Friday, April 16, 2021

* ಸುಳ್ಳಿಗೂ ಶಕ್ತಿ ಇದೆ *

* ಸುಳ್ಳಿಗೂ ಶಕ್ತಿ ಇದೆ *

ಅದೊಂದು ಸಣ್ಣ  ಹಳ್ಳಿ .ಆ ಊರನಲ್ಲಿ ಒಂದು ಕಿರಿಯ ಪ್ರಾಥಮಿಕ ಶಾಲೆ ಅದರ ಶಿಕ್ಷಕರೆ ನಮ್ಮ ಶಿವಪ್ರಕಾಶ, ಪರೋಪಕಾರದಲ್ಲಿ ಯಾವತ್ತಿಗೂ ಮುಂದೆ  ಶನಿವಾರ ತಮ್ಮ ಊರಿಗೆ ಹೋಗಿ ಸೋಮವಾರ ಬರುತ್ತಿದ್ದ ಈ ಅವಧಿಯಲ್ಲಿ ಅವರಿಗೆ  ಉಳಿದುಕೊಳ್ಳಲು ಮನೆ ನೀಡಿದವರೆ ಶಾಂತಗೌಡ. ಹೆಸರಿಗೆ ತಕ್ಕ ಹಾಗೆ ಶಾಂತ ಮನಸ್ಸಿನ ಗೌಡ, ಹೆಚ್ಚಿಗೆ  ಮಾತನಾಡಿದವರೆ ಅಲ್ಲ ಆರ್ಥಿಕ ವಾಗಿ ಶ್ರೀಮಂತರೇನು ಅಲ್ಲ. ಇವರು ಇಬ್ಬರು ಅಣ್ಣತಮ್ಮಂದಿರು ಸಣ್ಣವನೆ ಹನುಮಂತ ಅಷ್ಟೇನೂ ಬುದ್ಧಿ ವಂತನಲ್ಲ ವ್ಯವಹಾರ ಜ್ಞಾನ ಅಷ್ಟಕ್ಕಷ್ಟೆ ಮದುವೆಯ ವಯಸ್ಸಿಗೆ ಬರುವ ಮುನ್ನವೆ ಮದುವೆ ಮಾಡಿದರು .ಮದುವೆ ಮಾಡಿದರೆ ಸುಧಾರಣೆಯಾಗುತ್ತಾನೆ  ಎನ್ನುವುದು ಹಳ್ಳಿಯ ಜನರ ನಂಬಿಗೆ ಆದರೆ ಆಗುವದೆ  ಬೇರೆ ಪಕ್ವತೆ ಬರುವ ಮುನ್ನ ಮದುವೆ ಮಾಡಿ ಕೈ ತೊಳೆದು ಕೊಳ್ಳುತ್ತಾರೆ ಆಗುವುದೆ ಬೇರೆ.ಹನಮಂತನ ಹೆಂಡತಿ  ಸುಧಾರಿಸುವ ಬದಲು   ಅವನನ್ನು ಆಡಿಸುತ್ತಿದ್ದಳು. ಎಷ್ಟರ ಮಟ್ಟಿಗೆ ಎಂದರೆ ನಿಮ್ಮದು ಅತಿ ಚಿಕ್ಕದಾದ ಊರು ಉದ್ಯೋಗವು ಅಷ್ಟಕ್ಕಷ್ಟೆ ಎಂದು ಪುಸಲಾಯಿಸಿ ತವರು ಮನೆ ದಾರಿ ಹಿಡಿಸಿದಳು. ತವರು ಮನೆಯ ಯಜಮಾನಿಕೆಯಲ್ಲಿ ಗಂಡನ ಸ್ವಾತಂತ್ರ್ಯ ಹರಣ ಮಾಡಿದಳು ಗಿರಿಜಾ.ಆತ ಸಂಪೂರ್ಣ ಕೈವಶನಾದ, ಹನಮಂತ ಹೆಂಡತಿಯ ಮೋಹ ಪಾಶದಲ್ಲಿ ತನ್ನತನವನ್ನೆ ಕಳೆದು ಕೊಂಡ ಮತ್ತು ಪಂಜರದ ಗಿಳಿಯಾದ.  ಕಾಲಿ ಬಿದ್ದ ಆತನ ಮನೆಯಲ್ಲೆ ಈ ಶಿವಪ್ರಕಾಶ ಮಾಸ್ತರರು ವಾಸಮಾಡುತ್ತಿದ್ದದ್ದು ಅದಕ್ಕೆ ಬಾಡಿಗೆ ನೀಡಲು ಬಂದರೂ ಶಾಂತಗೌಡ ತೆಗೆದು ಕೊಂಡವನೆ ಅಲ್ಲ ಏಕೆಂದರೆ "ಬಾಡಿಗೆ ಪಡೆಯುವದು ಪೇಟೆ ಸಂಸ್ಕೃತಿ ಸರ್ ಹಳ್ಳಿ ಸಂಸ್ಕೃತಿ ಅಲ್ಲ" ಎನ್ನುವುದು ಅವನ ಊವಾಚ ನಮ್ಮ ತಮ್ಮ ಹೆಂಡತಿ ದಾಸನಾಗಿ ಹೆಂಡತಿ ತವರು ಮನೆಗೆ  ಹೋಗಿದ್ದಾನೆ ದೀಪ ಹಚ್ಚಿಕೊಂಡು ಹೋದರೆ ನಮಗೂ ಲಕ್ಷಣ ಮತ್ತು ಜೊತೆಯಾಗಿಯೂ ಇರತಿರಿ ಅಂತ ಬಾಡಿಗೆ ಇಲ್ಲದೆ ತನ್ನ ಉದಾರತೆ ಮೆರೆದಿದ್ದ ,ಆದರೆ ಶಿವಪ್ರಕಾಶ ಸರ್ ಯಾವುದಾದರೂ ಮಾರ್ಗ ದಲ್ಲಿ ಅವರ ಉಪಕಾರ ತೀರೀಸಲು ಹವನಿಸುತ್ತಿದ್ದರು ಅವರಿಗೆ ಸಣ್ಣ ಪ್ರಮಾಣದಲ್ಲಿ ತೊಂದರೆ ಬಂದಾಗ ಹಣ ನೀಡುತ್ತಿದ್ದರು ಅದನ್ನು ಹಣ ಕೇಳದೆ ಜಾಣ ಕಿವುಡು ತೋರಿಸುತ್ತಿದ್ದರು ಶಿವಪ್ರಕಾಶ. ಶಾಂತಗೌಡ ಮರಳಿಸಬೇಕೆಂದು ಪ್ರಯತ್ನಿಸಿ ಸೋಲುತ್ತಿದ್ದರು ಸಂಸಾರ ತಾಪತ್ರಯ. ಪರಿಸ್ಥಿತಿ ಮನುಷ್ಯನನ್ನು ಒಮ್ಮೊಮ್ಮೆ ಲೋಭಿ, ಸ್ವಾರ್ಥಿಯನ್ನಾಗಿ ಮಾಡುತ್ತದೆ. ಕೊಡಬೇಕು ಎನ್ನವ ಮನಸ್ಸನ್ನು ತಾಪತ್ರಯ ಕಟ್ಟಿ ಹಾಕುತಿತ್ತು ಒಂದು ಕಡೆ ತಮ್ಮನ ಬಾಳು ಹಾಳಾಗುತ್ತಿದ್ದರೂ ಸರಿ ಮಾಡದ ಅಸಾಹಯಕತನ ಆತನನ್ನು  ಹೇಡಿಯನ್ನಾಗಿ ಮಾಡಿತ್ತು.ಇತ್ತ ಕಡೆ ಹೆಂಡತಿಯ ಮಾತು ಕೇಳಿ ಸಹೋದರನ್ನು ದೂರು ಮಾಡಿದ ಹನಮಂತನ ಬಾಳು ಅತ್ತ ದರಿ ಇತ್ತು  ಪುಲಿ ಎಂಬಂತಾಗಿತ್ತು . ಹನಮಂತನ ಹೆಂಡತಿ ಗಿರಿಜಾ ಅಣ್ಣ ತಮ್ಮಂದಿರನ್ನು ಅಗಲಿಸುವಲ್ಲಿ ಯಶಸ್ವಿಯಾಗಿದ್ದಳು. ಪಾಲಿಗೆ ಬಂದ ಭೂಮಿಯ ಹಣವನ್ನು ಅಣ್ಣನ ಜೊತೆ ಜಬರದಸ್ತ ತೆಗೆದುಕೊಂಡು  ಹೆಂಡತಿಯ ಉಡಲಾಗ ಹಾಕಿ ಉಂಡಾಡಿಯಾದ, ಜವಾಬ್ದಾರಿಯನ್ನು ಹಾಕಿಕೊಳ್ಳದೆ ನಡೆದರೆ ಆಗಬಾರದ್ದು ಆಗುತ್ತೆ ಎನ್ನುವುದಕ್ಕೆ ಹನಮಂತನೆ ಸಾಕ್ಷಿ . ಇಂತಹ ಸ್ಥಿತಿಯಲ್ಲಿ ಗಿರಿಜನ ಕಾಲಿಗೆ ಒಂದು ತೊಡಕಾಗಿದ್ದರೆ ಹನಮಂತನ ಸಂಸಾರ ಸರಿಯಾದ ದಾರಿಯಲ್ಲಿ ಸಾಗುತ್ತಿತ್ತೇನೊ ಈ ವಿಷಯದಲ್ಲಿ ದೇವರು ಕ್ರೂರಿ,ವಂಶ ಬೆಳೆಯಲೆ ಇಲ್ಲ.ಕಾಲ ಎಲ್ಲಾ ಸಮಯದಲ್ಲಿ ನಮ್ಮ ಪರವಾಗಿ ಇರಬೇಕಲ್ಲ ಕಾಲಿ ಮೆದಳು ದೆವ್ವದ ಅರಮನೆ ಅಂತಾರಲ್ಲ ,ಹಾಗೆ ಆಗಾಗ ಸ್ವಲ್ಪ ಚಿಂತೆ ಮರೆಯೋಣ ಅಂತ ಕಂಟ್ರಿ ಸರಾಯಿ ಕುಡಿಯಲು ಪ್ರಾರಂಭಿಸಿ ಕಂಟ್ರಿಯನ್ನೇ ಖರೀದಿಸಿ ದಂತೆ ವರ್ತಿಸಿದ. ತಾಳ ತಪ್ಪಿದ ದೇಹ ರೋಗದ ಗೂಡಾಯಿತು ಗಳಿಸುವ ಸಾಮರ್ಥ್ಯವೂ ಕ್ಷೀಣವಾಯಿತು .ಹೆಂಡತಿಯ ಮನೆಯವರು ಹೊರ ಹಾಕಿದರು. ಬಿಟ್ಟ ಗಂಡನ ಪಾದ ಲೇಸು ಅಂತಾರಲ್ಲ ಹಾಗೆ ಅಣ್ಣನ ಪಾದಕ್ಕ ಬಂದು ಬಿದ್ದ  ಆದರೆ ಆದದ್ದೆ ಬೇರೆ ಈಗಾಗಲೇ ನಾಲ್ಕಾರು ಮಕ್ಕಳನ್ನು ಹೊಂದಿದ್ದ  ಶಾಂತಗೌಡ ಬಸವಳಿದಿದ್ದ ಆತನನ್ನು ತೋರಿಸುವ ಶಕ್ತಿಯನ್ನು ಕಳೆದುಕೊಂಡಿದ್ದ ಮಾಡುವದೇನು ಎರಡು ಮೂರು ಬಾರಿ ತೋರಿಸಿ ಸಾಕಾಗಿ ಹನಮಂತನ ಹೆಂಡತಿಗೆ ಹೇಳಿ ಕಳುಹಿಸಿದ. ಆದರೆ ಹೆಂಡತಿ ಕಿವುಡಿಯಾಗಿದ್ದಳು ಏಕೆಂದರೆ ಬರಡುದನಕ್ಕೆ ಮೇವು ಹಾಕುವವರು ಯಾರು? ಅಂತಿಮವಾಗಿ ಅನಾತನೆಂದು ಬರೆಸಿ ಜಿಲ್ಲಾ ಆಸ್ಪತ್ರೆಯಲ್ಲಿ ಬಿಟ್ಟು ಬಂದ ಸಂಬಂಧಿಕರು ಇರುವವರನ್ನೆ ಸರಿಯಾಗಿ ನೋಡದ ವ್ಯವಸ್ಥೆಯಲ್ಲಿ ಅನಾಥನನ್ನು ಉಳಿಸಿಕೊಂಡು ಹೋಗುವ ಕಾಳಜಿಯಾದರು ಹೇಗಿದ್ದೀತು ? ವಾರ ತಿರುಗಿರಲಿಲ್ಲ ಮರಣದ ಸಿಡಿಲು ವಾರ್ತೆ ಅಣ್ಣನಿಗೆ ತಲುಪಿತು ರಕ್ತ ಸಂಬಂಧ ಬಿಡದ ಕರ್ಮ ಹೋಗಲು ತಯಾರಾದ ಶಾಂತಗೌಡ. ದೂರದ ಶಹರದಲ್ಲಿ ಹೆಣ ತರುವ ದಾರಿ ತಿಳಿಯದು ಅನಕ್ಷರಸ್ಥರಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಹೇಗೆ ಸ್ಪಂದಿಸುತ್ತಾರೆಂದು ಮಾಸ್ತರ ಸಹಾಯ  ಕೇಳಿದ ಸಹಾಯಕ್ಕೆ ತಯಾರಾಗಿದ್ದ ಶಿವಪ್ರಕಾಶ ಬಾಡಗಿ ಜೀಪ್ ತೆಗೆದುಕೊಂಡು ಲಗು ಬಗೆಯಿಂದ ಆಸ್ಪತ್ರೆಯ ಕಡೆಗೆ ತೆರಳಿದರು. ಆಸ್ಪತ್ರೆಯೋ ಜನಜಂಗುಳಿ ಎಲ್ಲಿ ಹೋಗಬೇಕನ್ನುವುದು ತಿಳಿಯುತ್ತಿಲ್ಲ ಪ್ರತಿ ಟೇಬಲ್ಲಿನ ಮಹಾಶಯರು ಸಾಗ ಹಾಕುವವರೆ. ಕಾರಣವಂತು ಸ್ಪಷ್ಟ ಸಾಧ್ಯವಾದರೆ ಪೀಕಬೇನ್ನುವವರೆ, ಒಳ್ಳೆಯವರಿಗೆ, ಸತ್ಯವಂತರಿಗೆ ಇದು ಕಾಲವಲ್ಲವೆಂದರಿತು ಸುಳ್ಳಿನ ಸಹಾಯ ಪಡೆದರು ಮಾಸ್ತರರು. ಕಳ್ಳರಿಗೆ ಸುಳ್ಳೆ ಮಲಾಮು  ಎಂದರಿತ ಮಾಸ್ತರು ಸಣ್ಣದೊಂದು ಸುಳ್ಳಿನ ಕಥೆ ಹೆಣೆದರು ಏನೆಂದರೆ ಮಾಸ್ತರರು ಸೀದಾ ಮುಖ್ಯ ವೈದ್ಯಾಧಿಕಾರಿಯ ಹತ್ತಿರ ತೆರಳಿದರು ಹೀಗೆ ಹೇಳಿದರು  " ನಾನು ಎಮ್ ಎಲ್ ಎ ಅಕ್ಕನ ಮಗ ನನ್ನನ್ನು ಕರೆದುಕೊಂಡು ಬಂದಿದ್ಧಾರೆ ಪೋನ್ ಮಾಡಿ ಕೊಡಲೆ" ಎಂದು ಹೇಳಿದರು ಮೊದಲೆ ನೀಟಾಗಿ ಡ್ರೆಸ್ ಮಾಡಿದ ಶಿವಪ್ರಕಾಶನನ್ನು ನಂಬಲು ಬಹಳ ಸಮಯ ಬೇಕಾಗಲಿಲ್ಲ ಸುಳ್ಳಿನ ಬಾಣ ಸತ್ಯದ ಮೇಲೆ ಎರಗಿತು.ಹತ್ತಾರು ಸುಳ್ಳು ಹೇಳಿ ಮದುವೆ ಮಾಡಬೇಕು ಎನ್ನುವು ಮಾತಿತ್ತು  ಆದರೆ  ಈಗ  ಮತ್ತೊಂದು ಸೇರಿತು "ಸುಳ್ಳು ಹೇಣ ತರಬೇಕು" ಎಂದು ಅಂತೂ ಮಾಸ್ತರು  ಹಣ ನೀಡದೆ ಹೆಣ ತರಲು ಯಶಸ್ವಿಯಾಗಿದ್ದರು.  ಮಾಸ್ತರರು .ಹಣ ನೀಡದೆ ಹೆಣ ತಂದದ್ದು ಸಾಧನೆ ಒಂದು ಕಡೆಯಾದರೆ ಯೋಜನೆಯೆ ಇಲ್ಲದೆ ದಾರಿಯ ಹೆಣವಾದ ಹನಮನ ಸ್ಥಿತಿಯ ಕಂಡು ನಿಜವಾಗಿಯೂ ಮನಸ್ಸಿನ  ಆಳದಲ್ಲಿ ಶಿವಪ್ರಕಾಶನಿಗೆ ತಳಮಳವನ್ನುಂಟು ಮಾಡಿತ್ತು .ಇದರ ಪರಿಹಾರಕ್ಕೆ ಹಗಲಿರಳು ಚಿಂತಿಸಿದಾಗ ತಿಳಿದ ಸತ್ಯ ಒಂದೆ ಹೈಟೆಕ್ ಆಸ್ಪತ್ರೆ ಕಟ್ಟು ವದಕ್ಕಿಂತ ಹೈಟೆಕ್ ಶಾಲೆಯನ್ನು ಕಟ್ಟಿದರೆ ಹೇಗೆ  ? ಉತ್ತರ ಯಾವಾಗ ಸಿಗುತ್ತೋ ಆ ದೇವರೆ ಬಲ್ಲ ಎಂದು ಮುನ್ನಡೆದ.

No comments:

Post a Comment

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...