ಅಂಟಿಸಿಕೊಂಡು ಓಡಬೇಡ
ಉದಾಸೀನ, ಸಿನಿಕತನ ನಂಟು.
ಸೊಂಟ ಮುರಿತಾರೋ ತುಂಟಾ//
ಉದಾಸೀನ, ಸಿನಿಕತನ ನಂಟು.
ಸೊಂಟ ಮುರಿತಾರೋ ತುಂಟಾ//
ವೈದ್ಯರು ಹೇಳಿದ ಬುದ್ಧಿಯ ಮಾತು
ಬಿಸಿ ರಕ್ತದ ನಿನಗ ಕೇಳಿಸೀತು ಹ್ಯಾಂಗ
ಉಸಿರು ಕಟ್ಟಿದರೆ ಅರಿವಾಗತ್ತೊ ಆಗ/
ಕೊರೊನಾ ಕಾಲದ ಕಹಿ ಹೇಳೋದು
ಹ್ಯಾಂಗ, ಕಾಣಬೇಡರಿ ಗುಂಪಿನಾಗ
ಕೆಮ್ಮಿ ಸಾಯಿತಿರೋ ಸ್ಟೇಚರೀನಾಗ//
ಸತ್ತರೂ ಸಿಗುವುದಿಲ್ಲ ಸ್ಮಶಾನ ಜಾಗ
ಸುತ್ತಿ ಅರಿವ್ಯಾಗ ಕಟ್ಟತಾರ ಕವರಿನಾಗ
ಸಂಬಂಧಿಗಳೆ ಸೇರಿಸಲ್ಲ ಮನಿಯಾಗ//
ಸ್ಥಳಿಯ ಸರಕಾರ ದಂಡ ಹಾಕಿದರ
ದುಡ್ಡಿನ ದೊಡ್ಡ ವಾದ ಮಾಡತಾರ
ದ್ವನಿ ನಿಂತರ ಮುರದು ತೆಗ್ಗಿಗಿಡತಾರ//
ಮೂಗು ಬಾಯಿ ಮುಚ್ಚಾಕ ಮತ್ತೆ
ಮತ್ತೆ ಹೇಳಬೇಕಾ ? ಮಾನಗೇಡಿ
ಮುಖ ಮುಚ್ಚಿ ಕಳಸ್ತಾರೊ ನರಕಕ್ಕ //
ಬಸನಗೌಡ ಗೌಡರ
No comments:
Post a Comment