Wednesday, November 25, 2020

* ಗುಡ್ಡದಪುರ *

         ಅದೊಂದು ಚಿಕ್ಕ ಊರು ಅದಕ್ಕೆ ಹೊಂದಿಕೊಂಡಂತೆ ಒಂದು ಪುಟ್ಟ ತಾಂಡಾ ಅದರಲ್ಲಿ ನೂರಾರು ಬಂಜಾರಾ ಸಂಪ್ರದಾಯ ಬದ್ದ ಕುಟುಂಬಗಳು ವಾಸವಾಗಿದ್ದವು ಅವರ ಮುಖ್ಯ ಉದ್ಯೋಗ ಬೇಸಾಯವಾಗಿದ್ದರೂ ಅವರೆಲ್ಲರೂ ಅವಲಂಬಿಸಿದ್ದು ಕೇವಲ ಕೃಷಿ ಅಲ್ಲದೆ ಕುರಿ ಸಾಕಣಿಕೆ ಮತ್ತು ಸರಾಯಿ ತಯಾರಿಸುವ ಕೆಲಸವನ್ನು ಮಾಡುತ್ತಿದ್ದರು. ಕೆಲವು ಕುಟುಂಬಗಳು ಸಣ್ಣ ಜಮಿನು ಹೊಂದಿದ ರೈತರು ತಮ್ಮ ಕೃಷಿ ಚಟುವಟಿಕೆ ಮುಗಿಸಿ ಗೋವಾ ಮಂಗಳೂರು ಕಡೆ ಮುಖ ಮಾಡುತ್ತಿದ್ದರು.ರಾಮಪ್ಪ ಮಾತ್ರ ಒಬ್ಬ ಶಿಸ್ತಿನ ರೈತ ತನ್ನ ಕುಟುಂಬವನ್ನು ವ್ಯವಸಾಯದಲ್ಲಿ ತೊಡಗಿಸಿದ್ದ. ಹುಟ್ಟಿಸಿದ ದೇವರು ಹುಲ್ಲು ಮೇಯಿಸುವದಿಲ್ಲ ಎಂಬ ಗಾದೆಗೆ ಕಟ್ಟು ಬಿದ್ದು ಒಂದಾದ ಮೇಲೆ ಒಂದರಂತೆ 06 ಮಕ್ಕಳ ತಂದೆಯಾದ 4 ಗಂಡು 2 ಹೆಣ್ಣು, ಅವರೆಲ್ಲರಿಗೂ ಶಿಕ್ಷಣ ನೀಡದಿದ್ದರೂ ತನ್ನ ಬುದ್ಧಿವಂತಿಕೆಯಿಂದ ಅವರನ್ನು ತಂದೆಗೆ ತಕ್ಕ ಮಕ್ಕಳನ್ನಾಗಿ ಬೆಳಸಿದ. ಹಿರಿಯ ಮಗ ನೆಲವನ್ನು ಉದ್ದ ಅಡ್ಡ ಸೀಳಿ ಬೆವರು ಸ್ನಾನ ಮಾಡಿ ಭೂತಾಯಿ ಮಗನಾದ .ಗುಡ್ಡ ಪ್ರದೇಶವಾಗಿರುವದರಿಂದ ಇನ್ನೊಬ್ಬ ಮಗ ಕುರಿಗಾಹಿಯಾದ. ಹಳ್ಳಿ ಗಾಡು ಅಂದರೆ ತಂಟೆ ತಕರಾರು ಅಂತಾ ಇದ್ದೆ ಇರುತ್ತೆ, ಅಂತ ಸನ್ನಿವೇಷ ಎದುರಿಸಲು ಮನೆಗೊಬ್ಬ ಕಟ್ಟು ಮಸ್ತಾದ ಯುವಕನ ತಯಾರಿಸುವುದು ಸಾಮಾನ್ಯವಾಗಿತ್ತು ಆಗಿನ ಕಾಲ, ಹೀಗೆ ಒಬ್ಬ ಕುಸ್ತಿ ಪೈಲವಾನನಾದ ನಂತರ ಉಳಿದವನೆ ಶಿವಪ್ಪ ಎಲ್ಲರಂತೆ ಇವನನ್ನು ಶಾಲೆಗೆ ಕಳುಹಿಸಿದ ರಾಮಪ್ಪ. ಶಿವಪ್ಪ ಶಾಲೆಯಲ್ಲಿ ಹೇಳಿಕೊಳ್ಳುವ ಸಾಧನೆ ಮಾಡದಿದ್ದರು ಮೂರು ಇಯತ್ತೆ ಮುಗಿಸಿ ನಾಲ್ಕನೆಯ ತರಗತಿಗೆ ಶಾಲೆಯಿಂದ ವಿಮುಖನಾದ ಕಾರಣವಿಷ್ಟೆ ತನ್ನ ಓರಿಗೆ ಗೆಳೆಯರ ಸಹವಾಸ, ಅವರೊಟ್ಟಿಗೆ ಮೀನು ಹಿಡಿಯುವುದು, ಬೇಟೆಯಾಡಲು ಅನಿಯಾದ. ಕಾಲದ ಚಕ್ರದ ಮಹಿಮೆ ತಾಂಡಾದ ಗೆಳೆಯರ ಜೊತೆಗೂಡಿ ಪಕ್ಕದ ಶಹರಕ್ಕೆ ರಾತ್ರಿ ಸಮಯದಲ್ಲಿ ಸರಾಯಿ ಹೊತ್ತು ಸಾಗಿಸುವ ಕಾರ್ಯದಲ್ಲಿ ತೊಡಗಿದ ಶ್ರಮಕ್ಕೆ ಸಂಬಳವೇನೊ ಸಿಗುತ್ತಿತ್ತು ಹಗಲು ನಿರುದ್ಯೋಗಿಯಾದ ಆದರೆ ಅಣ್ಣ ಪೈಲವಾನನ ಮಾರ್ಗ ದರ್ಶನ ದಲ್ಲಿ ದೇಹವನ್ನು ದಂಡಿಸಿ ಕಟ್ಟು ಮಸ್ತಾದ ದೇಹವನ್ನು ಉಳಿಸಿದ್ದ.ಇದನ್ನು ಬಳಸಿ ಉಸುಕಿನ ಚೀಲ ಎತ್ತುವದರಲ್ಲಿ ಹೆಸರುವಾಸಿಯಾದ ಅಂದರೆ 200 ರಿಂದ 300 ಕೆ ಜಿ ಹೊತ್ತು ಎಲ್ಲರಿಂದ ಸೈ ಎಣಿಸಿಕೊಂಡ ಯಾವುದೇ ಚಟಾದಿಗಳನ್ನು ಬೆಳಸಿಕೊಳ್ಳಲಿಲ್ಲ,ಶಹರದಲ್ಲಿ ಅಲ್ಲಿ ಇಲ್ಲಿ ತಿರುಗುವಾಗ ಅನೇಕ ಜನರ ಪರಿಚಯ ಮಾಡಿಕೊಂಡ  ಅಂತಹ ಸನ್ನಿವೇಶದಲ್ಲಿ ಸಾಮಿಪ್ಯಕ್ಕೆ ಬಂದವರೆ ಶೇಷಪ್ಪ ಮಾಸ್ತರು ಇವರ ಕೆಲಸ ಸಂಗೀತ ಹೇಳಿ ಕೊಡುವುದು.ಶಿವಪ್ಪ ಇವರ ಗೆಳೆತನ ಸಂಪಾದಿಸಿದ ಇವರು ಕೇವಲ ಸಂಗೀತದ ಸ ರಿ ಗ ಮ ಪ....ಮಾತ್ರ ಹೇಳಿ ಕೊಡದೆ ಅಕ್ಷರದ ಮಹತ್ವ ತಿಳಿಸಿ ಸುವರ್ಣ ದಾರಿಯನ್ನು ಪರಿಚಯಿಸಿದರು ಅದುವೆ ಎಸ್ ಎಸ್ ಎಲ್ ಸಿ ಪಾಸಾಗುವಂತೆ ಮನಪರಿವರ್ತಿಸಿದ್ದು.ಫಲಶ್ರುತಿಯಾಗಿ ಕಷ್ಟ ಪಟ್ಟು ಓದಿ ದ ಅಂತೂ ಬಾಹ್ಯವಾಗಿ ಬರೆದು ಹತ್ತನೇ ವರ್ಗ ಪಾಸು ಮಾಡಿದ. ಪರಿಣಾಮವಾಗಿ ಆಶೆಗಳು ಗರಿಗೆದರಿ ದೇಶ ಸೇವೆಯ ಕನಸು ಕಾಣಲು ಸುರುಮಾಡಿದ.ಅದೆಷ್ಟೊ ಯುವಕರು ದಾರಿ ತಪ್ಪುವ ಸಮಯದಲ್ಲಿ ಈತ ಸರಿದಾರಿಯಲ್ಲಿಯೆ ಇದ್ದ.ಈ ಮಾತು ಬಳಸಲು ಇನ್ನೂ ಒಂದು ಕಾರಣವಿದೆ. ತಂದೆ ರಾಮಣ್ಣ ಹಿರಿಯ ಮಕ್ಕಳ ಮದುವೆ ಮಾಡುವಾಗ ಖರ್ಚಿನಲ್ಲಿ ಖರ್ಚು ಎಂದು ಚಿಕ್ಕವನಿದ್ದಾಗ ಬಾಲ್ಯವಿವಾಹ ಮಾಡಿ ಕೈ ತೊಳೆದುಕೊಂಡಿದ್ದರು ಅದೆಷ್ಟೋ ಪಾಲಕರು ಮಾಡುವ ತಪ್ಪು ರಾಮಣ್ಣ ಮಾಡಿ ಮಗನ ಸಂಸಾರ ಹಾದಿತಪ್ಪುವಂತೆ ಮಾಡಿ ಮನಸ್ಸಿನಲ್ಲಿಯೆ ಮಂಡಿಗೆ ತಿನ್ನುತ್ತಿದ್ದ,  ಸರಿಯಾಗಲೆಂದು ದೇವರಿಗೆ ಬೇಡಿಕೊಳ್ಳುತ್ತಿದ್ದ.ಆದರೆ ಆದದ್ದೆ ಬೇರೆ ಅದು ವಿಚ್ಛೇದನ ದಲ್ಲಿ ಅಂತ್ಯವಾಗಿತ್ತು. ಆದದ್ದು ಒಳ್ಳೆಯದಕ್ಕೆ ಅಂತಾರಲ್ಲ ಇದಕ್ಕೆ ಇರಬೇಕು.ಶಿವಪ್ಪ ದೃತಿಗೆಡಲಿಲ್ಲ ಬದಲಾಗಿ ಸಂಗೀತ ಶಾರದೆಯ ಬೆನ್ನು ಬಿದ್ದ .ಅದೆಷ್ಟೋ ಪುಣ್ಯಾತ್ಮರು ಸುರಪಾನದ ಬೆನ್ನು ಬಿದ್ದು ಮನೆಗೆ, ಸಮಾಜಕ್ಕೆ ಭಾರವಾದವರಿದ್ದಾರೆ ಅದಕ್ಕಿಂತ ಭಿನ್ನವಾಗಿದ್ದ ಈ ಶಿವಪ್ಪ ದೇವರು ಕೈ ಬಿಡಬಹುದು ಆದರೆ ಗುರುವಿನ ಮಾರ್ಗದರ್ಶನ ಕೈಬಿಡಲಿಲ್ಲ.ಶೇಷಪ್ಪ ಮಾಸ್ತರ ಶಿವಪ್ಪನ ಪಾಲಿಗೆ ಬರಿ ಗುರು ಅಲ್ಲ ಸಾಕ್ಷಾತ್ ದೇವರು ಯಾಕೆಂದರೆ ಆತನಿಗೆ ಸ ರಿ ಗ ಮ...ದೊಂದಿಗೆ ಅಕ್ಷರ ಬೆಳಕನ್ನು ನೀಡಿ ಶಿಕ್ಷಣದ ಕೆಚ್ಚು ತುಂಬಿದ ಮತ್ತು ಎಸ್ ಎಲ್ ಸಿ ಪರೀಕ್ಷೆ ಬರೆಯುವಂತೆ ಪ್ರೇರೇಪಿಸಿ ಓದುವ ಹುಚ್ಚು ಹಚ್ಚಿ ಪಾಸಾಗುವಂತೆ ಮಾಡಿದ.ಎಸ್ ಎಸ್ ಎಲ್ ಸಿ ಶಿವಪ್ಪ ನನ್ನು ಇನ್ನೊಂದು ಮಜಲಿಗೆ ತಂದು ನಿಲ್ಲಿಸಿತು. ತಪ್ಪು ದಾರಿ ತುಳಿಯದ ಶಿವಪ್ಪ ದೇಹವನ್ನು ಉಕ್ಕಿನಂತೆ ಕಾಪಡಿದ್ದ ಇದು ಆತನ ಕನಸಿಗೆ ರೆಕ್ಕೆ ಬರುವಂತೆ ಮಾಡಿತು. ಮೊದಲೆ ಕಟ್ಟು ಮಸ್ತಾದ ದೇಹ ಲಂಬಾಣಿ ಭಾಷೆ ಹಾಗೂ ಹಿಂದಿ ಭಾಷೆಗಿರುವ ಸಾಮ್ಯತೆ ಬಿ .ಎಸ್. ಎಪ್ ಹುದ್ದೆಯನ್ನು ಪಡೆಯಲು ಕಷ್ಟವಾಗಲಿಲ್ಲ.ಒಂದು ಕಾಲದಲ್ಲಿ ರಾತ್ರಿ ಸಮಯದಲ್ಲಿ ಸರಾಯಿ ಹೊತ್ತು ಹತ್ತಾರು ಕಿಲೋಮೀಟರ್ ನಡೆದು ಪೋಲೀಸರ ಕಣ್ಣು ತಪ್ಪಿಸಿ ತಿರುಗಿದವನಿಂದು ಗನ್ನು ಹೊತ್ತು ನಾಗರಿಕರನ್ನು ರಕ್ಷಣೆ ಮಾಡುವಂತವನಾಗಿದ್ದು ಸಂಗೀತ ಗುರುವಿನ ಸನ್ಮಾರ್ಗದ ಫಲ.

ಪಾರ್ವತಿ ಹಳ್ಳಿ ಯ ಬ್ರಾಹ್ಮಣರ ಹುಡುಗಿ ಆಧುನಿಕತೆ ಮೈಗೂಡಿಸಿಕೊಂಡು ಬೆಳೆದವಳು ಕಲಿಕೆಯಲ್ಲಿ ಯಾವಾಗಲು ಮುಂದು ಕಲಿಯುವಾಗಲೆ ಆದರ್ಶವನ್ನು ಮೈಗೂಡಿಸಿಕೊಂಡು ಬೆಳೆದವಳು "ವರದಕ್ಷಿಣೆ ಭೂತ" ಕುರಿತು ಭಾಷಣ ಮಾಡಿ ಬೆಸ್ ಎಣಿಸಿಕೊಂಡಿದ್ದಳು.ಭಾಷಣದ ಅವಧಿಯಲ್ಲಿ ವರದಕ್ಷಿಣೆ ತೆಗೆದುಕೊಳ್ಳುವ ರಾಕ್ಷಸ ರನ್ನು ನಾನು ಎಂದಗೂ ಮದುವೆ ಯಾಗುವದಿಲ್ಲ ಎಂದು ಶಪತ ಮಾಡಿ  ಚಪ್ಪಾಳೆ ಗಿಟ್ಟಿಸಿಕೊಂಡಿದ್ದಳು.ಅದನ್ನು ಮಾಡಿ ತೋರಿಸುವ ಚಲಗಾರಿಕೆ ಅವಳದು ಕಾಲ ಉರಳಿದಂತೆ ಶಿಕ್ಷಕರ ಶಿಕ್ಷಣ ಪಡೆದು ಉದ್ಯೋಗ ಕ್ಕಾಗಿ ಜಾತಕ ಪಕ್ಷಿ ಯಂತೆ ಕಾಯುತ್ತಿದ್ದಳು ವರದಕ್ಷಿಣೆ ನೀಡಿ ಮದುವೆಗೆ ಹಾತೊರೆಯುವ ಕನ್ಯೆಯರಿರುವ ಕಾಲದಲ್ಲಿ ವರದಕ್ಷಿಣೆ ನೀಡದೆ ಮದುವೆ ಯಾಗುವುದು ಸುಲಭದ  ಕೆಲಸವಲ್ಲ ಆದರೆ ಪಾರ್ವತಿ ಸೌಂದರ್ಯ ಕಣಿ ಹಠಕ್ಕೇನು ಕೊರತೆ ಇರಲಿಲ್ಲ ಅದು ಶಿಕ್ಷಣ ಬಲದ ಪರಿಣಾಮ. ಇಂದಲ್ಲ ನಾಳೆ ನಾನು ಶಿಕ್ಷಕಿಯಾಗಿ ಸಮಾಜಕ್ಕೆ ಮಾದರಿಯಾಗಬೇಕು ಎನ್ನುವುದು ಅವಳ ತುಡಿತ ಶಹರಕ್ಕೆ ಹೋಗುವಾಗ ಬರುವಾಗ ಅಕಸ್ಮಾತ್ ಶಿವಪ್ಪ ಪಾರ್ವತಿ ಸಂಪರ್ಕಕ್ಕೆ ಬರುವಂತೆ ಮಾಡಿದ್ದೆ ಬಸ್ಸಿನ ಸಂಚಾರ  ಒಂದೆ ಊರಿನವರಾದ ಕಾರಣ ಶಿವಪ್ಪನ ಸಾಧನೆಯ ಬಗ್ಗೆ ಕೇಳಿದ ಪಾರ್ವತಿಯ ಕಣ್ಣಿನಲ್ಲಿ ಆಸೆಗಳು ಗರಿಗೆದರಿದವು ಪಾರ್ವತಿಯ ಆದರ್ಶ ಶಿವಪ್ಪನ ಆದರ್ಶಕ್ಕೆ ಸರಿ ಹೊಂದಿತ್ತು ಒಂದು ದಿನ ಬಸ್ಸಿನಲ್ಲಿ ಸಂತೆಯ ಗದ್ದಲ ನೂಕುನುಗ್ಗಲು ಪಾರ್ವತಿ ಮರುಭೂಮಿಯಲ್ಲಿ ಓಯಾಸಿಸ್ಸು ಹುಡುಕುವಂತೆ  ಶೀಟು ಹುಡುಕುತಿದ್ದಾಗ ಶಿವಪ್ಪ ಔದಾರ್ಯ ತೋರಿ ಶಿಟು ಬಿಟ್ಟು ಕೊಟ್ಟ ಕಣ್ಣಗಳು ಮಾತಾಡಿದವು.ಹಳ್ಳಿಯ ಜನರಿಂದ ಕೇಳಿ ತಿಳಿದಿದ್ದ ಪಾರ್ವತಿಗೆ  ಕಾಯ್ದ ಭೂಮಿಗೆ ಮಳೆ ಆಗಮಿಸಿದಂತಾಯಿತು  ಪರಸ್ಪರ ಮಾತಿನ ಓಗ ಪ್ರಿತಿಯ ಪಯಣಕ್ಕೆ ದಾರಿ ಮಾಡಿಕೊಟ್ಟಿತು ಇಲ್ಲಿಂದ ಸುರುವಾದ ಸೇತುವೆ ಕಟ್ಟುವ ಕಾರ್ಯ ಗಡಿ ದಾಟಲು ದಾರಿ ಮಾಡಿಕೊಟ್ಟಿತು. ಪಾರ್ವತಿಗೆ   ಒಂದು ಕಲ್ಲಿಗೆ ಎರಡು ಹಕ್ಕಿ ಹೊಡೆಯುವ ತವಕ, ತಾನು ಮೇಲಿನ ಜಾತಿ ಎನ್ನುವ ಸಮಾಜಕ್ಕೆ ಮನುಷ್ಯ ಜಾತಿ ತಾನೊಂದೆ ಎಂದು ತಿಳಿಸಿ,ಚರ್ಚಾಕೂಟದಲ್ಲಿ ತಾನು ಮಾಡಿದ ಶಪತ ಪೂರೈಸುವ ಕಾಲ ಕೂಡಿ ಬಂದಿತು. ಶಿವಪ್ಪ ರಜೆಗೆ ಬಂದಾಗ ಗೌಪ್ಯವಾಗಿ ನಡೆದ ಸಂಧಾನ ಧರ್ಮಸ್ಥಳದವರೆಗೆ ನಡೆದು ಸಮಾಜದ ಸಂಕೋಲೆ ತುಂಡರಿಸಿದರು .ಶಿವಪ್ಪ ಮತ್ತು ಪಾರ್ವತಿಯರು  ಪಕ್ಕದ ಶಹರದಲ್ಲಿಯೆ ತಮ್ಮ ಬಾಳ ನೌಕೆ ಮುನ್ನೆಡೆಸಲು ಪ್ರಾರಂಭಿಸಿದರು  ಕಾಲನ ಮಹಿಮೆ ಎನೊ ಪಾರ್ವತಿಗೆ ಸರಕಾರವು ಕೂಡಾ ಪ್ರಾಥಮಿಕ ಶಾಲೆ ಶಿಕ್ಷಕಿ ಎಂದು ನೇಮಕ ಮಾಡಿತು.ಒಂದು ಕಡೆ ಶಿಕ್ಷಣ ಸೆವೆ, ಇನ್ನೊಂದು ಕಡೆ ದೇಶ ಸೇವೆ ಆರತಿಗೊಂದು ಕಿರತಿಗೊಂದು ಎರಡು ಮುದ್ದಾದ ಮಕ್ಕಳು, ಅದು ಮನೆಯಲ್ಲ ಸ್ವರ್ಗದ ಸದನ.

Saturday, November 14, 2020

* ದೀಪಾವಳಿಯ ಪ್ರಭಾವಳಿ *

ಹತ್ತಿಯ ದಾರದ ಬತ್ತಿಯ ತೀಡಿ
ಹೊತ್ತಿ ಉರಿಯಿತು ದೀಪ ನಾಡು
ತಮದ ನೆತ್ತಿಯ ಮೇಲಹತ್ತಿ ಸೀಳಿ 
ಜಗದಲರಳಿತು ದೀಪ ಪ್ರಭಾವಳಿ//

ಪಡುವಣ ಮೂಲಿಯ ಮುಂಗಾರು  
ವರುಣನ ಬೆಡಗು ಮುಗಿಯುವ ಕಾಲ 
ಮೂಡಣ ಮೂಲೆಯ ಆವರ್ತಕಾಲ 
ಮಂಜಿಗೆ ಮಯೂರ ನರ್ತನದಾ ಅಲೆ
ಮನ ಮೈಲಿಗೆ ತೊಳೆದ ಹಬ್ಬದಾ ಕಲೆ//

ಸಗ್ಗದ ಸಿರಿಯಲಿ ಹಿಗ್ಗಿದ ರೈತನ ವನ
ಹಸು ಕರುಗಳು ಬೆಸೆಯಿತು ಈ ದಿನ
ಕಬ್ಬಿಗರುಬ್ಬುವ ಹಿಗ್ಗಿನ ಸುಗ್ಗಿಯ ದಿನ
ಬಗ್ಗರು ನಾಡ ಸ್ವಾಭಿಮಾನಿಗಳನುದಿನ
ಫಸಲು ನುಸುಳಲು ಮನೆ ತನುಮನ//

ಮನೆ ಮನೆ, ಮನ ಮನಗಳಲಿಳಿದು
ಆಗಸಕೇರಿದ ದೀಪದ ಬೆಳಕಿನ ಕಿರಣ 
ಮಾವು ಪತ್ರಿಯ ಹೊಳಪಿನ ತೋರಣ
ಮನೆಯದು ಮಂತ್ರಾಲಯ ಹೂಬಣ
ಪಟಾಕಿ ಸುಡುವುದು ಜಗದ ದುರ್ಗಣ//

           ಬಸನಗೌಡ ಗೌಡರ

Friday, November 13, 2020

" ರವಿ ಬೆಳಗೆರೆ ಗೊಂದು ನುಡಿನಮನ"

" ಭಾವ ಪೂರ್ಣ ಶ್ರದ್ಧಾಂಜಲಿ "

ರವಿ ಜಾರಿದ ಬೆಳೆಯುವ 
ರವಿ ಜಾರಿದ ...
ಗೆರೆಗಳನೆ ಗರಗರನೆ ತಿರುಗಿಸಿ 
ಬಾನಂಚಿಗೊರಗಿದ... 
ಬಳ್ಳಾರಿಯಿಂದ ಬೆಂಗಳೂರಿಗೆ ಬೆಳೆದು 
ಬಹುತ್ವವನ್ನು ಬರೆದು ಬದಲಾದ ಬಯಲಾದ...
ಬೆಳ್ಳಿಯ ಗೆರೆ ಎಳೆದ 
ಎದೆಗಾರಕೆ ಹದವಾಗಿ ಹೈ ವೋಲ್ಟೇಜ್ 
ಬರಹ..... "ಹಾಯ್ ಬೆಂಗಳೂರುು "... ಬರೆದ
ಮಳಿಗೆ ಮಳಿಗೆಗಳ ಕೊರಳಿಗೆ ಹಾರ..! 
ಕೊಂಡು ಓದುವವರು ಒಂದು ಬಣ 
ಓದಿ ಬಿಟ್ಟಾಗ ಗರಬಡಿದು ಓದಿದವರದೊಂದು ಬಣ 
ಬಸ್ಸು,ರೈಲು ನಿಲ್ದಾಣ
ಪಯಣಿಗರ ಪ್ರಿಯರದ್ದೊಂದು ಬಣ 
ಮಾತು ಬೆಳೆಸಲು ರುಚಿಕರ ಚರ್ಚೆಗೆ ಚಪಲ ಚನ್ನಿಗರದೊಂದು ಬಣ
ಹರಿದು ತುಂಡಾದರೂ ಬಿಡದೆ 
ಬಜಿ, ಕಾರದ ಕಾಗದ ಬಿಡದೆ ಓದಿಸಿದ 
ಅಕ್ಷರ ಗಾರುಡಿಗ.... ಓದಿದರೆ ಬಿಡದಂತೆ 
ಓದಿಸಿದ ಅಕ್ಷರಗಳ ಜೋಡಣೆ ,
ಜೋಲಿ ಹೊಡೆದಂತೆ 
ಮಾತಿನ ಶೈಲಿ, ಬಿಡದೆ ಹಿಡಿದಿಡುವ ಜಾಣ 
ಮಾತಾಡುವ ಮಲ್ಲ ಮಾತಾಡುತ್ತ  
ಅನಂತದ ಕಡೆಗೆ ಈ ನಿನ್ನ  ಪಯಣ 
ಕಾರ್ಗಿಲ್ ಕಾಶ್ಮೀರ ಕಣಿವೆ ಸುತ್ತಿ
ಹುತ್ತದಲ್ಲಿರುವ ಸುದ್ದಿ ಕಿತ್ತು ತರುವ ಎದೆಗಾರ
ಮತ್ತೆ  ಯಾವಾಗ ನಿನ್ನ ಕಿರಣ ....  
ಬತ್ತದೆ ಬರಬೇಕಿತ್ತು  ನಿನ್ನ ಬಾಣ 
ಬತ್ತಳಿಕೆ ಬರಿದಾಯಿತೆ
ನಿತ್ಯ ಕಾಯುತಿಯುತಿರುವೆವು
ನಿನ್ನ ಶಿಸ್ತಿನ ಬರಹ ..!
ಉದಯಿಸು ರವಿ.... 


ಬಸನಗೌಡ ಗೌಡರ

Wednesday, November 11, 2020

* ಅರಿತು ನಡೆ *

ಅಖಾಡಕ್ಕೆ ಇಳಿಯುವಾಗ

ಎದುರಾಳಿಯ ಆಳದ ಅರಿವಿರಬೇಕು 

ಅಂದಾಗ ಚಡ್ಡಿ ಹಾಕಬೇಕು/

ಇಲ್ಲಾಂದರ ಚಿತ್ತ ಮೇಲಾಗಿ

ಮುಖ ಮಣ್ಣಿನ ಕಡೆ ಮಲಗಬೇಕು //


ಉಪದೇಶ ಮಾಡುವಾಗ 

ನೈತಿಕವಾಗಿ ಜೀವನ

ನಡೆಸಿರಬೇಕು/

ಇಲ್ಲಾಂದರ ಟೊಮೋಟೂ ತತ್ತಿ 

ಒಗಿಸಿಕೊಳ್ಳಾಕ ತಯಾರಿರಬೇಕು// 


ಕುಣಿಯುವಾಗ ನೆಲದಾಗ

ಸಮತಲ ನೋಡಿರಬೇಕು

ಜಗತ್ತು ವಿಶಾಲವಾಗಿರುವದಾದರ /

ಅದರಾಗ ತೆಗ್ಗು ದಿನ್ನೆ ನೋಡಾಕ 

ರವಿಕಿರಣ ಬರಬೇಕು //


ಸಂಸಾರವಿರುವದು ಸಹಕಾರದಾಗ  

ತಯಾರಿರಬೇಕು ತಂದ ಹಾಕಾಕ 

ಹೆಂಡಿರು ಮಕ್ಕಳು ಗುಲಾಮರಲ್ಲ /

ಬಿಡುವಿದ್ದಾಗ ಮಜಾ ಮಾಡಾಕ

ಇಲ್ಲಾಂದರ ತಯಾರಿರು ಸನ್ಯಾಸಿಯಾಗಾಕ//


ತಂದೆ ತಾಯಿ ಭೂಮಿಮ್ಯಾಗ

ದೇವರಂತ  ಋಣ ತಿಳಿಬೇಕು

ತೀರಸಾಕ ಹಾತೊರೆಯುಬೇಕು/

ಇಲ್ಲಾಂದರ ದೇವರ ಫೋಟೋ 

ಪೂಜಿಸದೆ ಬೀಸಾಕಿ ಬರಬೇಕು//


ಹಿಂದೆ ನೋಡಬೇಕು ಓಡುವಾಗ

ಕ್ರಮಿಸುವ ದಾರಿ ತಿಳಿಯಾಕ

ಪ್ರಯತ್ನ ದಿಂದ ಪರಿಪೂರ್ಣತೆ /

ನಿಂದಕರಿದ್ದರ ಹೆದರುದ್ಯಾಕ

ಹಂದಿಗಳ ಸ್ವಚ್ಛತೆಯಂಗ ತಿಳಿಬೇಕು//


       ಬಸನಗೌಡ ಗೌಡರ

Saturday, November 7, 2020

* ಅನ್ನ ದೇವರು *

 ಹಸಿದ ಒಡಲಿಗೆ ಬಿಸಿದು ತಂಗಳು 

ಭೇಧ ಹೊಸೆವರೇನು ಭಾಷೆಗಳಲಿ,

ಹೊಟ್ಟೆಯೇ ಹೊರೆ, ತುಂಬಿದಾಗ

ಬಟ್ಟೆಯ ಬಡಿವಾರ ಬರುವುದಾಗ //


ತುತ್ತು ಅನ್ನದ  ತತ್ವಾರ ಕಡು ಬಡತನಕೆ

ಮತ್ತೇರುವುದು ದುಡಿಯದ ಸಿರಿತನಕೆ

ದುಡಿದು ಪಡೆ ದರಿದ್ರನಲ್ಲ ಕೊನೆತನಕ

ಬಿಡಬೇಡ ಅನ್ನ, ಹಸಿದವರಿರುವತನಕ //


ಮದುವೆಯು ಮನ ಕಟ್ಟುವ ಕಾರ್ಯ

ಉದಯವಾಗಬೇಕಲ್ಲಿ ದಿಟ್ಟ ಸೂರ್ಯ

ಬೆಳಕು ಹೊರಚಾಚಲು ಬೇಕು ದೈರ್ಯ

ಸಾಗುತಿದೆ ಥಳಕು ಬಳಕಿನ ಕೈಂಕರ್ಯ//


ಮೌನದಿಂದುತ್ತರಿಸಿದ ಸಂಬಂಧ ತತ್ತರ

ಬಿರುಗಾಳಿಗೆದುರಾಗಿ ಬೀಸಲಿ ತಂಗಾಳಿ

ಬಿಡದೆ ಬೀಸುವ ಬಿಗುಮಾನದ ಗಾಳಿ

ಒಡೆದು ಹಾಕುವುದು ಸಂಸಾರದ ಹಳಿ//


ಮಸಣಕೆ ಹೋಗುವ ಮುನ್ನ ಕಸಕೀಳು

ಹಸನಾದ ಹೊಲದಲಿದೆ ಪ್ರಸಾದ ಬೆಳೆ

ಅನ್ನದ ಬೆಲೆಯರಿತವನುಂಡರೆ ತೃಪ್ತ 

ಅರಿಯದುಳಿಸಿದರೆ ಸಿಗುವುದೆ ತೃಪ್ತಿ? //


"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...