ಕಂಥಕವನೇರಿ ನಡು ಇರುಳ ಸೇರಿ
ಜಗದಳುವ ತಿಳಿಯಲು ನಿನ್ನ ಸವಾರಿ
ವೃದ್ದ ,ರೋಗಿ, ಶವ, ಸನ್ಯಾಸಿ ನೋಡಿ
ಸನ್ನಿವೇಶಗಳೆ ಮನದಲಿ ಸುಳಿದಾಡಿ
ಜಗದಳುವ ತಿಳಿಯಲು ನಿನ್ನ ಸವಾರಿ
ವೃದ್ದ ,ರೋಗಿ, ಶವ, ಸನ್ಯಾಸಿ ನೋಡಿ
ಸನ್ನಿವೇಶಗಳೆ ಮನದಲಿ ಸುಳಿದಾಡಿ
ಸತ್ಯ ವರಿಯಲು ಸನ್ಯಾಸಿ ಪಯಣ //
ಮೈಯಲ್ಲ ಹಣ್ಣಾಗಿ ಕಣ್ಣು ಮಂಜಾಗಿ
ಬಾನದಂತೆ ನಡಬಾಗಿ, ರಕ್ತ ನೀರಾಗಿ
ದಂತ ಹೊರ ಬಾಗಿ, ಚರ್ಮ ಸುಕ್ಕಾಗಿ
ಬಾನದಂತೆ ನಡಬಾಗಿ, ರಕ್ತ ನೀರಾಗಿ
ದಂತ ಹೊರ ಬಾಗಿ, ಚರ್ಮ ಸುಕ್ಕಾಗಿ
ಕಾಣದು ಸತ್ಯ,ನಿಂತ ತಲೆತಿರುಕನಾಗಿ
ಕಠೋರ ತಪಸ್ಸಿಗಾಗಲಿಲ್ಲ ಯೋಗಿ//
ಕಠೋರ ತಪಸ್ಸಿಗಾಗಲಿಲ್ಲ ಯೋಗಿ//
ತುಳಿದ ಹೊಸದು ಮಧ್ಯಮ ದಾರಿ
ಕುಳಿತ ಗಯಾದ ಅರಳಿಮರದ ಕೆಳಗೆ
ಕುಳಿತ ಗಯಾದ ಅರಳಿಮರದ ಕೆಳಗೆ
ಅರಳಿತು ತನ್ನೊಳಗೆ ಜ್ಞಾನದ ಬೆಳಕು
ರಾಹುಲ ಯಶೋಧೆಯ ತೊರೆಯದೆ
ಹೇಗಾಗುತ್ತಿದ್ದ ಸಿದ್ದ ಗೌತಮ ಬುದ್ಧ //
ರಾಹುಲ ಯಶೋಧೆಯ ತೊರೆಯದೆ
ಹೇಗಾಗುತ್ತಿದ್ದ ಸಿದ್ದ ಗೌತಮ ಬುದ್ಧ //
ಮಹಾಪರಿತ್ಯಾಗದಿಂದಾದ ತಥಾಗತ
ಧರ್ಮ ಚಕ್ರವುರುಳಿತು ಭರತಖಂಡ
ದಾಟಿ ಚೀನಾ ಸಿಲೋನ ತುಂಬಾ
ದಾಟಿ ಚೀನಾ ಸಿಲೋನ ತುಂಬಾ
ಅರಳಿತು ಧರ್ಮ ಚಕ್ರ ಪ್ರವರ್ತನ
ಬೆಳಕಾಯಿತು ಏಷಿಯಾ ತುಂಬಾ //
ದುಃಖ ಸಹಜ ಆಸೆಗುದುರೆ ಏರಿದಾಗ
ಅಷ್ಟ ಮಾರ್ಗ ಕಷ್ಟವೇನು ಆಸೆ ತೊರೆದಾಗ
ಅರಿತು ತುಳಿಯಲೇಳಿದ ಸನ್ಮಾರ್ಗದ ದಾರಿ
ಸತ್ಯ ಅಹಿಂಸೆ ಹಿಡಿದು ನಡೆದಾಗ ಜಯಭೇರಿ
ಇದೆ ನೀನು ಹೇಳಿದ ಸಿದ್ಧ ಬುದ್ಧ ರಹದಾರಿ//
ಬಸನಗೌಡ ಗೌಡರ
No comments:
Post a Comment