ಅಮ್ಮ ನಿನ್ನ ಗೋಳು ಸಾಕು
ಅಪ್ಪನೇ ಏಕೆ ದುಡಿದು ತರಬೇಕು
ನಾನು ದುಡಿದು ನಾಡಿಗೆ ಕೊಡುವೆ
ನೀ ಮುದ್ದೆ ಮಾಡಿ ಹಾಕು ಸಾಕು //
ನಮ್ಮ ಮನೆಯಲೊಂದು ತೋಟ
ಇರಲು ಚಿಂತೆ ಯಾಕೆ ಬೇಕು
ಶಾಲೆ ಮುಗಿಸಿ ಕಾಲ ಕಳೆಯದೆ
ಕಸ ತೆಗೆದು ನೀರು ಬಿಡ ಬೇಕು //
ಹಗಲು ಹೊತ್ತು ನೆಗಿಲು ಹೊಡೆದು
ಹದವ ಮಾಡಿ ಬೀಜ ಬಿತ್ತುವೆ
ಗೋದಿ, ಬಾರ್ಲಿ, ಭತ್ತ ಬೆಳೆದು
ಅಪ್ಪನ ಶ್ರಮವ ಕಡಿಮೆ ಮಾಡುವೆ //
ರಾತ್ರಿ ಹೊತ್ತು ಚಂದ್ರನದೆ ಗತ್ತು
ನಿಲ್ಲದೆ ಓಡುವನು ಯಾವತ್ತೂ
ಅಪ್ಪನ ಜೊತೆ ನೋಡುವೆ ಇವತ್ತು
ಜೊತೆಗೆ ತಿನ್ನುವೆ ಅಮ್ಮನ ಕೈತುತ್ತು /
ಬಸನಗೌಡ ಗೌಡರ
No comments:
Post a Comment