ಎನ್ನ ಅಂಗಳದ ಹಾದಿ, ಯಾರು
ತುಳಿದರೇನು ? ಎಡ ಬಲಕೆ ಹೊಂಗೆ/
ಇಂಪಾಗಿ ಹಾಡು ಹಾಡತಾವು ಬೃಂಗ
ಚಿಲಿಪಿಲಿ ಬಾರಿಸತಾವು ಮೃದಂಗ.//
ತುಳಿದರೇನು ? ಎಡ ಬಲಕೆ ಹೊಂಗೆ/
ಇಂಪಾಗಿ ಹಾಡು ಹಾಡತಾವು ಬೃಂಗ
ಚಿಲಿಪಿಲಿ ಬಾರಿಸತಾವು ಮೃದಂಗ.//
ನಾನೆ ಹಾಕಿದೆ ನಲ್ಲಿಯ ನೀರಿಗೆ
ನೋಡು ನೋಡುತ್ತಿದ್ದಂತೆ ಹೊಂಗೆ/
ಬೆಳೆಯಿತು ಎತ್ತರ ಮೀರಿ ಮಾಳಿಗೆ
ನನ್ನದೆನ್ನುವ ಅಧಿಕಾರವಿದೆ ಯಾರಿಗೆ //
ಹಾರು ಹಕ್ಕಿಯು ಹಾಯ್ದು ಹೋದರೆ
ಕರೆದು ,ಹೂಮಾಲೆ ಹಾಕುವ ಕರಳು !
ದಣಿವು ಆರಿಸಿ ಸಂತೈಸುವ ನೆರಳು.
ಧರಣಿ ಕೊಡುಗೆ ನನ್ನದೆಂದರೆ ಮರಳು //
ದಣಿವು ಆರಿಸಿ ಸಂತೈಸುವ ನೆರಳು.
ಧರಣಿ ಕೊಡುಗೆ ನನ್ನದೆಂದರೆ ಮರಳು //
ಉರಿಯುವ ರವಿ ಕಿರಣದ ಸವಾಲು
ಮೂಡಣಕೆ ನಮ್ಮನೆಗೆ ನೀ ಕಾವುಲು
ಹಸು, ಹಸುಳೆ ನಿನ್ನೊಡಲ ಮಕ್ಕಳು
ಹೊಸಬಾಳಿಗೆ ಮುನ್ನುಡಿ ಬರೆದವಳು//
ಹನಿ ನೀರು ಹಾಕಿ,ಮನ ಬಾರ ಋಣ
ಮನದಲೇಳುವ ಮಲೀನಕೇನಿದೆ ಬಾಣ
ಸಾವಿರ ಸಾವಿರ ಜನರಿಗೆ ಸ್ವಚ್ಛ ಗಾಳಿ
ಜಗಕೆಲ್ಲ ತಂಪೆರದರೂ ನೀಚ ದಾಳಿ//
ಹಚ್ಚ ಹಸುರಿನ ಮಧುವನಗಿತ್ತಿ ಇವಳು
ಎನ್ನಂಗಳದ ಮಂಗಳ ಗೌರಿಯಿವಳು
ಮನೆಯ ತುಂಬುವ, ಮನ ತುಂಬುವ
ಮಧುಬನದ ಮಾಂತ್ರಿಕ ಶಕ್ತಿಯಿವಳು//
ಬಸನಗೌಡ ಗೌಡರ
No comments:
Post a Comment