ಗಾಂಧಿ ತಾತ ನಿನ್ನ ಶಾಂತಿ ವಚನ
ಕೆಲವರಿಗೆ ಆಗ ಹತ್ತಿದೆ ಅಪಚನ/
ಆಗಲಿ ಬಿಡಿ ಕೆಡುವುದು ಉದರವಿದಿನ
ಕೆಟ್ಟ ಮೇಲೆ ಬರುವುದು ಸುದಿನ //
ಕೆಲವರಿಗೆ ಆಗ ಹತ್ತಿದೆ ಅಪಚನ/
ಆಗಲಿ ಬಿಡಿ ಕೆಡುವುದು ಉದರವಿದಿನ
ಕೆಟ್ಟ ಮೇಲೆ ಬರುವುದು ಸುದಿನ //
ಶಾಂತಿ ಅಹಿಂಸೆಯ ಪರಿಪಾಲನೆ
ಕೆಲ ಬೋಧಕರಿಗಾಗಿದೆ ವಿವರಣೆ /
ಸಾಧಕರಿಗದು ಸಮಯ ಪಾಲನೆ
ಪಾಲನೆಗೆ ಸಿಗತ್ತೆ ಲೇಟಾಗಿ ಮಣೆ//
ಹಿಂದೂ ಮುಸ್ಲಿಮರ ಐಕ್ಯತಾ ಮಂತ್ರ
ಜಿನ್ನಾನ ಮುಂದೆ ನಡೆಯಲಿಲ್ಲ ತಂತ್ರ/
ಹೆಣೆದ ವಿಭಜನೆಗೆ ಮಹಾ ಕುತಂತ್ರ
ದಳ್ಳುರಿಗೆ ಬೆಂದ ಮೇಲೆ ದೇಶ ಸ್ವತಂತ್ರ //
ಗಾಂದೀಜಿ ಬ್ರಿಟಿಷರಿಗೆ ಹಾಕಿ ಸವಾಲು
ತಂದರು ಸ್ವತಂತ್ರ ಕೇಳಲಿಲ್ಲ ಪಾಲು/
ಸಾಧಿಸಿದೆನೆಂದು ಹೇಳದ ಸಾಧಕ
ಸವೆದು ಶ್ರೀಗಂಧ ಸೂಸಿದ ಸೇವಕ//
ನನ್ನ ಮಾಡಬೇಡಿ ನೀವು ಮೂರ್ತಿ
ಹೇಳಿದ ಅದು ನನಗಲ್ಲ ತರುವ ಕೀರ್ತಿ/
ಆದರೆತತ್ವಕ್ಕಿಟ್ಟಿವು ತಿಲಾಂಜಲಿ ಪೂರ್ತಿ
ಮರೆತಿಲ್ಲ ಭಾಷಣದಲ್ಲಿ ಬರತೈತಿ ಸರತಿ//
ಮರೆತಿಲ್ಲ ಭಾಷಣದಲ್ಲಿ ಬರತೈತಿ ಸರತಿ//
ಬಸನಗೌಡ ಗೌಡರ
No comments:
Post a Comment