Wednesday, March 31, 2021

* ಸ್ವರ್ಗದ ಪರಿಧಿಯೊಳಗೆ *

ನೋವು ನಲಿವುಗಳ ಅಲೆಯಲ್ಲಿ ಸೇರಿ
ಗೆಲವು ತರುವ ಬಲದ ಕೀಲಿಯನೂರಿ/
ಧಣಿವರಿತು ದಡಸೇರುವ ದೋಣಿ ಏರಿ
ಸಾಗೋಣ ಸಂಕಟದ ಬದುಕು ಮೀರಿ//

ವಲವಿನ ಬಲೆಯೋಳಗೆ  ಕರ ಸೇರಿಸಿ
ಕಲಹ ಕೇಂದ್ರ ಕತ್ತರಿಸಿ ಸಾಣಿಸಿ ಸಾರಿಸಿ/
ಬರಹ ಬಣವೆಯಲಿ ಬೆಯಿಸಿ ಬೆಂದಿಸಿ 
ಬಾಳಸ್ವೀಕರಿಸೋಣ ಹುಳುಕು ಕತ್ತರಿಸಿ//  
 
ವರ್ಣವನೆ ಕರ್ಣದಲ್ಲಿಟ್ಟು ಕರ್ಮದಲ್ಲಿ 
ತಾರತಮ್ಯ ವದು ಅಕ್ಷಮ್ಯ ಜಗದಲ್ಲಿ/
ಧರ್ಮದ ಮೂಲವರಿತರೆ ತಳದಲ್ಲಿ
ಧರಣಿಯೆ ನಾಕವದು ವಿಶ್ವದಲ್ಲಿ// 

ಅಜ್ಞಾನ ತೊಲಗಿಸಲು ಬ್ರಾಹ್ಮಣ್ಯ
ಅಸುರಕ್ಷೆತೆ ಅಳಿಸಿ ಸುರಕ್ಷತಗೆ ಕ್ಷತ್ರಿಯ/
ಅಭಾವ ಕಳೆಯಲು ಅಭಯ ತಾ ವೈಶ್ಯ
ಆಲಸ್ಯ  ಕೊಲ್ಲುವ ಕಲಿಯೆ  ಶೂದ್ರ//

ಆರು ನಾನಾದರೇನು ಮೀರದು ಗಳಿಗೆ
ಗೌರವದ ಪಾಲಲ್ಲಿ ತಪ್ಪಿದರೆ ಕೆಳಗೆ/ 
ಸಾಲು ಮಾಡಿಹರು ಸರಿದಾರಿಯೊಳಗೆ
ಸೇರಿ ನಡೆದಾಗ ಸ್ವರ್ಗ ಪರಿಧಿಯೊಳಗೆ//

                      ಬಸನಗೌಡ ಗೌಡರ 

 

No comments:

Post a Comment

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...