ಸಮರವೀರರ ಅಮರ ನಾಮ
ಹಿಮದ ಗಿರಿಗಳಲಿ ಮೊಳಗಲಿ
ಸಿಂದೂ ಕಂದರ ಗುರಿ ತಲುಪಲಿ
ಸಕಲ ತ್ಯಾಗಿ ಜವಾನ ಮೆರೆಯಲಿ//
ದೇಶಪ್ರೇಮವೊಂದೆ ಇವರ ಉಸಿರು
ಹಸಿರು ಪರ್ವತ ಸಾಲೆ ಇವರ ಹೆಸರು
ಕಣವಿಯಿಂದ ಜಿನುಗುವ ಜೀವಜಲ
ನಮ್ಮ ಯೋಧನ ದೀರ ರಕ್ತ ತರ್ಪಣ//
ಅಂದು ನಮ್ಮ ಋಷಿಯ ತಪದ ತಾನ
ಇಂದು ಯೋಧ ರಣಕಹಳೆ ಗಾಯನ
ಕ್ಷಣ ವಿಚಲಿತನಾದೆ ಎದೆಗೆ ವೈರಿ ಬಾಣ
ವೀರಮರಣ ಕಂಡೆ ದೇಶ ಗುಣಗಾನ//
ವೈರಿ ಪಡೆಗೆ ಎದೆಯೊಡ್ಡಿ ಹುಲ್ಲು ಕಡ್ಡಿ
ಹಿಡಿದು ಗೀರಿ ಸಿಂಹಗರ್ಜನೆ ಠೇಂಕರಿಸಿ
ಹರಸಾಹಸ ಮೆರೆದ ಮಹಾಸಾಹಸಿ
ಹಾರಿಸಿದೆಮ್ಮ ಹೆಮ್ಮೆ ದೇಶ ಬಾವುಟ//
ಹಿಂದೂಸಾಗರದಿಂದ ಸಿಂದೂಕಣೆವೆ
ಮರಳು ಕಣವಿಯಿಂದ ವಂಗಮುಖಜ
ಉಪಖಂಡ ವಂದಿಸಿತು ಇತಿಹಾಸದ
ಸಾವಿರ ಅರಸರ ಶಾಸನ ಸಾಲಿನಲ್ಲಿ //
🖋️ ಬಸನಗೌಡ ಗೌಡರ
ಹಿಮದ ಗಿರಿಗಳಲಿ ಮೊಳಗಲಿ
ಸಿಂದೂ ಕಂದರ ಗುರಿ ತಲುಪಲಿ
ಸಕಲ ತ್ಯಾಗಿ ಜವಾನ ಮೆರೆಯಲಿ//
ದೇಶಪ್ರೇಮವೊಂದೆ ಇವರ ಉಸಿರು
ಹಸಿರು ಪರ್ವತ ಸಾಲೆ ಇವರ ಹೆಸರು
ಕಣವಿಯಿಂದ ಜಿನುಗುವ ಜೀವಜಲ
ನಮ್ಮ ಯೋಧನ ದೀರ ರಕ್ತ ತರ್ಪಣ//
ಅಂದು ನಮ್ಮ ಋಷಿಯ ತಪದ ತಾನ
ಇಂದು ಯೋಧ ರಣಕಹಳೆ ಗಾಯನ
ಕ್ಷಣ ವಿಚಲಿತನಾದೆ ಎದೆಗೆ ವೈರಿ ಬಾಣ
ವೀರಮರಣ ಕಂಡೆ ದೇಶ ಗುಣಗಾನ//
ವೈರಿ ಪಡೆಗೆ ಎದೆಯೊಡ್ಡಿ ಹುಲ್ಲು ಕಡ್ಡಿ
ಹಿಡಿದು ಗೀರಿ ಸಿಂಹಗರ್ಜನೆ ಠೇಂಕರಿಸಿ
ಹರಸಾಹಸ ಮೆರೆದ ಮಹಾಸಾಹಸಿ
ಹಾರಿಸಿದೆಮ್ಮ ಹೆಮ್ಮೆ ದೇಶ ಬಾವುಟ//
ಹಿಂದೂಸಾಗರದಿಂದ ಸಿಂದೂಕಣೆವೆ
ಮರಳು ಕಣವಿಯಿಂದ ವಂಗಮುಖಜ
ಉಪಖಂಡ ವಂದಿಸಿತು ಇತಿಹಾಸದ
ಸಾವಿರ ಅರಸರ ಶಾಸನ ಸಾಲಿನಲ್ಲಿ //
🖋️ ಬಸನಗೌಡ ಗೌಡರ
No comments:
Post a Comment