Monday, October 5, 2020

* ಪರಶಿವ *

ಗಣೇಶಪಿತ ಗೌರಿಪತಿ ಗಂಗಾಧರ 

ಭಂಗ ಬಂದರೆ ನೀ ಉಗ್ರ ತಾಂಡವ 

ಬಡವ ನೀ ಶಿವ ಬಂಗಾರ, ಬೆಳ್ಳಿಯಿಲ್ಲ

ಬಟ್ಟೆಯಿಲ್ಲ ಬೂದಿಯೆ ಮೈಯಲ್ಲಾ //


ದೇಶಿವಾಸಿಗಳ ದೇವ ನೀ ಪರಶಿವ 

ಸಿಂಧೂಬಯಲಿನಿಂದ ಮಹಾದೇವ

ಪಶುಪತಿಯಾಗಿ ಬೆಳೆದೆ ಆಗಿನಿಂದ

ನಾಮ ನೂರಾರು, ಹೇಳಲವು ಚಂದ//


ಕೈಯಲ್ಲಿ ತ್ರಿಶೂಲ ಅದರಲ್ಲಿ ಡಮರುಗ

ಕೈಲಾಸವಾಸಿ ಕವನಕೂ ನಿಲುಕದವನು

ಗಂಗೆಗೌರಿಯ ಅಂಗದಿ ಧರಿಸಿದವನು 

ತ್ರಿನೇತ್ರಿ ತ್ರಿವೇಣಿ,ತ್ರಿಲೋಕ ಸಂಚಾರಿ// 

 

ಮಸಣದ ವಾಸ ಹೊಸದೇನಲ್ಲ 

ನಾಗರಿಕತೆ ಮೆಟ್ಟಲು ಮೂಲದೇವ

ನಿನ್ನ ರೂಪಕೆ ಮರುಳಾದವನು ನರ

ನೀನೊಲಿಯದಿರೆ ಎಲ್ಲಾ ಹರೊಹರ//


        🖋️ಬಸನಗೌಡ ಗೌಡರ 

1 comment:

ಸ್ವಾತಂತ್ರ್ಯ ದಿನಾಚರಣೆ

      ತಮಗೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು,       ವೇದಿಕೆಯ ಮೇಲೆ ಆಶೀನರಾಗಿರುವ ಗಣ್ಯ ಮಾನ್ಯರೆ ಹಾಗೂ ಪ್ರೀತಿಯ ವಿದ್ಯಾರ್ಥಿಗಳೆ, ಗುಳೇಗುಡ್ಡ ನಾಗರಿಕರ...