ನಡೆದಾಡಿದ ದೇವರೆ ನಮಿಪೆ ಗುರುವೆ
ನಿನ್ನ ಚರಣಕೆ ಹೂವು ಫಲವ ತರುವೆ/ಪ/
ನಿನ್ನ ಚರಣಕೆ ಹೂವು ಫಲವ ತರುವೆ/ಪ/
ಸಿದ್ದಗಂಗೆಯ ಸಿದ್ದಿ ಪುರುಷ ಎದ್ದು ಬಾ
ಹುದ್ದೆಗಾಗಿಯೆ ಗುದ್ದಾಡಿ ನಿದ್ದೆಗೆ ಜಾರಿ
ಒದ್ದಾಡುವ ಜನರ ಉದ್ಧಾರ ಮಾಡಲು
ಹುದ್ದೆಗಾಗಿಯೆ ಗುದ್ದಾಡಿ ನಿದ್ದೆಗೆ ಜಾರಿ
ಒದ್ದಾಡುವ ಜನರ ಉದ್ಧಾರ ಮಾಡಲು
ಶುದ್ಧ ಮನಸ್ಸಿನ ಪ್ರಭುವೆ ನೀನೆದ್ದು ಬಾ//
ಅನ್ನ ಅಕ್ಷರ ಧರ್ಮದ ಮರ್ಮಸಾರಿ
ಕಣ್ಣು ತೆರೆಸಿದೆ ಭುವಿಯ ಮಕ್ಕಳಿಗೆ/
ಬದುಕು ಕಲಿಸಲು ಕಟ್ಟಿದೆ ಜೋಳಿಗೆ
ಬಾಗಿ ನೆಡೆದಾಗ ಬಾಳಾತು ಹೋಳಿಗೆ//
ಜಾತಿ ವಿಷವರ್ತುಲ ಮೂಲ ಹರಿದು
ಪಕ್ಷ ಪಂಗಡದ ಪರಿಭಾಷೆಯ ಮೀರಿ
ಪಳಗಿಸಿ ಪಾಠ ಕಲಿಸಿ ಶರಣ ತಯಾರಿ
ಪವಡಿಸಿದೆ ಜಗಜನರ ಹೃದಯವೇರಿ//
ಪಳಗಿಸಿ ಪಾಠ ಕಲಿಸಿ ಶರಣ ತಯಾರಿ
ಪವಡಿಸಿದೆ ಜಗಜನರ ಹೃದಯವೇರಿ//
ಕಾವಿಯ ಕರ್ಮದ ಮರ್ಮ ಅರುಹಿ
ಕಡಲಂತೆ ಒಡಲೊಳಗೇ ಸಲುಹಿದೆ
ಹಡೆದವರ ಪಡುವ ಸಂಕಷ್ಟ ಕಡಿದೆ
ಹರನಂತೆ ಪರರ ಬದುಕಿಗೆ ಬಾಗಿದೆ//
ಬಸನಗೌಡ ಗೌಡರ
No comments:
Post a Comment