Monday, October 5, 2020

* ನಟರು *

ಬ್ರಹ್ಮ ಬರೆದ ಕತೆಯ ಭಾವಿ ನಟರು
ನೀಡಿದ ಪಾತ್ರ ಮಾಡದೆ ಬೇಡುವರು /
ಆಡಿಸಿದಂತಾಡುವ ಗೊಂಬೆಗಳು
ಅರಿವಿಲ್ಲದೆ ಚಲಿಸುವವು ದಿನಗಳು//

ಪಾತ್ರ ಮೇಲು ಕೀಳೆನ್ನುವುದಿವರ ಭ್ರಮೆ
ಗೆದ್ದ ನಟರ ಸಿನಿಕತನದಲ್ಲಿವರ  ಸಂಭ್ರಮ/
ಗೆಲ್ಲುವ ಕುದುರೆಗಿವರು ಹಿಂಬಾಲಕರು 
ಹೂವು ತುರಾಯಿಗೆ ನಿತ್ಯಕಾಯುವರು//

ರಂಗಭೂಮಿ ದೂರ ನೂರು ಮಾರು 
ಆಸೆಯ ಅಳತೆಯು ಸಾವಿರ ಮಾರು/
ಗಡಿಯ ಗುರುತಿಗಾಗಿ ನಡೆದಿದೆ ಜಗಳ
ಗೆದ್ದರೇನು ? ಬದುಕಿಗೆ ಬೇಕು ಕವಳ//  

ಬಣ್ಣ ಬದಲಿಸಿ ಹಿರಿತನ ಬಯಸುವರು 
ಬಣ್ಣ ಜಾರಿದಾಗ ತಾನೆ ಬಯಲಾದರು/
ಬದುಕಿನ ಬಣ್ಣವು ನಿಜ ತಿಳಿಯದಣ್ಣ 
ದುಡಿದು ಪಡೆಯುವವರು ಹಿರಿಯರಣ್ಣ//

               🖋️ಬಸನಗೌಡ ಗೌಡರ

No comments:

Post a Comment

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...