ನಾನು ನನ್ನವರೆನ್ನುವದು ಬರಿ ಭ್ರಮೆ
ಹರಿದು ತಿನ್ನಲು ಹಾಕಿದ ಪರಿಭ್ರಮಣ
ತರಿದ ಮರಕೆ ಸುತ್ತುವುದೆ ಹಕ್ಕಿ ಗಣ
ತರಿದ ಮರಕೆ ಸುತ್ತುವುದೆ ಹಕ್ಕಿ ಗಣ
ಹರಗುರು ಚರಣಕೆ ಎರಗಬೇಕು ಶರಣ//
ನಾನೇಕೆ ನನ್ನಾಳಿದ ನಾಡ ದೊರೆ
ನೂರು ನಾಡನು ಗೆದ್ದು ಮೆರೆದರು
ಕಡೆಗೊಮ್ಮೆ ಮೂರಡಿಯಲ್ಲಿ ಮುದಡಿ
ಮಣ್ಣಲ್ಲಿ ಮಣ್ಣಾಗಿ ಕೊನೆಗಾದ ಹುಡಿ//
ಕಡೆಗೊಮ್ಮೆ ಮೂರಡಿಯಲ್ಲಿ ಮುದಡಿ
ಮಣ್ಣಲ್ಲಿ ಮಣ್ಣಾಗಿ ಕೊನೆಗಾದ ಹುಡಿ//
ಬಿಡಲೊಲ್ಲದು ನನದೆನ್ನುವ ಭ್ರಮೆ
ಬಿಡದೆ ಕಾಡುವುದು ನೆರಳಂತೆ ಹೆಮ್ಮೆ
ಬಿದ್ದರೂ ಸದ್ದಾಗದಂತೆ ಹಿಡಿವ ಬಯಕೆ
ಗೆದ್ದವರಂತೆ ನಟಿಸುವ ಬಂಡ ತವಕ //
ಬಿದ್ದರೂ ಸದ್ದಾಗದಂತೆ ಹಿಡಿವ ಬಯಕೆ
ಗೆದ್ದವರಂತೆ ನಟಿಸುವ ಬಂಡ ತವಕ //
ಮನದ ಮೈಲಿಗೆ ತೊಳೆಯದ ನರ
ಮೈಲುದ್ದ ನಡೆದು ಪಡೆಬಹುದೆ ವರ
ಬೆಳಗ್ಗೆಯೆ ಸಂತಸ ಬಯಸಿದರೆ ಬರ
ಆಸೆತೊರೆ ಸಂಜೆಯ ಬದುಕು ಸುಂದರ//
ಬೆಳಗ್ಗೆಯೆ ಸಂತಸ ಬಯಸಿದರೆ ಬರ
ಆಸೆತೊರೆ ಸಂಜೆಯ ಬದುಕು ಸುಂದರ//
ಬಸನಗೌಡ ಗೌಡರ
No comments:
Post a Comment