ಎಡ ಬಲದ ನಡುವೆ ಬೇಡ ಗೋಡೆ
ಎರಡರಲ್ಲೂ ಉಂಟು ಕೊಳಚೆ ರಾಡಿ
ಹರಿದು ಹೋಗಲಿ ನಿತ್ಯ ಅದು ಕೋಡಿ
ಸೇತುವೆ ಕಟ್ಟೋಣವಲ್ಲಿ ಜೊತೆಗೂಡಿ//
ನಿತ್ಯ ಹಾಕಿದರೆ ಕೊಳಚೆ ಆಚೆ ಈಚೆ
ಸಿಡಿಯದಿರುವುದೆ ಮುಖಕ್ಕೆ ಪಾಚಿ
ಸತ್ಯ ತಿರುಚಲಾಗದು, ಗೋಡೆ ಹಾಕಿ
ಸಿಡಿಸಬೇಕು ಗೆಳೆಯ ಬಾಂಬ್ ಹಾಕಿ//
ನಡೆವಾಗ ಎಡುವುದು ಸಹಜ ಕೋಡಿ
ಸ್ವಾರ್ಥದಿಂದ ಮಾಡಿದರಿವರು ಗಡಿಬಿಡಿ
ಸವಕಳಿ ಸಿದ್ದಾಂತ ಕೇಳಿ ಆಗಿದೆ ಕಿವುಡು
ಸಾಗು ನೀ ತೊಳೆಯಲು ಹಿಡಿದು ಜಾಡು//
ಬರಹದ ಬಣವೆಯಲ್ಲಿ ಸಾವಿರ ಸಾಕ್ಷಿ
ಸಾರಿಸಿ ನೀ ಕಲಕಬೇಡ ಕರುಣೆ ಮಿಕ್ಕಿ
ಸಾಹಸವು ಉಬ್ಬಿ ನಡೆಯಲಲ್ಲ ಸೊಕ್ಕಿ
ವಿರಹವನ್ನೆ ಮೀರಿ ತೆಗೆಯಬೇಕು ಅಕ್ಷಿ//
ಮೌನದಲ್ಲಿ ಮರೆತಾಗ ಏರಿದೆ ಗೋಡೆ
ಮನ ಬಿಚ್ಚಿ ಮಾತನಾಡಲೇನು ದಾಡಿ
ನಡುವೆ ಸಿಕ್ಕವರ ಬಾಳು ನಾಯಿಪಾಡು
ಮಾತಾಗಲಿ ಮಾನವೀಯತೆ ಹಾಡು//
ಬಸನಗೌಡ ಗೌಡರ
No comments:
Post a Comment