ಮರೀಬೇಡ ಗ್ರಂಥ
ನೀನಿರಬೇಕು ಜೀವಂತ....!
ಓದಬೇಕು ನೀ ಗುಣವಂತ.
ಬರಿ ಆಲಯವಲ್ಲ, ಪುಸ್ತಕದ ಕಂತೆ
ಇದು ಜ್ಞಾನ ಕೊಳ್ಳುವ ಸಂತೆ//
ದೇಹವಿಲ್ಲದ ಜೀವವಿರುವ
ಸಾವಿರ ಸಂತರ ಮಕರಂದ
ಮಸಣಕೆ ಹೋಗುವ ಮುನ್ನ
ಮಾಡಿಕೊ ಅವರನು ನಿನ್ನ ಕಾಂತ
ಸಂತೋಷ ತರುವದು ಏಕಾಂತ//
ನೂರು ಗೆಳೆಯರ ನೂಕಾಚೆ
ಸಾವಿರ ವೈರಿಗಳ ಸರಿಸು ಆಚೆ
ಸಾವಿಲ್ಲದ ಅರಮನೆ ಬಾಚೀಚೆ
ಸ್ವರ್ಗದ ಮನೆ ಇರವುದೆ ಈಚೆ..! //
ಪುಸ್ತಕದ ದಿನ ಮಾಡಿಹರು
ಮಸ್ತಕಕೇರಿಸದ ಸೋಗಲಾಡಿಗಳು
ಸುಟ್ಟು ಸುಣ್ಣವಾಗುವ ಮೊದಲು
ಕಟ್ಟು ಸುಂದರ ಅರಿವಿನ ಮಹಲು//
ಸಾವಿರ ಜೀವಗಳ ಸೇರಿಸಿ ಹೆಣೆದರು
ಸುಂದರವಾದ ಮಂದಿರ ಅದುವೆ ಹಂದರ
ನಮ್ಮ ರಾಮ ರಹಿಮ ಸಂತರ ಮಂದಿರ
ಸಂತರ ಸವಿನುಡಿಯ ಬೆಳಕಿನ ಚಂದಿರ //
ಬಸನಗೌಡ ಗೌಡರ
No comments:
Post a Comment