Thursday, April 1, 2021

* ಮೌನದಲ್ಲಿ ಮರೆತಾಗ *

ಎಡ ಬಲದ ನಡುವೆ ಬೇಡ ಗೋಡೆ 
ಎರಡರಲ್ಲೂ ಉಂಟು ಕೊಳಚೆ ರಾಡಿ
ಹರಿದು ಹೋಗಲಿ ನಿತ್ಯ ಅದು ಕೋಡಿ
ಸೇತುವೆ ಕಟ್ಟೋಣವಲ್ಲಿ ಜೊತೆಗೂಡಿ//

ನಿತ್ಯ ಹಾಕಿದರೆ ಕೊಳಚೆ ಆಚೆ ಈಚೆ 
ಸಿಡಿಯದಿರುವುದೆ ಮುಖಕ್ಕೆ ಪಾಚಿ 
ಸತ್ಯ ತಿರುಚಲಾಗದು, ಗೋಡೆ ಹಾಕಿ
ಸಿಡಿಸಬೇಕು ಗೆಳೆಯ ಬಾಂಬ್ ಹಾಕಿ//

ನಡೆವಾಗ ಎಡುವುದು ಸಹಜ ಕೋಡಿ  
ಸ್ವಾರ್ಥದಿಂದ ಮಾಡಿದರಿವರು ಗಡಿಬಿಡಿ
ಸವಕಳಿ ಸಿದ್ದಾಂತ ಕೇಳಿ ಆಗಿದೆ ಕಿವುಡು
ಸಾಗು ನೀ ತೊಳೆಯಲು ಹಿಡಿದು ಜಾಡು//

ಬರಹದ ಬಣವೆಯಲ್ಲಿ ಸಾವಿರ ಸಾಕ್ಷಿ
ಸಾರಿಸಿ ನೀ ಕಲಕಬೇಡ ಕರುಣೆ ಮಿಕ್ಕಿ 
ಸಾಹಸವು ಉಬ್ಬಿ ನಡೆಯಲಲ್ಲ ಸೊಕ್ಕಿ
ವಿರಹವನ್ನೆ ಮೀರಿ ತೆಗೆಯಬೇಕು ಅಕ್ಷಿ//

ಮೌನದಲ್ಲಿ ಮರೆತಾಗ ಏರಿದೆ ಗೋಡೆ
ಮನ ಬಿಚ್ಚಿ ಮಾತನಾಡಲೇನು ದಾಡಿ
ನಡುವೆ ಸಿಕ್ಕವರ ಬಾಳು ನಾಯಿಪಾಡು  
ಮಾತಾಗಲಿ ಮಾನವೀಯತೆ ಹಾಡು//
         
          ಬಸನಗೌಡ ಗೌಡರ

No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...