ಮಾಯಾ ನಗರವಿದು ಮಾಯಾಂಗನೆ
ಮೆರೆಯತಿರುವಳು ಜಗದ ತುಂಬಾ
ಮನದ ಮೂಲೆಯಲ್ಲಿ ನೆಟ್ಟಾಳ ಕಂಬ
ಮರೆತರೆ ಒಗೆಯತಾಳೊ ಹುಂಬ//
ಬೆಳೆಯುವವ ಬೆಳೆಯಲಿ ಮರದೆತ್ತರ
ರವಿ ಬೆಳೆದ ಮೇಲೆ ನೆರಳಿದಕೆ ಉತ್ತರ
ಸಂತೋಷ ಪಡಲು ಬರಬೇಕು ಹತ್ತಿರ
ಕತ್ತರಿಸಬೇಕು ಸದಾ ಮತ್ಸರದ ಹುತ್ತ//
ಥಳಕು ಬಳುಕಿನ ತಾಮಸ ಬದುಕು
ಕೆದಕಿದರದು ಬರಿ ಹರಕು ಮುರಕು
ಕಾವಿ ಬಟ್ಟೆಯನ್ನೂ ಬಿಟ್ಟಿಲ್ಲ ಮತ್ತು
ಕಾಲವೆ ತರುವುದು ಇದಕೆಲ್ಲ ಕುತ್ತು//
ಮತ್ತಿಗೆ ಬೆನ್ನು ಹತ್ತಿದವರ ತಾಕತ್ತು
ಹೊತ್ತು ಏರಿದಾಗ ಬರತಾವು ಹಕಿಕತ್ತು
ಅದು ಇಳಿದಾಗ ಅದಕಿಲ್ಲ ಕಿಮ್ಮತ್ತು
ಈಗ ಕೇಳಲು ನಮಗಿಲ್ಲ ಪುರಸೊತ್ತು//
ಬಸನಗೌಡ ಗೌಡರ
No comments:
Post a Comment