ಮಾತು ಮೌನದಲಿ ಕೃತಿ ಸೇರಿ
ಮನವು ಹಾರಾಡಲೊಂದು ದಾರಿ
ದಿನವೂ ನಮ್ಮ ಬಾಳು ರಹದಾರಿ
ನೆರವಿಲ್ಲದೆ ತಲಪದು ಹೆಗ್ಗುರಿ//
ಅಪ್ಪ ಮಗನಲ್ಲಿ, ತಾಯಿ ಮಗಳಲ್ಲಿ,
ಸಹೋದರ, ಸಹೋದ್ಯೋಗಿಯಲ್ಲಿ
ಜಗತ್ತೆ ನಡಗಿಸಿದ ಸರ್ವಾಧಿಕಾರಿಯಲ್ಲಿ
ನಿನ್ನ ಅನಗ್ರಹವಿಲ್ಲದೆ ನಡೆಯದಲ್ಲಿ. //
ನನ್ನೂರ ಗಲ್ಲಿ, ನಾನೂಂದು ಕಂಡೆ
ನಡೆದ ವಿಸ್ಮಯ ಚಕಿತಗೊಂಡೆ
ಎರಡು ಬಾಳೆ ಮೂರು ದಾನಿಯ
ನರಳುತ್ತ ಸ್ವೀಕರಿಸಿದ ದೀನದ್ವನಿಯ//
ಒಂದು ಮಾತಿತ್ತು ಎಡಗೈದಾನವದು
ನೆರವು ತಾ ಬಲಗೈಗೆ ತಿಳಿಯ ಬಾರದು.
ಮರೆತು ಮಾಡಿದ ನೆರವು, ಸಿಗುವುದು
ಮಳೆಗಾಲದಂತೆ ಮನ ತಣಿಸುವುದು.//
ನನ್ನವಳು ಅನುದಿನ ನೀಡಿದ ಒಲವು
ನಾನು ಹೇಗೆ ಹೇಳುವುದು ಹಲವು
ನನ್ನಂತರಾತ್ಮದ ಗೆಲುವಿಗೆ ಆಗಿಹವು
ರಹದಾರಿಯ ಅಪ್ಪಟ ದೇಶಿ ನೆರವು //
ಬಸನಗೌಡ ಗೌಡರ
ಮನವು ಹಾರಾಡಲೊಂದು ದಾರಿ
ದಿನವೂ ನಮ್ಮ ಬಾಳು ರಹದಾರಿ
ನೆರವಿಲ್ಲದೆ ತಲಪದು ಹೆಗ್ಗುರಿ//
ಅಪ್ಪ ಮಗನಲ್ಲಿ, ತಾಯಿ ಮಗಳಲ್ಲಿ,
ಸಹೋದರ, ಸಹೋದ್ಯೋಗಿಯಲ್ಲಿ
ಜಗತ್ತೆ ನಡಗಿಸಿದ ಸರ್ವಾಧಿಕಾರಿಯಲ್ಲಿ
ನಿನ್ನ ಅನಗ್ರಹವಿಲ್ಲದೆ ನಡೆಯದಲ್ಲಿ. //
ನನ್ನೂರ ಗಲ್ಲಿ, ನಾನೂಂದು ಕಂಡೆ
ನಡೆದ ವಿಸ್ಮಯ ಚಕಿತಗೊಂಡೆ
ಎರಡು ಬಾಳೆ ಮೂರು ದಾನಿಯ
ನರಳುತ್ತ ಸ್ವೀಕರಿಸಿದ ದೀನದ್ವನಿಯ//
ಒಂದು ಮಾತಿತ್ತು ಎಡಗೈದಾನವದು
ನೆರವು ತಾ ಬಲಗೈಗೆ ತಿಳಿಯ ಬಾರದು.
ಮರೆತು ಮಾಡಿದ ನೆರವು, ಸಿಗುವುದು
ಮಳೆಗಾಲದಂತೆ ಮನ ತಣಿಸುವುದು.//
ನನ್ನವಳು ಅನುದಿನ ನೀಡಿದ ಒಲವು
ನಾನು ಹೇಗೆ ಹೇಳುವುದು ಹಲವು
ನನ್ನಂತರಾತ್ಮದ ಗೆಲುವಿಗೆ ಆಗಿಹವು
ರಹದಾರಿಯ ಅಪ್ಪಟ ದೇಶಿ ನೆರವು //
ಬಸನಗೌಡ ಗೌಡರ
No comments:
Post a Comment