Sunday, May 3, 2020

K S R N. ನಮನ

*ನಿತ್ಯೋತ್ಸವ ಕವಿಗೆ ಕವನ ನಮನ*

ಮರೆಯಲಾರೆ ನಿಮ್ಮ ಹೆಸರ
ನಮ್ಮ ಬಾಳ ಬದುಕು ಪುಟದಲಿ
ನಿತ್ಯೋತ್ಸವ ಕವಿಯಾಗಿಹೊರಹೊಮ್ಮಿ
ತೋರಿದೆಮಗೆ ದಾರಿ ಹೆಮ್ಮೆಯ //

ಕವನವೆಂಬ ಭಾವ ಬಿತ್ತಿ
ನೆಲೆಸಿದೆಮ್ಮ ಹಣೆಯ ಭಿತ್ತಿಯಲ್ಲಿ
ಶಾಸನದ ಸಾಲಿನಲ್ಲಿ ಕನ್ನಡವ ಬಿತ್ತಿ
ಅಜರಾಮರಗೊಳಿದೆ ವೈಭವವೆತ್ತಿ //

ನಾಡಿನ ಸಿರಿ ನುಡಿಯಲ್ಲಿ ಸೇರಿಸಿ
ನಸುಕಿನ ಹೊಂಬೆಳಕ ಜಗದಲಿ ಹರಿಸಿ
ನಮ್ಮನು ಕುಣಿಸಿ ಹಾಡಿಸಿ ಹಾರೈಸಿ
ನಮ್ಮಿ ಜಗಕೆ ಸಿಗದೆ ಪ್ರಯಾಣಿಸಿದೆ //

ಮಲೆಗಳ ಮನೆ ಮನಗಳ ಗೆದ್ದು
ನಾಡಿನೆಲ್ಲೆಡೆ ವ್ಯಾಪಿಸಿ ಕನ್ನಡ ಗೆದ್ದೆ
ಮತ ಕುಲ ಮೀರಿ ಹಿತವನು ಸಾರಿ
ಕತೆಯಾಗುಳಿದ ನಿಸಾರ್ ಅಹಮದ್//

                   ಬಸನಗೌಡ ಗೌಡರ

No comments:

Post a Comment

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...