ಶರವೇಗದಲ್ಲಿ ನಿನ್ನಂದ ಸೆಳೆದಾಗ
ಶುರುವಾಯಿತು ಮೌನಾಲಾಪ ರಾಗ
ಭಾವ ತೀರದಲಿ ಓಲಾಡುತಿದೆ ಕಲ್ಪನೆ
ಭಯ ಮೀರಿ ಪ್ರೀತಿ ಶುರುವಾಗಿದೆ//
ಭಾವ ತೀರದಲಿ ಓಲಾಡುತಿದೆ ಕಲ್ಪನೆ
ಭಯ ಮೀರಿ ಪ್ರೀತಿ ಶುರುವಾಗಿದೆ//
ಕನಸಿನ ಕಲ್ಪನೆ ಕಾದು ನೀರಾಗಿ
ನಿನ್ನ ಕಡಲ ತೀರ ಸೇರುವೆ ಸಾಗಿ
ಕವನ ಗೀಚಲು ಪದಗಳಿಗೆ ತಡಕಾಡಿ
ತಲೆ ಸಿಡಿದು ಚೂರಾಗಿ ಸೇರುವೆ ಬಾಗಿ//
ನಿನ್ನ ಕಡಲ ತೀರ ಸೇರುವೆ ಸಾಗಿ
ಕವನ ಗೀಚಲು ಪದಗಳಿಗೆ ತಡಕಾಡಿ
ತಲೆ ಸಿಡಿದು ಚೂರಾಗಿ ಸೇರುವೆ ಬಾಗಿ//
ಸಿಂಗಾರದ ಸಿರಿ ಬೇಲೂರು ಬಾಲಕಿ
ಜಕ್ಕಣ್ಣನ ಕೈಚಳಕ ಶಿಲ್ಪಕಲೆ ಮೋಡಿ
ತೆಕ್ಕೆಯಲಿ ಬರಸೆಳೆದು ಬಿಗಿದಪ್ಪುವೆ
ನೀನಿಕ್ಕುವ ಶರತ್ತು ನಾನೊಪ್ಪೀರುವೆ//
ಜಕ್ಕಣ್ಣನ ಕೈಚಳಕ ಶಿಲ್ಪಕಲೆ ಮೋಡಿ
ತೆಕ್ಕೆಯಲಿ ಬರಸೆಳೆದು ಬಿಗಿದಪ್ಪುವೆ
ನೀನಿಕ್ಕುವ ಶರತ್ತು ನಾನೊಪ್ಪೀರುವೆ//
ಬರದೆ ಕಾದು ಕೆಳಗಿಳಿಸಿ ಬಿತ್ತಬೇಡ
ಜಾಲಿಮರ ಮುಳ್ಳಗಗಳ ಮೂಟೆ ಅಲ್ಲಿ
ಜಾಜಿಮಲ್ಲಿಗೆ ಕನಕಾಂಬರ ಬೆಳೆವೆನಲ್ಲಿ
ಸೇರಿ ಸುವಾಸನೆ ಸವಿಯಬೇಕು ಮಲ್ಲಿ//
ಜಾಲಿಮರ ಮುಳ್ಳಗಗಳ ಮೂಟೆ ಅಲ್ಲಿ
ಜಾಜಿಮಲ್ಲಿಗೆ ಕನಕಾಂಬರ ಬೆಳೆವೆನಲ್ಲಿ
ಸೇರಿ ಸುವಾಸನೆ ಸವಿಯಬೇಕು ಮಲ್ಲಿ//
ಸಾಗರ ಮುತ್ತಿಗೆನಿನ್ನ ನತ್ತಿನಲ್ಲಿರುವಾಸೆ
ಕತ್ತಲೆ ಕರೆಯುವುದು ಶಶಿಧರನ ಉಷೆ
ಕಾಣಬಲ್ಲೆಯಾ ಕವಿ ಹೃದಯ ಮೂಸೆ
ಕನಸು ನನಸು ಮಾಡೆನ್ನ ಒತ್ತಾಸೆ//
ಕತ್ತಲೆ ಕರೆಯುವುದು ಶಶಿಧರನ ಉಷೆ
ಕಾಣಬಲ್ಲೆಯಾ ಕವಿ ಹೃದಯ ಮೂಸೆ
ಕನಸು ನನಸು ಮಾಡೆನ್ನ ಒತ್ತಾಸೆ//
ಬಸನಗೌಡ ಗೌಡರ
No comments:
Post a Comment