ಮೂಕನಿಗೆ ಮಾತು ಬರಿಸಿ ನಾಕದ
ಕಡೆಗೆ, ಮುನ್ನೆಡಿಸಿದ ಮೂಕನಾಯಕ
ಮನ್ವಂತರದ ಸಂತನಿಗೆ ನನ್ನ ನಮನ//
ಕಡೆಗೆ, ಮುನ್ನೆಡಿಸಿದ ಮೂಕನಾಯಕ
ಮನ್ವಂತರದ ಸಂತನಿಗೆ ನನ್ನ ನಮನ//
ಬಹಿಷ್ಕೃತರಿಗೆ ಭರವಸೆಯ ಬೆಳಕು
ನೀಡಿ, ಭವಿಷತ್ತಿಗೆ ನಡೆಸಿದ ರವಿಯ
ಆಶಾಕಿರಣದ ನಡೆಗೆ ನನ್ನ ನಮನ//
ತಾರತಮ್ಯದ ತೆವಲನು ತೊಳೆದು
ಸಮಾನತೆಯ ಬೀಜ ಬಿತ್ತಿದ ಗುರು
ಮಾನವತೆ ಹರಿಕಾರನಿಗೆ ನನ್ನನಮನ//
ಬುದ್ಧನ ತತ್ವಗಳಿಗೆ ಮನಸೋತು
ಮಾನವ ಧರ್ಮವ ಸ್ವೀಕರಿಸಿ ಸತ್ವ
ತತ್ವಗಳ, ಬಿತ್ತಿದವನಿಗೆ ನನ್ನ ನಮನ//
ಬೆಲ್ಲ ಮೆತ್ತಿದ ವಿಷಗುಳಿಗೆ ನೀಡಿ
ಷಾಹಿ ಸಾಮ್ರಾಜ್ಯ ಕಟ್ಟಿದ ಪಾಪಿಗಳ
ತಡೆದ ,ಸಮಾಜವಾದಿಗೆ ನನ್ನ ನಮನ//
ನೂರು ದೇಶಗಳಿಗೆ ಹಾರಿ ಸಾವಿರ
ಕಲಮುಗಳನೋದಿ ಸುಂದರವಾದ
ಸಂವಿಧಾನ ಕಟ್ಟಿದ ಶಿಲ್ಪಿಗೆ ನನ್ನ ನಮನ//
ನರಕಕ್ಕೆ ನೂಕವ ನರಿಗಳರಿಯಲು
ನಿನ್ನ ನಾಮಬಲವು ಸಾಕು ಗುರುವೆ
ನಿಮಗೆ, ನಮ್ಮ ನಮನ ನನ್ನ ನಮನ//
ಬಸನಗೌಡ ಗೌಡರ
ಉಪನ್ಯಾಸಕರು
No comments:
Post a Comment