ ಪೂರ್ವದ ಕಾನೂನುಂಡು
ಪೂರ್ವಾಗ್ರಹ ಪಂಡಿತರ
ಎದುರುಗೊಂಡೆ ತಂದೆ //
ಜಗತ್ತೇ ಬೆರಗಾಗುವ ಕಾನೂನ
ಕಟ್ಟಿ ,ಕೋಟಿ ಕೋಟಿ ಜನ
ದಾಟದಂತೆ ಮೇಟಿಯಾದೆ ಇಂದು
ಕಟ್ಟಿಗೆ ,ಕಲ್ಲು ಮನೆ ಕಟ್ಟುವವ
ಇಟ್ಟಿಗೆಯಿಂದ ಮನೆ ಕಟ್ಟಿದಂತೆ
ದೇಶ ಕಟ್ಟಬಹುದೆಂದೆ ತಂದೆ //
ಬಸನಗೌಡ ಗೌಡರ
ಹನುಮ, ಭೀಮನುದಿಯಿಸಿ
ಶ್ರೀರಾಮ, ಧರ್ಮರಿಗೆ ಬಿಡಿಸಿದರು
ಗ್ರಹಣ ಅಂದು,
ಜಾತೀಯ ಭೀತಿಯಲಿ ಬಸವಳಿದ
ಭಾರತಕೆ ನೀ ಬಂದೆ ಬಡವ,
ದಮನಿತರ ತಂದೆ,//
ಉಂಡುಟ್ತು ಮಲಗಿದವರ
ಮೊಂಡು ವಾದವ ಮೀರಿ
ಬೆಂಡೆತ್ತಿದೆ ಅಂದು,
ಸಮಾನತೆಯ ಬೀಜ ಬಿತ್ತಿದೆ
ನಿನ್ನರಿತ ಹದವಾದ ಮನದ
ಅಂಗಳದಲ್ಲಿ ಇಂದು //
ನೀ ನಮ್ಮೆಲ್ಲರ ದೈವ ಬಾಬಾ
ನೀ ನಮ್ಮೆಲ್ಲರ ಬದುಕಿನ
ಗ್ರಹಣ ಬಿಡಿಸಿದೆ ಇಂದು
ಪಶ್ಚಿಮ ಪೂರ್ವದ ಕಾನೂನುಂಡು
ಪೂರ್ವಾಗ್ರಹ ಪಂಡಿತರ
ಎದುರುಗೊಂಡೆ ತಂದೆ //
ಜಗತ್ತೇ ಬೆರಗಾಗುವ ಕಾನೂನ
ಕಟ್ಟಿ ,ಕೋಟಿ ಕೋಟಿ ಜನ
ದಾಟದಂತೆ ಮೇಟಿಯಾದೆ ಇಂದು
ಕಟ್ಟಿಗೆ ,ಕಲ್ಲು ಮನೆ ಕಟ್ಟುವವ
ಇಟ್ಟಿಗೆಯಿಂದ ಮನೆ ಕಟ್ಟಿದಂತೆ
ದೇಶ ಕಟ್ಟಬಹುದೆಂದೆ ತಂದೆ //
ಬಸನಗೌಡ ಗೌಡರ
No comments:
Post a Comment