ಸುಪ್ತಭಾವ ಒಪ್ಪದೆ ಹೊರ ಬಂದು
ಆಪ್ತರಿಗೆ ಪರಿತಪಿಸುತಿದೆ ನೊಂದು
ಪರಿಹರಿಸ ಬಲ್ಲಿಯಾ ಪ್ರಿಯೆ ಇಂದು
ಚೈತನ್ಯ ತುಂಬು ಬಾ ಮರಳಿ ಬಂದು/
ನಾ ಮಾಡಿದ ಮಹಾ ತಪ್ಪಾದರೆನು ?
ನಿನ್ನ ಮುಂದೆ ಹೊಗಳಿದೆ ಆವಳನ್ನು
ಹೃದಯ ಕೊಟೆಗೆ ಸಾವಿರ ಬಾಣ
ಚುಚ್ಚಿ ಚುಚ್ಚಿ ಕೊಲ್ಲಬೇಡ ನನ್ನನ್ನು /
ಅಂತರಾಳದ ಕುದಿಮೌನ ಹೆಪ್ಪುಗಟ್ಟಿ
ಮೇಲ ಮೈ ಮನ ಒದ್ದಾಡಿ ಮರಗಟ್ಟಿ
ವಿಲವಿಲ, ನೆಲದಲ್ಲಿ ಗೀಚಿದೆ ಕುಲಗೆಟ್ಟು
ಗೀಚಿದ ಗೆರೆಗಳ ನಕ್ಕವು ನನ್ನ ನೊಡಿ /
ಕಾಯಿಸದೆ ಕರುಣೆ ತೊರಿ ಅಪ್ಪಿ ಬಿಡು
ಕಾಲು ಕೀಳೆನು ಅಪ್ಸರೆ ತಪ್ಪಿ ಬಂದರು
ಮದಿರೆ ಮುದ್ದಿಸಿ ಮೋರಿ ದಾಸನಂತೆ
ತಿರುಗುವ ಮುನ್ನ ಕೃಪೆಮಾಡು ಕಾಂತೆ
ಬಸನಗೌಡ ಗೌಡರ
No comments:
Post a Comment