ಶ್ರಾವಣ ಬಂತು ನಾಡಿಗೆ ಹಾಡಿಗೆ
ನಾವಿಳಿದ ಬಯಲು ಬದುಕಿನ ಗೂಡಿಗೆ
ಬನವೆಲ್ಲ ಹಸಿರಾಗಿ ಚಲುವೆಲ್ಲ ಚಲ್ಲಾಡಿ
ಚೇತನದ ಚಿಲುಮೆ ಚೆಲ್ಲಿತಲ್ಲಿ //
ಸಿಹಿ ಚಕ್ಕುಲಿ ಕಹಿಯ ಬಾಳು ಮುಕ್ಕಿ
ಸಂತಸದ ಭಾವ ಉಕ್ಕಿ ಹರಿಯಿತಲ್ಲಿ/
ಶಿವನಾಮ ತೊಟ್ಟಿಕ್ಕಿ ಶಿಲೆ ಮಲೆಗಳರಳಿ
ಕನಸು ಗರಿಗೆದರಿ ಕುಣಿಯಿತಲ್ಲಿ //
ಉಷೆಯಲ್ಲಿ ಕುಣಿದು ಮನತಣಿದು
ಮರಗಿಡದಲಿ ಮನ್ಮಥ ಮೈಮರೆತು/
ಉನ್ಮಾದ ಉಕ್ಕಿ ಸುಮವಾಗಿ ಅರಳಿ
ಜೋಗುಳ ಹಾಡಿದಳು ಮಲ್ಲಿ ಅಲ್ಲಿ //
ಜಿಟಿ ಜಿಟಿ ಮಳೆಗೆ ಗಟ್ಟಿಕಲ್ಲೆ ಕರಗಿ
ತೋಟದ ಮಾಲಿಗೂ ಶಟರರೋಗ/
ಗಿಳಿ ಗೊರವಂಕ ಉಲಿದು ನೀನಾದ
ಗಂಧರ್ವ ಲೋಕ ಸೃಷ್ಟಿಯಾಯಿತಲ್ಲಿ//
ಶ್ರಾವಣ ಶೃಂಗಾರ ಬದುಕೆಲ್ಲ ಬಂಗಾರ
ಗುಡಿ ಗುಂಡಾರದಲ್ಲರಳಿತು ಭಂಡಾರ/
ಶಿವನ ಪಾದಕೆ ಹೂಮಳೆ ಅರ್ಪಣ
ಗಂಟೆಭಜನೆ ಮನದ ಮಾರ್ಜನವಲ್ಲಿ//
ಬಸನಗೌಡ ಗೌಡರ
No comments:
Post a Comment