Friday, August 7, 2020

* ಶ್ರಾವಣ *

ಶ್ರಾವಣ ಬಂತು ನಾಡಿಗೆ ಹಾಡಿಗೆ

ನಾವಿಳಿದ ಬಯಲು ಬದುಕಿನ ಗೂಡಿಗೆ

ಬನವೆಲ್ಲ ಹಸಿರಾಗಿ ಚಲುವೆಲ್ಲ ಚಲ್ಲಾಡಿ 

ಚೇತನದ ಚಿಲುಮೆ ಚೆಲ್ಲಿತಲ್ಲಿ //


ಸಿಹಿ ಚಕ್ಕುಲಿ  ಕಹಿಯ ಬಾಳು ಮುಕ್ಕಿ 

ಸಂತಸದ ಭಾವ ಉಕ್ಕಿ ಹರಿಯಿತಲ್ಲಿ/ 

ಶಿವನಾಮ ತೊಟ್ಟಿಕ್ಕಿ ಶಿಲೆ ಮಲೆಗಳರಳಿ

ಕನಸು ಗರಿಗೆದರಿ ಕುಣಿಯಿತಲ್ಲಿ //


ಉಷೆಯಲ್ಲಿ ಕುಣಿದು ಮನತಣಿದು

ಮರಗಿಡದಲಿ ಮನ್ಮಥ ಮೈಮರೆತು/

ಉನ್ಮಾದ ಉಕ್ಕಿ ಸುಮವಾಗಿ ಅರಳಿ 

ಜೋಗುಳ ಹಾಡಿದಳು ಮಲ್ಲಿ ಅಲ್ಲಿ //


ಜಿಟಿ ಜಿಟಿ ಮಳೆಗೆ ಗಟ್ಟಿಕಲ್ಲೆ ಕರಗಿ

ತೋಟದ ಮಾಲಿಗೂ ಶಟರರೋಗ/ 

ಗಿಳಿ ಗೊರವಂಕ ಉಲಿದು ನೀನಾದ

ಗಂಧರ್ವ ಲೋಕ ಸೃಷ್ಟಿಯಾಯಿತಲ್ಲಿ//


ಶ್ರಾವಣ ಶೃಂಗಾರ ಬದುಕೆಲ್ಲ ಬಂಗಾರ 

ಗುಡಿ ಗುಂಡಾರದಲ್ಲರಳಿತು ಭಂಡಾರ/

ಶಿವನ ಪಾದಕೆ ಹೂಮಳೆ ಅರ್ಪಣ

ಗಂಟೆಭಜನೆ ಮನದ ಮಾರ್ಜನವಲ್ಲಿ//


       ಬಸನಗೌಡ ಗೌಡರ 


No comments:

Post a Comment

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...