Friday, June 26, 2020

* ತಿಮ್ಮನ ಕೈತೋಟ *


ಅಮ್ಮ ನಿನ್ನ ಗೋಳು ಸಾಕು
ಅಪ್ಪನೇ ಏಕೆ ದುಡಿದು  ತರಬೇಕು
ನಾನು ದುಡಿದು ನಾಡಿಗೆ ಕೊಡುವೆ
ನೀ ಮುದ್ದೆ ಮಾಡಿ ಹಾಕು ಸಾಕು //

ನಮ್ಮ ಮನೆಯಲೊಂದು ತೋಟ
ಇರಲು ಚಿಂತೆ ಯಾಕೆ ಬೇಕು
ಶಾಲೆ ಮುಗಿಸಿ ಕಾಲ ಕಳೆಯದೆ
ಕಸ ತೆಗೆದು ನೀರು ಬಿಡ ಬೇಕು //

ಹಗಲು ಹೊತ್ತು ನೆಗಿಲು ಹೊಡೆದು
ಹದವ ಮಾಡಿ ಬೀಜ ಬಿತ್ತುವೆ
ಗೋದಿ, ಬಾರ್ಲಿ, ಭತ್ತ  ಬೆಳೆದು
ಅಪ್ಪನ ಶ್ರಮವ ಕಡಿಮೆ ಮಾಡುವೆ //

ರಾತ್ರಿ ಹೊತ್ತು  ಚಂದ್ರನದೆ ಗತ್ತು
ನಿಲ್ಲದೆ ಓಡುವನು ಯಾವತ್ತೂ
ಅಪ್ಪನ ಜೊತೆ ನೋಡುವೆ ಇವತ್ತು
ಜೊತೆಗೆ ತಿನ್ನುವೆ ಅಮ್ಮನ ಕೈತುತ್ತು /

        ಬಸನಗೌಡ ಗೌಡರ

No comments:

Post a Comment

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...