ಸಂಧ್ಯಾ ಕಾಲ, ಸುಂದರವಾಗಲು
ಬಂದು ಸೇರಬೆಕು ಸಾಹಿತ್ಯ ಕಲೆಗೆ
ಗೊಬ್ಬರವಿದು ಹೂವು ಹಣ್ಣು ಫಲ
ಬೆಳೆದು ಸತತ ಸುವಾಸನೆ ತಮಗೆ //
ದುಂದುವೆಚ್ಚದಿ ಬದುಕು ನೆಡೆಸಲು
ಸವಕಳಿಯದು ಬಾಳು ದಿನಾಲು
ಬದುಕೇ ಆಗುವುದು ನಿತ್ಯ ಕೊರಡು.
ಜಾಣನಾಗಿ ಬರೆ ಸತ್ಯದ ಕರಡು. /
ನಿತ್ಯ ಧ್ಯಾನ ಸತ್ಪುರಷರ ಸಂಘ
ಎತ್ತ ಸಾಗಿದರು ಶಾಂತಿಗಿಲ್ಲ ಭಂಗ
ಕಡುವಚನ ಕೇಳಿ ನೀನಾಗು ಕಿವುಡು
ನೀತಿಗೆ ತಲೆಬಾಗದ ಬಾಳು ಬರಡು //
ಬರುವುದು ಬರಲಿ ,ನಿನ್ನದೆ ನೆರಳು
ಕಡಲು ಸೇರಲು ಸಾವಿರ ನದಿಗಳು
ತಡೆ ಮಾಡಿದ ಬಗೆ ಇದೆಯೇ ಹೇಳು
ಮೋಡಕೆ ನೀವೆ ತಳ ವಾದವರು //
ಸೃಷ್ಥಿಯ ನಿಯಮಕೆ ತಲೆಬಾಗು
ಇಂದೋ ನಾಳೆಯೊ ಕಾಲನ ಕರೆಗೆ
ನಗುತಾ ಹಾಕು ಬೇಕು ಸಲಾಮು
ಇದಕ್ಕಿಂತ ಇಲ್ಲ ಭಿನ್ನ ಮಲಾಮು //
ಬಸನಗೌಡ ಗೌಡರ
No comments:
Post a Comment