Thursday, April 9, 2020

ಎಚ್ಚರಿಕೆ

ಎಚ್ಚರಿಕೆ

ನನ್ನ  ನಿನ್ನ ನಡುವೆ ಏನಿ ಅಂತರ
ಕಣ್ಣಿಗೆ ಕಾಣುವ ಕಾಣದಂತರ//

ಜಗದ ಜೀವ ತಿಂದು
ಸಾಗಿಸಿದೆ  ಕಾಲ ಕಾಲಾಂತರ ಹೆದರಿಸುವ ಕಾಲ ಬಂತು
ನುಸುಳಿತು  ಗಂಡಾಂತರ.//

ಹೆಸರು ಇಟ್ಟೆ ಕರೆ ಕೊಟ್ಟೆ
ಸಾಕು ಹೋಗು  ಮುರಾಬಟ್ಟಿ
ನಮ್ಮ ನಡುವೇ ಅಂತರ
ನಡುವೇ ಕುಣಿದಾಡಿ ಬಿಟ್ಟೆ//

ಮಾನವ ಬದಕು ಗಟ್ಟಿ
ಗೊತ್ತು ಕಣೊ ಮಸಾಲಿ ಕುಟ್ಟಿ
ನೀನಲ್ಲ ನೂರು ಬರಲಿ
ತೋಡುವೆವು ಗೊರಿ ಅಲ್ಲಿ

ತಿಳಿಯ ಬೇಕಿತ್ತು ಒಗ್ಗಟ್ಟ
ಅದಕ್ಕೆ ಹಾಕಿದೆ ಚೌಕಟ್ಟು
ಮುರಿದರೆ ಅದೆ ಬಿಕ್ಕಟ್ಟು
ಮರೆಯದೆ ಬರಬೇಡಿ ಮನೆ ಬಿಟ್ಟು//

ನಿಮ್ಮನ್ನ ನೀವು ಕೊಲ್ಲುದಕ
ನಿಸ್ಸೀಮರೆಂದು  ತೋರಿಸಿದ್ದಕ್ಕ
ಬರಬೇಕಾತು  ಮಣಿಸೋದಕ್ಕ
ಮರೆತರೆ ಬರುತ್ತೆನೇ   ಎಚ್ಚರಿಸೊದಕ್ಕ//

             
        🖋️    ಬಸನಗೌಡ ಗೌಡರ


 


       

No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...