ಬೂದಿ ಬಡಕರ ದೇಶವೆಂದವರ
ಪೂರ್ವಾಗ್ರಹ ಬುಡಮೇಲು ಮಾಡಿದ
ಗಂಡೆದೆಯ ದೀರ ಸನ್ಯಾಸಿ ನಿನ್ನ
ಪೂರ್ವಾಗ್ರಹ ಬುಡಮೇಲು ಮಾಡಿದ
ಗಂಡೆದೆಯ ದೀರ ಸನ್ಯಾಸಿ ನಿನ್ನ
ಧೈರ್ಯಕೆ ನನ್ನ ನಮನ ಗುರುವೆ //
ಶಿಕ್ಷಣವೆಂದರೆ ಅಕ್ಷರ ಜ್ಞಾನವೆಂದವರ
ಲಕ್ಷಣಗಳ ಬಯಲು ಮಾಡಿದ
ಶೀಲವೆ ಶಿಕ್ಷಣವೆಂದ ಸನ್ಯಾಸಿ ನಿನ್ನ
ಏಕಾಗ್ರತೆಗೆ ನನ್ನ ನಮನ ಗುರವೆ //
ಲಕ್ಷಣಗಳ ಬಯಲು ಮಾಡಿದ
ಶೀಲವೆ ಶಿಕ್ಷಣವೆಂದ ಸನ್ಯಾಸಿ ನಿನ್ನ
ಏಕಾಗ್ರತೆಗೆ ನನ್ನ ನಮನ ಗುರವೆ //
ನಾಗರಿಕತೆ ಬಟ್ಟೆಯಲ್ಲಳಿದವರ
ಹುಟ್ಟನೆ ಹಿಡಿದು ಜಾಲಾಡಿದ
ಗಟ್ಟಿ ಮಾತಿನ ದಿಟ್ಟ ಸನ್ಯಾಸಿ ನಿನ್ನ
ಹುಟ್ಟನೆ ಹಿಡಿದು ಜಾಲಾಡಿದ
ಗಟ್ಟಿ ಮಾತಿನ ದಿಟ್ಟ ಸನ್ಯಾಸಿ ನಿನ್ನ
ಪಟ್ಟುಗಳಿಗೆ ನನ್ನ ನಮನ ಗುರುವೆ //
ಪಶ್ಚಿಮದ ಜ್ಞಾನ ಶ್ರೇಷ್ಠವೆಂದವರ
ಭೌತಿಕ ಜ್ಞಾನದ ಮೂಲ ಅರುಹಿದ
ಋಷಿ ಮುನಿ ಜ್ಞಾನಿಯೆ ನಿನ್ನ
ಭಾರತೀಯತೆಗೆ ನಮನ ಗುರುವೆ //
ಋಷಿ ಮುನಿ ಜ್ಞಾನಿಯೆ ನಿನ್ನ
ಭಾರತೀಯತೆಗೆ ನಮನ ಗುರುವೆ //
ಸ್ವಾಮಿಗಳೆಂದು ಸೇವೆ ಬಯಸಿದವರ
ಸೇವೆಯ ಹೆಸರಿನ ಸ್ವಾಹ ತಿಳಿಸಿದ
ಶ್ರೀ ರಾಮಕೃಷ್ಣಾಶ್ರಮದ ನಿನ್ನ
ನಿಜ ಸೇವಗೆ ನನ್ನ ನಮನ ಗುರವೆ //
ಶ್ರೀ ರಾಮಕೃಷ್ಣಾಶ್ರಮದ ನಿನ್ನ
ನಿಜ ಸೇವಗೆ ನನ್ನ ನಮನ ಗುರವೆ //
🖋️ಬಸನಗೌಡ ಗೌಡರ
👌👌🙏sir
ReplyDelete