Friday, October 2, 2020

* ಗಾಂಧಿ ತಾತ *

ಗಾಂಧಿ ತಾತ ನಿನ್ನ ಶಾಂತಿ ವಚನ 
ಕೆಲವರಿಗೆ ಆಗ ಹತ್ತಿದೆ ಅಪಚನ/
ಆಗಲಿ ಬಿಡಿ ಕೆಡುವುದು ಉದರವಿದಿನ
ಕೆಟ್ಟ ಮೇಲೆ ಬರುವುದು ಸುದಿನ //

ಶಾಂತಿ  ಅಹಿಂಸೆಯ ಪರಿಪಾಲನೆ
ಕೆಲ ಬೋಧಕರಿಗಾಗಿದೆ ವಿವರಣೆ /
ಸಾಧಕರಿಗದು ಸಮಯ ಪಾಲನೆ
ಪಾಲನೆಗೆ ಸಿಗತ್ತೆ ಲೇಟಾಗಿ ಮಣೆ//

ಹಿಂದೂ ಮುಸ್ಲಿಮರ ಐಕ್ಯತಾ ಮಂತ್ರ 
ಜಿನ್ನಾನ ಮುಂದೆ ನಡೆಯಲಿಲ್ಲ ತಂತ್ರ/
ಹೆಣೆದ ವಿಭಜನೆಗೆ ಮಹಾ ಕುತಂತ್ರ
ದಳ್ಳುರಿಗೆ ಬೆಂದ ಮೇಲೆ ದೇಶ ಸ್ವತಂತ್ರ //

ಗಾಂದೀಜಿ ಬ್ರಿಟಿಷರಿಗೆ ಹಾಕಿ ಸವಾಲು
ತಂದರು ಸ್ವತಂತ್ರ ಕೇಳಲಿಲ್ಲ ಪಾಲು/
ಸಾಧಿಸಿದೆನೆಂದು ಹೇಳದ ಸಾಧಕ
ಸವೆದು ಶ್ರೀಗಂಧ ಸೂಸಿದ ಸೇವಕ//

ನನ್ನ ಮಾಡಬೇಡಿ ನೀವು ಮೂರ್ತಿ
ಹೇಳಿದ ಅದು ನನಗಲ್ಲ ತರುವ ಕೀರ್ತಿ/ 
ಆದರೆತತ್ವಕ್ಕಿಟ್ಟಿವು ತಿಲಾಂಜಲಿ ಪೂರ್ತಿ
ಮರೆತಿಲ್ಲ ಭಾಷಣದಲ್ಲಿ ಬರತೈತಿ ಸರತಿ//

      ಬಸನಗೌಡ ಗೌಡರ 


No comments:

Post a Comment

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...