ಬ್ರಹ್ಮ ಬರೆದ ಕತೆಯ ಭಾವಿ ನಟರು
ನೀಡಿದ ಪಾತ್ರ ಮಾಡದೆ ಬೇಡುವರು /
ಆಡಿಸಿದಂತಾಡುವ ಗೊಂಬೆಗಳು
ಅರಿವಿಲ್ಲದೆ ಚಲಿಸುವವು ದಿನಗಳು//
ನೀಡಿದ ಪಾತ್ರ ಮಾಡದೆ ಬೇಡುವರು /
ಆಡಿಸಿದಂತಾಡುವ ಗೊಂಬೆಗಳು
ಅರಿವಿಲ್ಲದೆ ಚಲಿಸುವವು ದಿನಗಳು//
ಪಾತ್ರ ಮೇಲು ಕೀಳೆನ್ನುವುದಿವರ ಭ್ರಮೆ
ಗೆದ್ದ ನಟರ ಸಿನಿಕತನದಲ್ಲಿವರ ಸಂಭ್ರಮ/
ಗೆಲ್ಲುವ ಕುದುರೆಗಿವರು ಹಿಂಬಾಲಕರು
ಹೂವು ತುರಾಯಿಗೆ ನಿತ್ಯಕಾಯುವರು//
ರಂಗಭೂಮಿ ದೂರ ನೂರು ಮಾರು
ಆಸೆಯ ಅಳತೆಯು ಸಾವಿರ ಮಾರು/
ಗಡಿಯ ಗುರುತಿಗಾಗಿ ನಡೆದಿದೆ ಜಗಳ
ಗೆದ್ದರೇನು ? ಬದುಕಿಗೆ ಬೇಕು ಕವಳ//
ಬಣ್ಣ ಬದಲಿಸಿ ಹಿರಿತನ ಬಯಸುವರು
ಬಣ್ಣ ಜಾರಿದಾಗ ತಾನೆ ಬಯಲಾದರು/
ಬದುಕಿನ ಬಣ್ಣವು ನಿಜ ತಿಳಿಯದಣ್ಣ
ದುಡಿದು ಪಡೆಯುವವರು ಹಿರಿಯರಣ್ಣ//
🖋️ಬಸನಗೌಡ ಗೌಡರ
No comments:
Post a Comment