*ನಿತ್ಯೋತ್ಸವ ಕವಿಗೆ ಕವನ ನಮನ*
ಮರೆಯಲಾರೆ ನಿಮ್ಮ ಹೆಸರ
ನಮ್ಮ ಬಾಳ ಬದುಕು ಪುಟದಲಿ
ನಿತ್ಯೋತ್ಸವ ಕವಿಯಾಗಿಹೊರಹೊಮ್ಮಿ
ತೋರಿದೆಮಗೆ ದಾರಿ ಹೆಮ್ಮೆಯ //
ಕವನವೆಂಬ ಭಾವ ಬಿತ್ತಿ
ನೆಲೆಸಿದೆಮ್ಮ ಹಣೆಯ ಭಿತ್ತಿಯಲ್ಲಿ
ಶಾಸನದ ಸಾಲಿನಲ್ಲಿ ಕನ್ನಡವ ಬಿತ್ತಿ
ಅಜರಾಮರಗೊಳಿದೆ ವೈಭವವೆತ್ತಿ //
ನಾಡಿನ ಸಿರಿ ನುಡಿಯಲ್ಲಿ ಸೇರಿಸಿ
ನಸುಕಿನ ಹೊಂಬೆಳಕ ಜಗದಲಿ ಹರಿಸಿ
ನಮ್ಮನು ಕುಣಿಸಿ ಹಾಡಿಸಿ ಹಾರೈಸಿ
ನಮ್ಮಿ ಜಗಕೆ ಸಿಗದೆ ಪ್ರಯಾಣಿಸಿದೆ //
ಮಲೆಗಳ ಮನೆ ಮನಗಳ ಗೆದ್ದು
ನಾಡಿನೆಲ್ಲೆಡೆ ವ್ಯಾಪಿಸಿ ಕನ್ನಡ ಗೆದ್ದೆ
ಮತ ಕುಲ ಮೀರಿ ಹಿತವನು ಸಾರಿ
ಕತೆಯಾಗುಳಿದ ನಿಸಾರ್ ಅಹಮದ್//
ಬಸನಗೌಡ ಗೌಡರ
ಮರೆಯಲಾರೆ ನಿಮ್ಮ ಹೆಸರ
ನಮ್ಮ ಬಾಳ ಬದುಕು ಪುಟದಲಿ
ನಿತ್ಯೋತ್ಸವ ಕವಿಯಾಗಿಹೊರಹೊಮ್ಮಿ
ತೋರಿದೆಮಗೆ ದಾರಿ ಹೆಮ್ಮೆಯ //
ಕವನವೆಂಬ ಭಾವ ಬಿತ್ತಿ
ನೆಲೆಸಿದೆಮ್ಮ ಹಣೆಯ ಭಿತ್ತಿಯಲ್ಲಿ
ಶಾಸನದ ಸಾಲಿನಲ್ಲಿ ಕನ್ನಡವ ಬಿತ್ತಿ
ಅಜರಾಮರಗೊಳಿದೆ ವೈಭವವೆತ್ತಿ //
ನಾಡಿನ ಸಿರಿ ನುಡಿಯಲ್ಲಿ ಸೇರಿಸಿ
ನಸುಕಿನ ಹೊಂಬೆಳಕ ಜಗದಲಿ ಹರಿಸಿ
ನಮ್ಮನು ಕುಣಿಸಿ ಹಾಡಿಸಿ ಹಾರೈಸಿ
ನಮ್ಮಿ ಜಗಕೆ ಸಿಗದೆ ಪ್ರಯಾಣಿಸಿದೆ //
ಮಲೆಗಳ ಮನೆ ಮನಗಳ ಗೆದ್ದು
ನಾಡಿನೆಲ್ಲೆಡೆ ವ್ಯಾಪಿಸಿ ಕನ್ನಡ ಗೆದ್ದೆ
ಮತ ಕುಲ ಮೀರಿ ಹಿತವನು ಸಾರಿ
ಕತೆಯಾಗುಳಿದ ನಿಸಾರ್ ಅಹಮದ್//
ಬಸನಗೌಡ ಗೌಡರ
No comments:
Post a Comment