ಬಾಳೊಂದು ಭಾವ ಮಂದಿರ
ಪ್ರೀತಿಯೆ ಭುವನದ ಹಂದರ
ಪ್ರತಿಕ್ಷಣ ಅರಳಿಸು ನಿರಂತರ // ಪ//
ಸಾಗರ ಡೋಣಿಗೆ ಸಹಜ ತೆರೆ
ಉಬ್ಬರ ವಿಳಿತ ಮೀರಿ ನೀ ನಡೆ
ಬದುಕದು ಸುಂದರ ಸಾಕಾರ ಪಡೆ //
ಬದುಕೊಂದು ಬಂಡಿಯ ಪಯಣ
ಕಲ್ಲು ಮುಳ್ಳುಗಳೆ ಅಡೆ ತಡೆ ಕಣೋ
ಸಾಧಿಸಿ ಸವೆಸಿ ದಾರಿನಡೆ ಜಾಣ
ಭುವಿಯೊಂದೆ ಜೀವರಾಶಿಗಳ ತಾಣ
ಭೂಕಂಪನ ಜ್ವಾಲಾಮುಖಿ ಸಹಜ
ಸಹಜೀವನ ಕಲಿ ನೀ ಮನುಜ//
ನಾನೊಂದು ಬರಿ ಕಾಗದ ಹಾಳೆ
ಗೀಚದಿರು ಅಲ್ಲಿ ರಾಕ್ಷಸ ಬಾಳು
ಬರೆ ಅಲ್ಲಿ ಸುಂದರ ಕಾವ್ಯ ಕಹಳೆ//
ಬಸನಗೌಡ ಗೌಡರ
ಪ್ರೀತಿಯೆ ಭುವನದ ಹಂದರ
ಪ್ರತಿಕ್ಷಣ ಅರಳಿಸು ನಿರಂತರ // ಪ//
ಸಾಗರ ಡೋಣಿಗೆ ಸಹಜ ತೆರೆ
ಉಬ್ಬರ ವಿಳಿತ ಮೀರಿ ನೀ ನಡೆ
ಬದುಕದು ಸುಂದರ ಸಾಕಾರ ಪಡೆ //
ಬದುಕೊಂದು ಬಂಡಿಯ ಪಯಣ
ಕಲ್ಲು ಮುಳ್ಳುಗಳೆ ಅಡೆ ತಡೆ ಕಣೋ
ಸಾಧಿಸಿ ಸವೆಸಿ ದಾರಿನಡೆ ಜಾಣ
ಭುವಿಯೊಂದೆ ಜೀವರಾಶಿಗಳ ತಾಣ
ಭೂಕಂಪನ ಜ್ವಾಲಾಮುಖಿ ಸಹಜ
ಸಹಜೀವನ ಕಲಿ ನೀ ಮನುಜ//
ನಾನೊಂದು ಬರಿ ಕಾಗದ ಹಾಳೆ
ಗೀಚದಿರು ಅಲ್ಲಿ ರಾಕ್ಷಸ ಬಾಳು
ಬರೆ ಅಲ್ಲಿ ಸುಂದರ ಕಾವ್ಯ ಕಹಳೆ//
ಬಸನಗೌಡ ಗೌಡರ
No comments:
Post a Comment