Monday, October 5, 2020

* ಪರಶಿವ *

ಗಣೇಶಪಿತ ಗೌರಿಪತಿ ಗಂಗಾಧರ 

ಭಂಗ ಬಂದರೆ ನೀ ಉಗ್ರ ತಾಂಡವ 

ಬಡವ ನೀ ಶಿವ ಬಂಗಾರ, ಬೆಳ್ಳಿಯಿಲ್ಲ

ಬಟ್ಟೆಯಿಲ್ಲ ಬೂದಿಯೆ ಮೈಯಲ್ಲಾ //


ದೇಶಿವಾಸಿಗಳ ದೇವ ನೀ ಪರಶಿವ 

ಸಿಂಧೂಬಯಲಿನಿಂದ ಮಹಾದೇವ

ಪಶುಪತಿಯಾಗಿ ಬೆಳೆದೆ ಆಗಿನಿಂದ

ನಾಮ ನೂರಾರು, ಹೇಳಲವು ಚಂದ//


ಕೈಯಲ್ಲಿ ತ್ರಿಶೂಲ ಅದರಲ್ಲಿ ಡಮರುಗ

ಕೈಲಾಸವಾಸಿ ಕವನಕೂ ನಿಲುಕದವನು

ಗಂಗೆಗೌರಿಯ ಅಂಗದಿ ಧರಿಸಿದವನು 

ತ್ರಿನೇತ್ರಿ ತ್ರಿವೇಣಿ,ತ್ರಿಲೋಕ ಸಂಚಾರಿ// 

 

ಮಸಣದ ವಾಸ ಹೊಸದೇನಲ್ಲ 

ನಾಗರಿಕತೆ ಮೆಟ್ಟಲು ಮೂಲದೇವ

ನಿನ್ನ ರೂಪಕೆ ಮರುಳಾದವನು ನರ

ನೀನೊಲಿಯದಿರೆ ಎಲ್ಲಾ ಹರೊಹರ//


        🖋️ಬಸನಗೌಡ ಗೌಡರ 

1 comment:

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...