ಸ್ಪರ್ಧೆ: ನಾಡಗೀತೆ
ಕ್ರಮ ಸಂಖ್ಯೆ: 13
* ಪಾವನ ನಾಡು *
ಕನ್ನಡನಾಡಿದು ಕವಿ ಕೋಗಿಲೆ ಬೀಡಿದು
ಕರುನಾಡಿದು ಕಲೆ ರಸಿಕರ ನೆಲೆವೀಡಿದು
ಸಾಧುಸಂತರು ಇಲಕಲ್ ಮಹಾಂತರು
ಶಿವಕುಮಾರಶ್ರೀ ಬೆಳಗಿದ ನಾಡಿದು //ಪ//
ಬಯಲು ಮಲೆ ತೀರ ಮುಕುಟ ಮಣಿ
ಬಂಗಾರ ಬೆಳೆದ ಕೋಲಾರ ಚಿನ್ನಗಣಿ
ಭಾರತ ಮಾತೆಯು ಇವಳಿಗೆ ಜನನಿ
ಕನ್ನಡಿಗರುಸಿರಿನ ಹಸಿರು ಶಾಲಿನಿ//
ಚಾಲುಕ್ಯ ಬಲ, ಹೊಯ್ಸಳ ಶಿಲ್ಪಕಲೆ
ಬಸವ ಮಧ್ವ ಕನಕರ ನೆಲೆಯಿದು
ಹಕ್ಕ ಬುಕ್ಕ,ಕೃಷ್ಣ ದೇವರಾಯರಾಳಿದ
ಧರ್ಮ ರಕ್ಷಣೆಯ ವೈಭವದ ನಾಡಿದು//
ನವರಾತ್ರಿ ಬೆಳಗಿದ ಮೈಸೂರ ಅರಸರ
ಆಧುನಿಕ ಸ್ಪರ್ಶದ ತಳಪಾಯವಿದು
ನಲ್ಮೆಯ ಶ್ರೀಗಂಧದ ತಳವೀಡಿದು
ಭಾರತ ಪುತ್ರರ ಹೆಮ್ಮೆಯ ನಾಡಿದು//
ಬಸನಗೌಡ ಗೌಡರ
ಕ್ರಮ ಸಂಖ್ಯೆ: 13
* ಪಾವನ ನಾಡು *
ಕನ್ನಡನಾಡಿದು ಕವಿ ಕೋಗಿಲೆ ಬೀಡಿದು
ಕರುನಾಡಿದು ಕಲೆ ರಸಿಕರ ನೆಲೆವೀಡಿದು
ಸಾಧುಸಂತರು ಇಲಕಲ್ ಮಹಾಂತರು
ಶಿವಕುಮಾರಶ್ರೀ ಬೆಳಗಿದ ನಾಡಿದು //ಪ//
ಬಯಲು ಮಲೆ ತೀರ ಮುಕುಟ ಮಣಿ
ಬಂಗಾರ ಬೆಳೆದ ಕೋಲಾರ ಚಿನ್ನಗಣಿ
ಭಾರತ ಮಾತೆಯು ಇವಳಿಗೆ ಜನನಿ
ಕನ್ನಡಿಗರುಸಿರಿನ ಹಸಿರು ಶಾಲಿನಿ//
ಚಾಲುಕ್ಯ ಬಲ, ಹೊಯ್ಸಳ ಶಿಲ್ಪಕಲೆ
ಬಸವ ಮಧ್ವ ಕನಕರ ನೆಲೆಯಿದು
ಹಕ್ಕ ಬುಕ್ಕ,ಕೃಷ್ಣ ದೇವರಾಯರಾಳಿದ
ಧರ್ಮ ರಕ್ಷಣೆಯ ವೈಭವದ ನಾಡಿದು//
ನವರಾತ್ರಿ ಬೆಳಗಿದ ಮೈಸೂರ ಅರಸರ
ಆಧುನಿಕ ಸ್ಪರ್ಶದ ತಳಪಾಯವಿದು
ನಲ್ಮೆಯ ಶ್ರೀಗಂಧದ ತಳವೀಡಿದು
ಭಾರತ ಪುತ್ರರ ಹೆಮ್ಮೆಯ ನಾಡಿದು//
ಬಸನಗೌಡ ಗೌಡರ
No comments:
Post a Comment