ನೋವು ನಲಿವುಗಳ ಅಲೆಯಲ್ಲಿ ಸೇರಿ
ಗೆಲವು ತರುವ ಬಲದ ಕೀಲಿಯನೂರಿ/
ಧಣಿವರಿತು ದಡಸೇರುವ ದೋಣಿ ಏರಿ
ಸಾಗೋಣ ಸಂಕಟದ ಬದುಕು ಮೀರಿ//
ಗೆಲವು ತರುವ ಬಲದ ಕೀಲಿಯನೂರಿ/
ಧಣಿವರಿತು ದಡಸೇರುವ ದೋಣಿ ಏರಿ
ಸಾಗೋಣ ಸಂಕಟದ ಬದುಕು ಮೀರಿ//
ವಲವಿನ ಬಲೆಯೋಳಗೆ ಕರ ಸೇರಿಸಿ
ಕಲಹ ಕೇಂದ್ರ ಕತ್ತರಿಸಿ ಸಾಣಿಸಿ ಸಾರಿಸಿ/
ಬರಹ ಬಣವೆಯಲಿ ಬೆಯಿಸಿ ಬೆಂದಿಸಿ
ಬಾಳಸ್ವೀಕರಿಸೋಣ ಹುಳುಕು ಕತ್ತರಿಸಿ//
ವರ್ಣವನೆ ಕರ್ಣದಲ್ಲಿಟ್ಟು ಕರ್ಮದಲ್ಲಿ
ತಾರತಮ್ಯ ವದು ಅಕ್ಷಮ್ಯ ಜಗದಲ್ಲಿ/
ಧರ್ಮದ ಮೂಲವರಿತರೆ ತಳದಲ್ಲಿ
ಧರಣಿಯೆ ನಾಕವದು ವಿಶ್ವದಲ್ಲಿ//
ಅಜ್ಞಾನ ತೊಲಗಿಸಲು ಬ್ರಾಹ್ಮಣ್ಯ
ಅಸುರಕ್ಷೆತೆ ಅಳಿಸಿ ಸುರಕ್ಷತಗೆ ಕ್ಷತ್ರಿಯ/
ಅಭಾವ ಕಳೆಯಲು ಅಭಯ ತಾ ವೈಶ್ಯ
ಆಲಸ್ಯ ಕೊಲ್ಲುವ ಕಲಿಯೆ ಶೂದ್ರ//
ಆಲಸ್ಯ ಕೊಲ್ಲುವ ಕಲಿಯೆ ಶೂದ್ರ//
ಆರು ನಾನಾದರೇನು ಮೀರದು ಗಳಿಗೆ
ಗೌರವದ ಪಾಲಲ್ಲಿ ತಪ್ಪಿದರೆ ಕೆಳಗೆ/
ಸಾಲು ಮಾಡಿಹರು ಸರಿದಾರಿಯೊಳಗೆ
ಸೇರಿ ನಡೆದಾಗ ಸ್ವರ್ಗ ಪರಿಧಿಯೊಳಗೆ//
ಬಸನಗೌಡ ಗೌಡರ
No comments:
Post a Comment