Friday, April 23, 2021

* ಆಲಯ, ಗ್ರಂಥಾಲಯ .*.

ಮರೀಬೇಡ ಗ್ರಂಥ 
ನೀನಿರಬೇಕು ಜೀವಂತ....!
ಓದಬೇಕು ನೀ ಗುಣವಂತ.
ಬರಿ ಆಲಯವಲ್ಲ, ಪುಸ್ತಕದ ಕಂತೆ
ಇದು ಜ್ಞಾನ ಕೊಳ್ಳುವ ಸಂತೆ//

ದೇಹವಿಲ್ಲದ ಜೀವವಿರುವ             
ಸಾವಿರ ಸಂತರ ಮಕರಂದ
ಮಸಣಕೆ ಹೋಗುವ ಮುನ್ನ 
ಮಾಡಿಕೊ ಅವರನು ನಿನ್ನ ಕಾಂತ
ಸಂತೋಷ ತರುವದು ಏಕಾಂತ// 

ನೂರು ಗೆಳೆಯರ ನೂಕಾಚೆ 
ಸಾವಿರ ವೈರಿಗಳ ಸರಿಸು ಆಚೆ 
ಸಾವಿಲ್ಲದ ಅರಮನೆ ಬಾಚೀಚೆ
ಸ್ವರ್ಗದ ಮನೆ ಇರವುದೆ ಈಚೆ..! // 

ಪುಸ್ತಕದ ದಿನ ಮಾಡಿಹರು 
ಮಸ್ತಕಕೇರಿಸದ ಸೋಗಲಾಡಿಗಳು
ಸುಟ್ಟು ಸುಣ್ಣವಾಗುವ ಮೊದಲು
ಕಟ್ಟು ಸುಂದರ ಅರಿವಿನ ಮಹಲು//

ಸಾವಿರ ಜೀವಗಳ ಸೇರಿಸಿ ಹೆಣೆದರು 
ಸುಂದರವಾದ ಮಂದಿರ ಅದುವೆ ಹಂದರ
ನಮ್ಮ ರಾಮ ರಹಿಮ ಸಂತರ ಮಂದಿರ
ಸಂತರ ಸವಿನುಡಿಯ ಬೆಳಕಿನ ಚಂದಿರ //

             ಬಸನಗೌಡ ಗೌಡರ

No comments:

Post a Comment

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...