Monday, April 12, 2021

* ಮತ್ತೆ ಓಡೋಣ ಕೆರೆಯ ಕಡೆ *

ಯುಗದ ಆದಿ ಕಟ್ಟಿತು ಬಾಲ್ಯದ ಸೌದ
ಯುಗಾದಿ ತಂದಿತ್ತು ಹರುಷದ ಜಾಡು
ಮದಗದ ಕೆರೆ ಈಜುವುದೆ ಹೆಮ್ಮೆಯ ಹಾದಿ
ಅಪ್ಪ ಕಳುಹಿಸಿದ್ದ ಹೋರಿಗಳನು ನೀಡಿ, 
ದಂಡೆಯಲಿ ಮೈ ತೊಳದು ಬರುವಂತೆ ಅಪ್ಪನೆ .
ಅಪ್ಪನ ಕಾಳಜಿ ಮರೆತು ಸಾಗುವುದೆ ಜಾಯಮಾನ, ಕಿಡಿಗೇಡಿಗಳು ಹುಡುಗಾಟಿಕೆಯ ಹಾದಿ 
ನೀರಿಗಿಳಿದರೆ ಬೇಗ ಬಂದರಾಗದು ! ಬಂದವನೆ ಹೇಡಿ .
ಸಾಗದಿದ್ದರೆ ಗೆಳೆಯರ ಮಾಡುವರು ಗೇಲಿ. 
ಹೋದರೆ ಸಾವಿನ ದಾರಿ, ಸಾವೆ ಓಡಿತು              
ನನ್ನ ಹುಡುಗರು ಕೆಕೆ ನೋಡಿ ! 
ಡಂಡೆಯಲ್ಲಿ ಪೆಂಡಾಲ ಮಾವು ಬೇವು.
ಕಾಗೆ ಕೊಗಿಲೆಗಳ ಕೊಗಿನ ಪೈಪೋಟಿ.
ನಮ್ಮ ಕೂಗಿಗೆ ಹೆದರಿ ಕಾಲ್ಕಿತ್ತವು ಓಡೋಡಿ                        ಕೂಗಿದೆವು ಸಾಗಿದೆವು ಗೌಡರ ಗದ್ದೆಯಲ್ಲಿ
ಸವಕಳಿಯ ಮಾತಿಗಿಲ್ಲ ಕೊರತೆ, 
ಸೇರಿದೆವು ಸಾಲು ಮರದ ಸಾಲಿನಲ್ಲಿ  
ಬೇವು ಮಾವು ಹೊಂಗೆ ತೊಂಗೆ 
ಮಕರಂದಕೆ ದುಂಬಿಗಳ ದಾಳಿ ...
ನಮ್ಮ ಹಾಡಿಗೆ ಹಕ್ಕಿಗಳೆ ತಾಳ. 
ಕೇಳಲದು ತುಂಬಿ ಬಂತು ಕಿವಿಗಿಂಪು. 
ಗೆಳೆಯರ ಭಾವ ಹೃದಯಕ್ಕೆ ಸಂಪು 
ಕಾಣಲಿಲ್ಲ ನಾ ಅಲ್ಲಿ ಒಣ ಕೆಂಪು. 
ಗಿಡಮರವೆಲ್ಲ ಕಳಚಿತ್ತು ಹಳೆಯಂಗಿ 
ಹಾಕಿತ್ತು ಹೊಸ ಹಸರಿನಂಗಿ, 
ತಿರುಗುವ ಪೋಲಿಗಳ ಹರಿದ ಅಂಗಿಗಳೆ ಶೃಂಗಾರ.
ಬಯಲೆ ಬಂಗಾರ ಬಿಡಿಸಲಾಗದ ಬಂದ 
ಬರುವಿಕೆಗೆ ಕಾಯುತಿರುವ ಹೋಳಿಗೆಯೇ ಶಬರಿ 
ಇದ್ದರೂ ಸವಿಯಬೇಕು ಬೆಲ್ಲ ಬೇವು 
ಸುರಿದುಕೊಳ್ಳುಬೇಕು ಎಲೆ ಬೇವು ಮೇಲೆ ಎಣ್ಣೆ ನೀರು ಅಜ್ಜಿಯ ಕಾಟಕ್ಕೆ ಜಜ್ಜಿಕೊಳ್ಳಬೇಕು ತಲೆಯನ್ನು, 
ಹೊಸ ತಲೆಮಾರು ಕಟ್ಟಲು ಇವಳು ಗೋಳು 
ತಲೆಗೊಂದು ಪಟಾರು, ಮರು ಮಾತು ನಾಡದೆ ಸುರಿದುಕೊಂಡೆ ಬೇವು ಹೂವು ಬೆರೆತ ನೀರು... 
ಬರದ ಬಾಲ್ಯ ಕನವರಿಸಿದೆ ನಾ ಶೂರ 
ಬಂದರೆ ನನಗೂ ಇರಲಿ, ಬಿಡದೆ ಹಿಡಿದಿಡು 
ನನಗೂ ನಿನಗೂ ,ಮತ್ತೆ ಓಡೋಣ ಕೆರೆಯ ಕಡೆ !

ಬಸನಗೌಡ ಗೌಡರ 
ಉಪನ್ಯಾಸಕರು ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜು ಗುಳೇದಗುಡ್ಡ ಜಿಲ್ಲಾ ಬಾಗಲಕೋಟೆ

No comments:

Post a Comment

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...